Wednesday, November 5, 2008

ನಗಬೇಡ!

ಆ ನೋಟ ಬೇಡ ಗೆಳತಿ,
ಈಗಲೇ ಅರ್ದ ಸತ್ತು ಹೋಗಿರುವೆ.
ಇನ್ನು ಹೆಣವಾಗಿಸದಿರು!

ನೋಟದ ಹಿಂದಲೇ ತೂರಿ ಬರುವ,
ಆ ನಗುವಂತು ಸಹಿಸಲಾಗದು,
ರಣವಾಗಿಹುದು ಎದೆಯ ಗಾಯ!

Thursday, October 23, 2008

ಕಡೆಯಾದೆ!


ಅವಳೇರುವ ಎತ್ತರಕ್ಕೆ
ಏಣಿಯಾದೆ.
ಎತ್ತರದಲಿ ನಿಂತಮೇಲೆ
ನಾ ಬೆಡವಾದೆ.
ಕಾಲ ಧೂಳಿಗಿಂತಲೂ,
ಕಡೆಯಾದೆ!

Wednesday, October 15, 2008

ಮಳೆ

ಮಾಯದ ಲೋಕವೇ ಈ ಭುವಿಯು,
ಚಿತ್ತವ ಚದುರಿಸೂ ಬಣ್ಣದ ಲೋಕವು.

ಹಸಿ ಹಸಿರು ಭುವಿಯ ಒಡಲು,
ನೋಡಲು ಮೇಲೆ ಚೆಂದದ ಕಾರ್ಮುಗಿಲು.

ಬೆಳ್ಳಿಯ ಗೆರೆ ನಡುವುದು ಹೊಳೆದಿರೆ,
ಕಳೆಯಿತು ಭುವಿಗಂಟಿದ ಕೊಳೆಯು.

ಮಳೆಯೋ ಮಳೆಯೋ ಭುವಿಗಿಳಿಯಿತು.
ಬಯಸದೆ ಬಂದ ಇನಿಯನ ಪರಿಯೂ!

Monday, October 6, 2008

ಶಂಕರಣ್ಣ ನ ನೆನಪು...!


ಮೊನ್ನೆ ಸೆಪ್ಟೆಂಬರ್ ಮೂವತ್ತಕ್ಕೆ ಶಂಕರನಾಗ್ ತೀರಿ ಕೊಂಡು ೧೮ ವರ್ಷಗಳಾಗಿ ಹೋದವು.ನಂಬಲಿಕ್ಕೆ ಆಗ್ತಾ ಇಲ್ಲ, ದಿನಗಳು ಎಷ್ಟು ಬೇಗ ಹೋಗ್ತ ಇದ್ದವಲ್ಲ!ನಾನು ಎಂಟನೇ ತರಗತಿ ಯಲ್ಲಿ ಇದ್ದೆ.ಶಂಕರ್ ನಾಗ್ ಸತ್ತು ಬಿಟ್ರು ಅಂತ ಹಡಗಲಿಗೆ ಸುದ್ದಿ ಬಂತು.ಶಂಕರಣ್ಣನ ಅಭಿಮಾನಿಗಳಮುಖ ನೋಡ್ಲಿಕ್ಕೆ ಆಗಿರಲಿಲ್ಲ.ನನಗಂತೂ ಯ್ಯಾಕ್ಷನ್ ಸಿನಿಮಾಗಳ ಹೀರೋ ಇನ್ನಿಲ್ಲವಲ್ಲ ಅನ್ನಿಸಿತ್ತು.
ಕನ್ನಡಕ್ಕೆ ಮುಂದೆ ಯಾರು 'ಕರಾಟೆ ಕಿಂಗ್'?

ಸೆಪ್ಟೆಂಬರ್ ಮೂವತ್ತು ೧೯೯೦ ಕ್ಕೆ ಕನ್ನಡದ ಒಬ್ಬ ಧೈರ್ಯ ವಂತ,ಎಂಟೆದೆ ಬಂಟ,ಕರಾಟೆ ಕಿಂಗ್, 'ಮಾಲ್ಗುಡಿ ಡೇಸ್' ನ ನಿರ್ದೇಶಕ,ಒಬ್ಬ ಅಧ್ಬುತ ದೂರದೃಷ್ಟಿ ನಾಯಕ ಇನ್ನಿಲ್ಲವಾಗಿದ್ದ.ಕೇವಲ ಕನ್ನಡದಕ್ಕೆ ಅಲ್ಲದೆ, ದೇಶ ದ ಹಿನ್ನೆಲೆಯಲ್ಲಿ ಒಬ್ಬ ಅದ್ಭುತ ನಿರ್ದೇಶಕ, ಕನ್ನಡ ಮತ್ತು ಮರಾಠಿ ರಂಗ ಭೂಮಿ ಒಬ್ಬ ಕ್ರೀಯಾಶೀಲ ನಿರ್ದೇಶಕನ್ನ ಕಳೆದು ಕೊಂಡಿತ್ತು. ಶಂಕರಣ್ಣ ಕೇವಲ ಯ್ಯಕ್ಷನ್ ಕಿಂಗ್ ಮಾತ್ರ ಆಗಿರಲಿಲ್ಲ.ಅವನೊಬ್ಬ ಹೊಸ ತನದ ಹಂಬಲ ಹೊತ್ತ ದಿಗ್ದರ್ಶಕನಾಗಿದ್ದ.ಶಂಕರಣ್ಣ ಗೆ ಕನ್ನಡ ಚಿತ್ರ ರಂಗ ದಲ್ಲಿ ಎರೆಡು ಬಯಕೆ ಗಳಿದ್ದವು.ಒಂದು ಅಣ್ಣಾವ್ರ ಸಿನಿಮಾ ನಿರ್ದೇಶನ ಮಾಡುವುದು ಮತ್ತೊಂದು ಪುಟ್ಟಣ್ಣ ನವರ ನಿರ್ದೇಶನದಲ್ಲಿ ಕೆಲಸ ಮಾಡುವುದು.ಮೊದಲನೆಯದು ಸಾಕರ ಗೊಂಡಿತು.ಆದರೆ ಎರೆಡೆನೆಯದಕ್ಕೆ ಕಾಲ ಕೂಡಿ ಬರಲಿಲ್ಲ.
ಶಂಕರಣ್ಣ ಸತ್ತು ಹೋಗಿದ್ದಾನೆ ಅಂತ ಯಾರು ಹೇಳಿದ್ದು?ಪ್ರತಿ ಆಟೋ ಡ್ರೈವರ್ ನ ಹೃದಯದಲ್ಲೊ ಅವನು ಇನ್ನೂ ಇದ್ದಾನೆ.ರಂಗಶಂಕರ ದ ಪ್ರತಿ ಪ್ರಯೋಗಗಳನ್ನು ಅಲ್ಲಿ ಗಡ್ಡ ನೇವರಿಸುತ್ತಾ ನೋಡುತ್ತಾ ನಿಂತಿದ್ದಾನೆ.ನನ್ನಂತಹ ಇನ್ನೂ ಎಷ್ಟೊ ಕನಸು ಕಾಣುವವರಿಗೆ ಅವನೇ ರೋಲ್ ಮಾಡೆಲ್ ಆಗಿದ್ದಾನೆ.ನಮ್ಮೆಲ್ಲರ ಬಾಲ್ಯ ದ ನೆನಪುಗಳ ನ್ನು ಕೆದಕಿ ಎಲ್ಲೊ ಒಂದು ಕಡೆ ಹಳೆ ಕಡತಗಳನ್ನು ತೆರೆಯುವಂತೆ ಮಾಡಿದ್ದ 'ಮಾಲ್ಗುಡಿ ಡೆಸ್' ನಲ್ಲಿ ಶಂಕರಣ್ಣ ಇದ್ದಾನೆ. ಶಂಕರಣ್ಣ ನೀ ಎಲ್ಲೂ ಹೋಗಿಲ್ಲ ಇಲ್ಲೆ ಇದ್ದೀಯಾ.ನನ್ನ ಕಥೆ ಗಳಲ್ಲಿ,ನಮ್ಮ ಮೆಟ್ರೂ ಪ್ರೊಜೆಕ್ಟ್ ನಲ್ಲಿ,ಬದುಕಿನ ಆಸಕ್ತಿಗಳಲ್ಲಿ,ಓಟದಲ್ಲಿ,ಆತೀವ ಉತ್ಸಾಹದಲ್ಲಿ,ಕನಸುಗಳಲ್ಲಿ,ಕನವರಿಕೆಗಳಲ್ಲಿ....

Friday, October 3, 2008

'ಒಂದು ಕಪ್ ಹಾಲು' (ಸಣ್ಣ ಕಥೆ)

ಅಂದು ಬೆಳಗ್ಗಿನಿಂದಲೇ ಉಪವಾಸ ವಿದ್ದಿದ್ದರಿಂದಲೇ ಏನೋ,ನೀಲಕಂಠ ನಿಗೆ ಏನೋ ಒಂದು ತೆರೆನಾದ ಸಂಕಟ.ಕೆಲಸದ ಒತ್ತಡದಲ್ಲಿ ಬರೀ ಕಾಫಿ ಮತ್ತು ಚಹಾ ಬಿಟ್ಟರೆ ಗಂಟಲಿಗೆ ಏನೂ ಇಳಿದಿರಲಿಲ್ಲ.ಮೊದಲೇ ನಿರ್ಧೆಶಕ ನ ಜವಾಬ್ದಾರಿ.ಅದು ಈ ದಾರವಾಹಿಗೆ ಪ್ರಾಯೋಜಕರಾಗುರುವರು ಕನ್ನಡ ಚಿತ್ರೋದ್ಯಮದ ಹೆಸರಾಂತ ನಿರ್ಮಾಪಕರು.ಹೀಗಾಗಿ ಈ ದಾರವಾಹಿ ಯು ನೀಲಕಂಠ ನಿಗೆ ಬಹು ಮುಖ್ಯವಾಗಿತ್ತು.ಈ ದಾರವಾಹಿ ಯಲ್ಲಿ ಕೊಂಚ ಹೆಸರು ಗಳಿಸಿದರು ಈಗಿರುವ ಹೆಸರಿಗೆ ಅದೂ ಸೇರಿ ಖಂಡಿತಾ 'ಬೆಳ್ಳಿತೆರೆ' ಗೆ ಕಾಲಿರಸಬಹುದು ಎನ್ನುವ ಲೆಕ್ಕಚಾರ ಅವನದಾಗಿತ್ತು.
ಇದೆಲ್ಲವನ್ನು ಮನದಲ್ಲಿರಿಸಿಕೊಂಡು ಅವನು ಸಿದ್ಧಪಡಿಸಿದ ಚಿತ್ರಕಥೆ ಯನ್ನು ನಿರ್ದೇಶನಕ್ಕೆ ಅಣಿಮಾಡದೆ ತಾನೆ ಕುಳಿತು ಸಾಕಷ್ಟು ಓದು,ಮಾಹಿತಿಗಳನ್ನು ಕಲೆ ಹಾಕಿ,ಮನುಷ್ಯನ ಹುಟ್ಟಿನ ಮೂಲ,ಸಂಬಂಧಗಳ ಎಳೆ,ಅವರ ನಡುವಳಿಕೆಗಳು..ಹೀಗೆ ಎಲ್ಲದರ ಬಗ್ಗೆ ಮಾಹಿತಿ ಕಲೆ ಹಾಕಿ ಬರೆಯಲು ಕುಳಿತ. ಬರೆಯುವ ಭಾಗಗಳನ್ನು ಮುಗಿಸಿದ ಮೇಲೆ ಹಂತ ಹಂತವಾಗಿ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದ.
ಕಥೆ ಹಂದರ ತಲೆಯಲ್ಲಿ ಸಿದ್ಧವಾಗಿತ್ತು.ಆ ಕಥೆ ಮೇಲಿ ತಿಳಿಸಿದ ಹರವನ್ನೂ ಒಳಗೊಂಡಿತ್ತು.ಅದಿಸ್ಟಲ್ಲದೆ ಬದುಕು,ಇಲ್ಲಿನ ಸಂಭ್ರಮ-ಸಡಗರ,ಬದುಕಲ್ಲಿನ ಅನೀರಿಕ್ಷೀತ ತಿರುವು,ಅಘಾತ -ಇವೆಲ್ಲವನ್ನೂ ಬಳಸಿ ಬೆಳೆದಿತ್ತು.ಇನ್ನೂ ಅವನಿಗೆ ಉಳಿದಿದ್ದು ದರವಾಹಿ ಯ ಹೆಸರು: ಅದಕ್ಕೆ ಅವನು ಅಲೋಚಿಸಿ ಇಟ್ಟ ಹೆಸರು - 'ಇಷ್ಟೇ ಅಲ್ಲಾ...!'.
ಆ ದಿನ ರಾತ್ರಿ ಮನೆಗೆ ಬರು ಹೊತ್ತಿಗೆ ಸುಮಾರು ಹನ್ನೊಂದು ವರೆ ಆಗಿತ್ತು.ಬೆಳಿಗ್ಗೆ ಆರು ಗಂಟೆಗೆ ಮನೆ ಬಿಟ್ಟವನು ನಡು ರಾತ್ರಿ ಮನೆಗೆ ಹಿಂತುರಿಗಿದ್ದ. ಕಾರಲ್ಲಿ ಬರುತ್ತಿರುವಾಗಲೇ ಸಂಕಟ ಅತಿಯಾಗಿತ್ತು. ದಾರಿಯುದ್ದಕ್ಕೂ ಎಲ್ಲರಿಗೂ ಮನೆಗೆ ಹೋಗುವ ಆತುರ.ಟ್ರಾಫಿಕ್ ಸಿಗ್ನಲ್ ಇದೆಯೂ ಇಲ್ಲವೂ ಅದ್ಯಾವುದನ್ನೂ ನೋಡದೇ ಒಟ್ಟಾಗಿ ಎಲ್ಲರೂ ಓಡಿದ್ದೇ ಓಡಿದ್ದು.
ಇಡೀ ಬೆಂಗಳೂರೇ ನಿದ್ರೆ ಗೆ ಜಾರುವ ಸಮಯ.ಮುಂಜಾವಿನಿಂದ ಪ್ರತಿ ದಾರಿ ಹೋಕರಿಗೂ ಮೈಯೊಡ್ಡಿ ಇನ್ನು ಆಗಲಾರದು ಎನ್ನುವಂತೆ ರಸ್ತೆಗಳು ಆಕಾಶದಲ್ಲಿನ ನಕ್ಷತ್ರಗಳನ್ನು ಎಣಿಸುವಂತೆ ಮಲಗಿದ್ದವು.ಮುಖ್ಯ ರಸ್ತೆಗಳಲ್ಲಿ ಸುಮರಾಗಿ ವಾಹನಗಳು ಕಂಡುಬಂದರೂ ಬಡವಾಣೆ ಪ್ರವೇಶಿಸಿತಿದ್ದಂತೆಯೇ ಕತ್ತರಿ ರಸ್ತೆ ಗಳಲ್ಲಿ ಆಗಸಕ್ಕೆ ಮುಖಮಾಡಿ ನಾಲ್ಕು ದಾರಿಗಳಿಗೂ ಬೆಳಕ ಚೆಲ್ಲಿ ನಿಂತ ಹ್ಯಾಲೋಜನ್ ನ ಮಬ್ಬುಗತ್ತಲು.ಹಾದಿ ತಪ್ಪಿ ಬರುವಂತೆ ಕಾಣುವ ನಾಯಿಗಳು.ಬದುಕಲ್ಲಿ ಏನೆ ಬರಲಿ ಕೇವಲ ಹುಂಬ ಧೈರ್ಯದಿಂದಲೇ ಎದುರಿಸುತ್ತೇನೆ ಎನ್ನುವಂತೆ ಕಾಣುತ್ತಿರುವ ಕೇವಲ ಲಾಠಿ ಹಿಡಿದ ಪೋಲಿಸರನ್ನು ಬಿಟ್ಟರೆ ದಾರಿಯಲ್ಲಿ ಯಾವ ನರ ಪಿಳ್ಳೆ ಯೂ ಇಲ್ಲ.ಮನೆಯ ತಿರುವಿಗೆ ಬರವಷ್ಟರಲ್ಲಿ ಮಬ್ಬುಗತ್ತಲು ಮಾಯಾವಾಗಿ ಮನೆಗಳ ಕಿಟಕಿ ಗಳಿಂದ ಹೊರಬರುತಿದ್ದ ರಾತ್ರಿ ದೀಪದ ಬೆಳಕು ಮಾತ್ರ ಇತ್ತು.ರಸ್ತೆಯ ನಾಯಿಗಳು "ಯಾರಿದು...?" ಅಂತ ತಲೆ ಎತ್ತಿ ನೋಡಿ," ಅಯ್ಯೂ ಇವ ನಮ್ಮವ !" ಅನ್ನುವಂತೆ ತಲೆಯನ್ನು ಮತ್ತೆ ಭೂಮಿಗೆ ಹಾಕಿ ಮಲುಗಿದವು.ಮನೆಯ ಬಾಗಿಲು ತೆರೆಯುವಷ್ಟರಲ್ಲಿ 'ಸಂಕಟ' ತಾರಕಕ್ಕೇರಿತ್ತು. ಮನೆಯಲ್ಲಾ ತಡಕಾಡಿದ.ತಂದಿಟ್ಟಿದ್ದ ಬ್ರೆಡ್, ಹಣ್ಣು..ಎಲ್ಲವೂ ಮುಗಿದು ಹೋಗಿತ್ತು.ಆದರೆ ರೆಫ್ರಿಜೇಟರ್ ನಲ್ಲಿ ಹಾಲು ಮಾತ್ರ ಇತ್ತು.
****************************
ಹಾಲಿನ ಬಟ್ಟಲಿನಿಂದ ಒಂದಿಷ್ಟು ಹಾಲನ್ನು ಮತ್ತೊಂದು ಚಿಕ್ಕ ಬಟ್ಟಲಿಗೆ ಬಗ್ಗಿಸಿ ಬಿಸಿ ಮಾಡಲು ಗ್ಯಾಸ್ ಸ್ಟೋವ್ ಮೇಲೆ ಇಟ್ಟ.ಆ ಹೊತ್ತಿಗಾಗಲೇ ತಲೆ ಸಿಡಿತಾ ಇತ್ತು.
"ಹಸಿವೆ ಯಿಂದ ಇರಬೇಡ್ವೂ ಸಂಕಟನೂ ಹೆಚ್ಚಾಗುತ್ತೆ ಮತ್ತೆ ತೆಲೆ ನೋವು ಶುರುವಾಗುತ್ತೆ.."
ಸುಧಾ ಹೇಳುತಿದ್ದ ಮಾತು ನೆನಪಾಯಿತು.ಮನೆಯಲ್ಲಿ ಯಾರು ಇಲ್ಲದ್ದರಿಂದಲೋ ಎನೋ, ಮನೆ ಬಿಕೋ ಎನ್ನುತ್ತ ಇತ್ತು, ಮನಸ್ಸು ಅಯೋ ಮಯವಾಗಿತ್ತು.ತಲೆ ನೋವು ವಿಪರೀತವಾಗಿ ಕಾಡಲು ಶುರುವಾಯಿತು.ಮಲಗುವ ಕೋಣೆಯ ಅಲಮಾರದಲ್ಲಿದ್ದ ಸಂಗೀತಾ ಳ ದುಪ್ಪಟ್ಟ ತೆಗೆದು ತೆಲೆಗೆ ಬಿಗಿದ.ಕೈ ಗೆ ಹಿಡಿತ ಸಿಗಲಿಲ್ಲ.
"ಇಲ್ಲಿ ಬಿಡು ನಂಗೆ,ನಾನು ಕಡ್ತೇನೆ " ತನ್ನದೇ ದುಪಟ್ಟವನ್ನು ಒಮ್ಮೆ ಗಟ್ಟಿಯಾಗಿ ಸುಧಾ ಬಿಗಿದಿದ್ದಿಳು.ಮತ್ತೊಮ್ಮೆ ಸುಧಾಳ ಮಾತು ನೆನಪಾಗಿತ್ತು.ಈಗಂತೂ ತಡೆಯಲಾಗಲಿಲ್ಲ.ತೆಳ್ಳಗೆ ಹನಿಗಳು ಕಣ್ಣಲ್ಲಿ ಸಾಲುಗಟ್ಟಿದ್ದವು.ಮನಸು ಯಾವುದೋ ಕಳೆದು ಹೋದ ಅನನ್ಯ ವಸ್ತುವಿಗೆ ವಿಲ ವಿಲ ಒದ್ದಾಡಿತ್ತು.
ಹಾಲು ಉಕ್ಕೇರಿ ಬಂತು.ಅದಕ್ಕೂಂದಿಷ್ಟು ಸಕ್ಕರೆ ಹಾಕಿ ಚಿಕ್ಕದೊಂದು ಕಪ್ ಗೆ ಸುರಿದ.ಆ ಹೊತ್ತಿಗಾಗಲೇ ಗಡಿಯಾರದಲ್ಲಿ ಗಂಟೆ ಒಂದಾಗಿತ್ತು.ರಾಜ್ ಕಪೂರ್ ಹಿಟ್ಸ ನ ಗೀತೆಗಳ ಒಂದು ಸಿಡಿ ಯನ್ನು ಸಿಸ್ಟಮ್ ಗೆ ಸಿಕ್ಕಿಸಿ ಮೆಲ್ಲಗೆ ವಾಲ್ಯೂಮ್ ಇಟ್ಟನು.
ತಲೆ ನೋವು ಮತ್ತು ಸಂಕಟಗಳೆರೆಡು ವಿಪರೀತವಾಗಿತ್ತು.ಕೈಲಿದ್ದ ಹಾಲಿನ ಕಪ್ ನ್ನು ತುಟಿಗೆ ಸೇರಿಸಿ ಒಂದು ಗುಟುಕನ್ನು ಹೀರುವಷ್ಟರಲ್ಲು ಮನಸ್ಸು ಎಲ್ಲೊ ತಿರುಗುತಿತ್ತು.ಆದರೂ ಹೊಟ್ಟೆ ತಣ್ಣಾಗಗಿತ್ತು. ಆದರೆ ಮನಸ್ಸು ಅಶಾಂತಿಯಿಂದಲೇ ನಲುಗಿತ್ತು.
"..ಮೈ ಆವಾರ ಹೂಂ...ಆವಾರ ಹೂಂ..." ಮುಖೆಶ್ ಜಿ ಯ ಮಧುರ ಕಂಠಸಿರಿ ಯಿಂದ ಹಾಡು ಹರಿಯ ತೊಡಗಿತ್ತು.ಹಾಗೆ ಗುಟುಕಿನ ಮೇಲೆ ಗುಟುಕು ಹಾಲು ಕುಡಿಯುವ ಹೊತ್ತಿಗೆ ಮನಸ್ಸು ಮಾತಾಡ ತೊಡಗಿತು.
" ಸುಧಾಳನ್ನು ಪ್ರೀತಿ ಮಾಡಿದ್ದು ಏಕೆ?"
"ಸುಧಾಳನ್ನು ಬಿಟ್ಟಿದ್ದು ಏಕೆ?"
"ಸಂಗಿತಾಳನ್ನು ಮದುವೆಯಾಗಿದಿನಿ ಇನ್ನಾದರೂ ಸುಧಾ ಳ ನೆನಪು ಬರಬಾರದು"
ಇವೆಲ್ಲವೂ ಕೇವಲ ಅವನಿಗೆ ಪ್ರೆಶ್ನೆಗಳಾಗಿರಲಿಲ್ಲ.ಅವೆಲ್ಲವೂ ಬದುಕಿನ ಪ್ರಮುಖ ನಿರ್ಧಾರಗಳ ಮೂಲ ವನ್ನೇ ಕೆದಕಿತ್ತು.
ಸುಮಾರು ಹತ್ತು ವರ್ಷದ ಹಿಂದೆ ಸಂಗೀತಾಳನ್ನು ಮದುವೆ ಯದಾಗ ಸಂಭ್ರಮ ವೆನೋ ಇತ್ತು.ಆದರೆ ಎಲ್ಲೂ ಓಂದು ಕಡೆ ಎಲ್ಲವನ್ನು ಸಂಗೀತಾಳ ಮುಂದೆ ಹೇಳಿಕೊಳ್ಳಬೇಕೆನ್ನಿಸುತ್ತಿತ್ತು. ಆದರೆ ಕಾಲ ಕೂಡಿ ಬರಲಿಲ್ಲ.ಈಗ ಅವರಿಬ್ಬರಿಗೂ ಆರು ವರ್ಷದ ಮಗು 'ಕೃಷ್ಣ'.ಸಂಸಾರ ಚೆಂದಾಗಿದೆ.ಸಂಗಿತಾಳು ಅಷ್ಟೆ.ಹೀಗೆ ಯಾವತ್ತಾದರೂ ಒಂಟಿಯಾಗಿದ್ದಾಗ ಹಳೆಯ ನೆನಪುಗಳು ಅವನ್ನು ಕೊರೆಯಲಿಕ್ಕೆ ಶುರು ಮಾಡುತ್ತಿದ್ದವು.
ಕಪ್ ನಲ್ಲಿದ್ದ ಹಾಲು ಮುಗಿತಾ ಬಂತು.ಆದ್ರೆ ಸಂಕಟ ಹಾಗೆ ಇತ್ತು.ನಿಲಕಂಠ ನಿಗೆ ಅಮ್ಮ ಹೇಳುತಿದ್ದ ಮಾತು ನೆನಪಿಗೆ ಬಂತು " ಒಂದು ಕಪ್ ಹಾಲು ಕುಡಿ ಸಂಕಟವಿದ್ದರೆ,ಕಡಿಮೆ ಯಾಗುತ್ತೆ...".ಹಾಲೂ ಕುಡಿದಾಗಿತ್ತು,ಆದ್ರೆ ಸಂಕಟ ಹಾಗೇ ಇತ್ತು.

Wednesday, October 1, 2008

...ಯಕ್ಷಗಾನ

...ಮುಂದಿನ ಕೆಲವು ದಿನಗಳ ನಂತರ ನಮ್ಮೆನೆಯವರೆಲ್ಲಾ ಸೇರಿ ಕೊಂಡು
ಇಡುಗುಂಜಿ ಸಿದ್ದಿ ವಿನಾಯಕ ನ ದರ್ಶನಕ್ಕೆ ಹೋದೆವು.ನನ್ನ ಅಕ್ಷರ ಸಹ ಹಿಡಿದಿಟ್ಟಿದ್ದು ಅಲ್ಲಿನ ಹಸಿರು,ಆ ಬೆಟ್ಟ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಊರು ಎನ್ನುವ ಹೆಸರಿದ್ದರೂ ಕೇವಲ ನಾಲ್ಕಾರು ಮನೆಗಳ ಕಾಡಿನ ಜೀವನ.ನನಗೆ ಆಗಲೇ ಅಲ್ಲಿಯ ಜೀವನ ಅಪ್ಯಾಯಮಾನ ವಾಗಿ ಹೋಯಿತು.ಕಣ್ಣು ತುಂಬಿ ಕೊಂಡು ಬಂದೆ.ಆದರೆ ನನ್ನ ಮತ್ತು ನನ್ನನ್ನೇ ಆ ಪರಿಸರ ಮತ್ತು ಎಲ್ಲಕ್ಕಿಂತ ಮಿಗಿಲಾಗಿ 'ಯಕ್ಷಗಾನ' ಆವರಿಸಿ ಬಿಟ್ಟಿತ್ತು.ನನಗೆ ಆ ಗುಂಗಿ ನಿಂದ ಹೊರಬರಲು ಆಗಲೆ ಇಲ್ಲ.ಇದಲ್ಲೆವನ್ನು ತಣಿಸಿಲೆಂದೆ ಏನೂ ಗೊತ್ತಿಲ್ಲ 'ಚಂದನ' ವಾಹಿನಿ ಯಲ್ಲಿ ಪ್ರಸಾರ ವಗುತ್ತ ಇದ್ದ 'ಯಕ್ಷಗಾನ' ತಪ್ಪದೆ ನೊಡುತ್ತಾ ಇದ್ದೆ.
ನಂತರ ದ ದಿನಗಳಲ್ಲಿ ನನಗೆ ಕೆರೆಮನೆ ಶಂಭು ಹೆಗಡೆ ಯವರ ವಕ್ತಿತ್ವ ದ ಪರಿಚಯ ವಾಯಿತು.ಅವರನ್ನೆ ಮತ್ತು ಸಂಪೂರ್ಣವಾಗಿ 'ಯಕ್ಷಗಾನ' ಕ್ಕೆ ಮೀಸಲಿಟ್ಟ ಅವರ ಕುಟುಂಬ ನನಗೆ ಈ ಜಾಗತೀಕರಣ ದ ಬೆನ್ನಲ್ಲಿ ಬೆರಗಾಗಿತ್ತು.
ಹೀಗೆ ನನಗೆ ಗೊತ್ತಿಲ್ಲದೆ 'ಯಕ್ಷಗಾನ' ನನ್ನನ್ನ ಆವರಿಸಿ ಬಿಟ್ಟಿದೆ.

Monday, September 29, 2008

ಯಕ್ಷಗಾನ ನಂಗೆ ಯ್ಯಾಕೆ ಇಷ್ಟವಾಗುತ್ತೆ?

ಯಕ್ಷಗಾನ ನಂಗೆ ಯ್ಯಾಕೆ ಇಷ್ಟವಾಗುತ್ತೆ?ಇದನ್ನು ನನಗೆ ನಾನೆ ನೊರಾರು ಬಾರಿ ಕೆಳಿಕೊಂಡಿದ್ದೇನೆ.
ಉತ್ತರ ಸಿಕ್ಕಿಲ್ಲ.ಆದ್ರೂ ಅದು ಯ್ಯಾಕೆ ನಂಗೆ ಇಷ್ಟವಾಗುತ್ತೆ ಅಂತ ನನ್ನನ್ನ ನಾನು ಕೇಳಿ ಕೊಳ್ಳುತ್ತಲೇ ಇದ್ದೇನೆ.
ಹುಟ್ಟಿದ್ದು ಬಟ್ಟ ಬಯಲ ಸೀಮೆ ಬಳ್ಳಾರಿ ಜಿಲ್ಲೆಯಾದರು ನನ್ನ ಊರು ಎಲ್ಲೂ ಒಂದು ಕಡೆ ಹಸಿರಿನಿಂದ ತುಂಬಿದೆ.ಬೇಸಿಗೆ ಯ ಒಂದು ಕಾಲದಲ್ಲಂತೂ ಹಾದಿ ತುಂಬ ಮಲ್ಲಿಗೆ 'ಘಮ'.ಅದುವೇ ನನ್ನೂರು 'ಹೂವಿನ ಹಡಗಲಿ'! ಹಂಪಿ ಯ ವಿರುಪಾಕ್ಷನ ಪೂಜೆ ಗೆ ಇಲ್ಲಿಂದಲೇ ಮಲ್ಲಿಗೆ ಸರಬರಾಜು ಅಗಿತ್ತಿತ್ತು ಎಂದು ಇದಕ್ಕೆ 'ಹೂವಿನ ಹಡಗಲಿ' ಅನ್ನುವ ಹೆಸರು ಬಂತು ಎನ್ನುವ ಓಂದು ಮಾತಿದೆ.ಈ ಊರನ್ನು ರಬ್ಬಲಾಂಬ ಎನ್ನುವ ರಾಣಿ ವಿಜಯನಗರದ ಅರಸರ ಸಾಮಂತೆ ಯಾಗಿ ಆಳಿದ್ದಳು.ಹೀಗೆ ಹತ್ತು ಹಲವು ಕಥೆ ಗಳು ನನ್ನೂರ ಬಗ್ಗೆ ಇವೆ ಅವನ್ನೇ ಓಂದು ಕಥಾ ಪುಂಜ ವಾಗಿ ಒಮ್ಮೆ ಹೇಳಿಕೊಳ್ಳುತ್ತೇನೆ.
ಆದರೆ ಈಗಿನ ನನ್ನ ಪ್ರೆಶ್ನೆ 'ಯಕ್ಷಗಾನ' ನನ್ನ ಈ ಪರಿಯಾಗಿ ಕಾಡುವುದು ಏಕೆ?ಮೇಲಿ ಹೇಳಿದ ಎಲ್ಲಾ ಪೀಠಿಕೆ ಯಿಂದ ಅರ್ಥ ವಾಗುತ್ತೆ ನಮ್ಮೂರಿಗೂ 'ಯಕ್ಷಗಾನ'ಕ್ಕೂ ಯಾವುದೇ ಸಂಬಂಧವಿಲ್ಲ ಅಂತ.'ಯಕ್ಷಗಾನ' ಉತ್ತರ ಕನ್ನಡ,ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜೀವ ನಾಡಿ. ಇಂದಿಗೂ ದೇಶ ವಿದೇಶ ಸುತ್ತು ತ್ತಿರುವಗೆ ತಾಯ ಮಡಿಲ ಸುಖ ಕೊಡುವುದು ಇದೇ 'ಯಕ್ಷಗಾನ'.'ತೆಂಕತಿಟ್ಟು' ಮತ್ತು 'ಬಡಗತಿಟ್ಟು' ಎನ್ನೋ ಎರೆಡು ವಿಧ ಗಳಿವೆ ಅಂತ ಕೇಳಿದ್ದೇನೆ. ಆ ಎರೆಡು ವಿಧಗಳ ಬಗ್ಗೆ ನಡುವೆ ಇರುವ ಸ್ವಲ್ಪ ವೆತ್ಯಾಸ ವೂ ಗೊತ್ತು.ನಮ್ಮೂರಿಂದ ಹೊದೆಡೇ ಹಾವೇರಿ ಜಿಲ್ಲೆ ದಾಟಿದರೆ ನಮಗೆ ಸಿಗುವುದೇ 'ಉತ್ತರ ಕನ್ನಡ' ಜಿಲ್ಲೆ.ಅದೇ ಜಿಲ್ಲೆ ಬಳಸಿ ಕೊಂಡು ಹೋದರೆ 'ಉಡುಪಿ' ಮತ್ತು 'ದಕ್ಷಿಣ ಕನ್ನಡ' ಜಿಲ್ಲೆಗಳು ದೊರೆಯುತ್ತವೆ.
'ಯಕ್ಷಗಾನ' ದ ಬಗ್ಗೆ ಮೊದಲು ಕೇಳಿದ್ದು ಶಿವರಾಂ ಕಾರಂತರ ಹೆಸರು ಕೇಳಿದಂದು.ಹೌದು!ಅವರು ಆಹೊತ್ತಿ ಗಾಗಲೇ 'ಯಕ್ಷಗಾನ'ದಲ್ಲಿ ಸುಮಾರು ಕೆಲಸ ಮಾಡಿದ್ದರು ಕಾರಂತರು.ನನಗೆ ಆಗ ಸುಮಾರು ಹತ್ತೂ ಹನ್ನೆರೆಡೊ ವರ್ಷ.ಅದಾದ ನಂತರ ನಮ್ಮೋರಲ್ಲೇ ನಮ್ಮೂರಿನ ಕೆಲವು ಹವ್ಯಾಸಿ ತಂಡ ನಡೆಸಿಕೊಟ್ಟ 'ಬಯಲಾಟ' ನೋಡಿದ್ದೆ.ಅದಾಗಲೇ ನಮ್ಮ ಭಾಗದಲ್ಲಿ 'ಬಯಲಾಟ' ಅವಸಾನ ದ ಅಂಚಿಗೆ ತಲುಪಿತ್ತು.ಬಹುಶಃ ಈ ಹೊತ್ತಿಗಾಗಲೇ ಆ ತಂಡ ದ ಹಿರಿಯ ತಲೆಗಳು ಇಲ್ಲದಾಗಿದ್ದಾವೂ,ಹೊಸಬರಿಗೆ ಅವೆಲ್ಲದರ ಬಗ್ಗೆ ತಾತ್ಸರ.ಈಗ ಆ ವೇಷ ಭೊಷಣ ಗಳು ಆ ಹಿರಿಯ ತಲೆಗಳ ಮನೆ ಜಂತಿ ಯ ಮೇಲೆ ಬಣ್ಣ ಕಳೆದು ಕೊಂಡು ತೂತು ಬಿದ್ದು ಧೂಳು ಹಿಡಿದು ಹಾಳಾಗುವ ಹಾದಿಯಲ್ಲಿದ್ದಾವು.
ಆ ಬಯಲಾಟ ನೋಡಿದಾಗ ಯ್ಯಾರು ಹೇಳಿದ್ದು ನೆನಪಿದೆ'..ಯಕ್ಷಗಾನ ಅಂದರೆ ಅದೂ ಹೀಗೆ ಇರುತ್ತೆ .." ಅಂತ.ಆ ದಿನದಿಂದಲೇ ನನಗೆ ಶಿವರಾಂ ಕಾರಂತರ ಷ್ಟೇ ಆಸಕ್ತಿ ಯ ವಿಷಯವಾಗಿ ಯಕ್ಷಗಾನ ನನ್ನಲ್ಲಿ ಕೊರೆಯಲಿಕ್ಕೆ ಶುರುಮಾಡಿತು.ಪತ್ರಿಕೆ,ಪುಸ್ತಕ ದಲ್ಲಿ ಬರುವ 'ಯಕ್ಷಗಾನ' ಸಂಬಂಧಿ ವಿಷಯಗಳನ್ನು ಶ್ರದ್ಧೆ ಯಿಂದ ಓದುತ್ತ ಇದ್ದೆ.ಆಗಲೇ ನನ್ನೊಳಗೆ 'ಯಕ್ಷಗಾನ' ದ ಜೊತೆ ಒಂದು ತೆರೆ ನಾದ ಸಂಬಂಧ ಶುರುವಾಯಿತು.ಅಷ್ಟೇ ಅಲ್ಲದೇ ಕೃಷಿ ಯಷ್ಟೆ 'ಯಕ್ಷಗಾನ' ವನ್ನೂ ಹಚ್ಚಿ ಕೊಂಡಿರುವ ಹವ್ಯಾಕ ಸಮುದಾಯ ದ ಬಗ್ಗೆಯೂ ಆಸಕ್ತಿ ಹುಟ್ಟಿತು....

Tuesday, September 9, 2008

ಮುಗಿಯದ ಮಾತು...!

ಮುಗಿಯದ ಮಾತು ನೋರಿಹವು,
ನಮ್ಮಿಬ್ಬರ ನಡುವೆ.
ಬತ್ತಿ ಹೋಗಿಹುದು ಒಲವು,
ಹಮ್ಮು-ಬಿಮ್ಮು ಗಳ ನಡುವೆ.


ನೂರೊಂದು ಕೂಣಿಯುತಿಹವು,
ಉತ್ತರವಿಲ್ಲದ ಪ್ರೆಶ್ನೆಗಳು.
ಕೂಗಿ ಕೆಳಲು ದನಿ ಇರಲಿಲ್ಲ,
ಸೂರೆ ಮಾಡಿದ್ದವು ಭಗ್ನ ಕನಸುಗಳು.

ತಿರುಗಿಯೂ ನೋಡದೆ ಹೊರಟು ಹೋದೆ,
ನಾನಲ್ಲೆ ನಿಂತಿದ್ದೆ ನೀಬರುವೆ ಎಂದು!
ದಿನಗಳೇ ಉರುಳಿದರು ಬಾರದೆ ಹೋದೆ.
ನೀ ಸುಖವ ಕಂಡಿದ್ದೆ ಮತ್ತೊಬ್ಬರ ತೆಕ್ಕೆಯಲಿ ಮಿಂದು.

Monday, September 1, 2008

ಯಾರು ಹಿತವರು...?(ಒಂದು ಸ್ವಗತ)

"ಪ್ರದೀಪ್, ಇಲ್ಲಿ ಏನೂ ಇಲ್ಲ!" ಅಂತ 'ಪೆಲ್ಲಿ'ಹೇಳಿ ಮಾತು ನಿಲ್ಲಿಸಿದ.
ಪೆಲ್ಲಿ ನನ್ನ ಬಾಲ್ಯ ಸ್ನೇಹಿತ.ಹಡಗಲಿಯವನು.ಅವನ ಹೆಸರು ಪ್ರಹ್ಲಾದ,
ಆದ್ರೆ ನಮ್ಮ ಬಾಯಲ್ಲಿ ಅದು 'ಪೆಲ್ಲಿ' ಆಗಿದೆ.ಹಾಗೆ ಅವನು ಹೇಳಿದಾಗ,
ನಾನು ಅವನ ಮುಂದೆ ಹೇಳಲೇಬೇಕೆಂದು ಕೊಂಡ ಅದೇ ಮಾತು ಹೇಳಲಾಗದೆ ಸುಮ್ಮನೆ ಮನದಲ್ಲೆ ನಕ್ಕು ಮಾತನ್ನು ಮುಂದುವರೆಸಿದೆ,
"ಹೌದು! ಪೆಲ್ಲಿ ಅಲ್ಲಿಯೂ ಏನೂ ಇಲ್ಲ! ಆ ಬೆಂಗಳೂರಿನಲ್ಲಿ.."ಅಂದೆ.
ಅವನ ಅರ್ಥದಲ್ಲಿ ನಮ್ಮೂರಲ್ಲಿ(ಹೂವಿನ ಹಡಗಲಿ) ಗಿಜಿ ಗಿಜಿ ಎನ್ನುವ ಟ್ರಾಫಿಕ್ ಇಲ್ಲ,ದಿನ ನಿತ್ಯ ದ ಉದ್ದುದ್ದದ ಪ್ರಯಾಣ ವಿಲ್ಲ,ಹೆಜ್ಜೆ ಹೆಜ್ಜೆ ಗೂ ಕಾಣ ಸಿಗುವ ಪಿಜ್ಜಾ ಕಾರ್ನರ್ ಗಳಾಗಲಿ,ಚೈನಿಸ್ ಸೆಂಟರ್ ಗಳಾಗಲಿ,ದೊಡ್ಡದೊಡ್ಡ ಷಾಪಿಂಗ್ ಮಾಲ್ ಗಳಾಗಲಿ,ಹೇಳಲಿಕ್ಕೆ ಬಾರದಂತಹ ಬಹು ದುಬಾರಿಯ ಅಂಗಿ ಪ್ಯಾಂಟ್ ಗಳ ಬ್ರಾಂಡೆಡ್ ಷೋರೂಂ ಗಳಾಗಲಿ ಇಲ್ಲ,'ಕೊಳ್ಳು ಬಾಕತನ'ವನ್ನೇ ಒಂದು ತೆರೆನಾದ ಚಟವಾಗಿ ಪರಿವರ್ತಿಸುತ್ತಿರುವ ಏಟಿಮ್ ಸೆಂಟರ್ ಗಳಾಗಲಿ ಇಲ್ಲ.ಇವೆಲ್ಲಕ್ಕಿಂತ ಮುಖ್ಯವಾಗಿ ಕಣ್ಣಿಗೆ ಚಮಕ್ ಚಮಕ್ ಅನ್ನಿಸುವಂತೆ ಮೈಮಾಟವನ್ನೇಲ್ಲಾ ತೋರಿಸಿಕೊಂಡು ಅಡ್ಡಾಡುತ್ತಿರುವ ಲಲಾನಮಣಿಗಳಿಲ್ಲ.ಮಬ್ಬುಗತ್ತಲಲ್ಲಿ ಮೈಗೆ ಮೈ ಅಂಟಿಸಿಕೊಂಡು ಬೀರನ್ನು ಹೀರುವ
'ಪಬ್' ಗಳಿಲ್ಲ.ಹಾಗಂತ ಅವನ ಮಾತಿನಿಂದಲೇ ನನಗೆ ತಿಳಿದು ಹೋಯಿತು.
ಬೆಂಗಳೂರಿ ನಿಂದ ನೂರಾರು ಮೈಲಿ ದೊರದಲ್ಲಿರುವ ಅವನು ಬೆಂಗಳೂರಿಗೆ ಬರುವುದು ಆಗೊಮ್ಮೆ ಈಗೊಮ್ಮೆ.
ಯಾವುದು ಕಛೇರಿಯ ಕೆಲಸಕ್ಕೂ, ಅಥವಾ ತನ್ನ ಸಂಬಂಧಿ ಕರನ್ನು ಕರೆದುಕೊಂಡು ಬೆಂಗಳೂರಿಗೆ ಬರುವುದು ಬಿಟ್ಟರೆ,ಅವನಿಗೆ ಬೆಂಗಳೂರು ತುಂಬಾನೆ ಅಪರಿಚಿತ.ದಿನ ನಿತ್ಯ ಸಾವಿರಾರು ಮಂದಿ ನಸುಕಿನಿಂದಲೇ ಮೆಜೆಸ್ಟಿಕ್ ನ್ನು ತುಳಿಯುವ ಜನರಲ್ಲಿ ಇವನೂ ಒಬ್ಬ. ಅಷ್ಟೇ!
ಖಂಡಿತಾ! ಪೆಲ್ಲಿ ಯಂತಹ ಸಾವಿರಾರು ಜನರಿಗೂ ಬೆಂಗಳೂರಿನ ಬಗ್ಗೆ ಈಗಲೂ ಒಂದು ಬೆರಗು,ಕೂತುಹಲ,ಆಕರ್ಷಣೆ ಇದೆ.ಬಹುಶಃ ಇದೆಲ್ಲದರ ಬೆನ್ನ ಹಿಂದೆ ಬಿದ್ದೆ ನಾನು ಬೆಂಗಳೂರಿಗೆ ಬದಿದ್ದು.ಏನೇನೂ ಮಾಡಿದೆ. ನನಗೆ ಈಗೀಗ ಅನ್ನಿಸ್ತಾಇದೆ 'ನಾನು ನನಗಲ್ಲದೆ ಇನ್ನ್ಯಾರಿಗೂ ನನ್ನನ್ನ ಮತ್ತು ನನ್ನ ಕೆಪಬಲಿಟಿಸ್ ನ್ನು ಪ್ರೂವ್ ಮಾಡಬೇಕಾಗಿತ್ತು.ಒಟ್ಟಾಗಿ ನಾನು ನನ್ನ ಬದುಕನ್ನು ಬದುಕಲಿಲ್ಲ.
ನನಗನ್ನಿಸುತ್ತಾ ಇತ್ತು.ಈ ಊರಲ್ಲಿ ಎಲ್ಲಾ ಇದೆ ಯಲ್ಲ?ಟ್ರಾಫಿಕ್ ನ ದೂಳು ಇಲ್ಲ,ಉದ್ದುದ್ದದ ಪ್ರಯಾಣ ವಿಲ್ಲ, ಜಗ್ಗ ಜನ ಎನ್ನಿಸುವಂತ ರಸ್ತೆಗಳಿಲ್ಲ.ಇವೆಲ್ಲಕ್ಕಿಂತ ಹೆಚ್ಚಾಗಿ ಕೃತ್ರಿಮತೆ ನನಗೆ ಎಲ್ಲೂ ಕಾಣಿಸಲಿಲ್ಲ.ಇವರೆಲ್ಲಾ ತಮಗೋಸ್ಕರವೇ ಬದುಕಿತಿದ್ದಾರೆ ಅಂತ ಅನ್ನಿಸುತ್ತ ಇತ್ತು.
ಊರಿಂದ ಒಂದಿಷ್ಟು ದೊರ ಹೊದೆಡೆ ಸಾಕು ಹಸಿರು.ಕಣ್ಣು ತಂಪಾಗುತ್ತೆ.ಬೆಂಗಳೂರಿನ ಚಮಕ್ ಚಮಕ್ ಗಿಂತಲೂ ಅಲ್ಲಿನ ಸ್ವಚ್ಛಂದ ಗಾಳಿ ಏನೋ ಒಂದು ತರಹದ ಹೇಳಲಿಕ್ಕೆ ಬಾರದಂತಹ 'ಮಜಾ' ಕೊಡುತ್ತೆ.ಆ ಊರಿಗೆ ಹೋದಾಗ ನನಗೆ ಸಿಗುವ ಸಂತೋಷ ಬಹುಶಃ ,ತಿಂಗಳ ಕೊನೆಯಲ್ಲಿ ನನ್ನ ಎಸ್ ಬಿ ಅಕೌಂಟಿ ಗೆ ಬಂದಾಗ ಆಗುವ ಸಂತೋಷ ಕಿಂತಲೂ ಅದು ಹೆಚ್ಚಾಗಿತ್ತು.
ಮಾತು ಮಾತಿ ಗೂ ಅಗತ್ಯ ವಿರಲಿ ಇಲ್ಲದೆ ಇರಲಿ.thanks,sorry,no issues, pardom me ,fine...ಶಬ್ದಗಳಿಂದ ಬೇಸತ್ತು ಹೋಗಿದ್ದೀನಿ.ನನಗೆ ಇಷ್ಟವಿರಲಿ ಇಲ್ಲದೆ ಇರಲಿ ಕೊನೆಗೆ ನನ್ನ ಅಸ್ತಿತ್ವಕ್ಕಾಗಿಯಾದರೂ ಅಥವಾ ನನ್ನ ದೊಡ್ಡಸ್ತಿಕೆ ಯನ್ನು ತೋರಿಸಿಕೊಳ್ಳುವುದಕ್ಕಾದರೂ ನಾನು ಆಡಲೇ ಬೇಕಾಗಿರುವ ಸಣ್ಣ ಸಣ್ಣ ಆಟ,ನಾಟಕಕ್ಕಿಂತಲೂ ಸಂಕೀರ್ಣವಾಗಿರೋ ನಾಟಕಗಳು,ತರಾವರಿ ವರಸೆಗಳು,ಗುಂಪುಗಾರಿಕೆ,ನನ್ನ ಬಲಾಢ್ಯವನ್ನು ಪ್ರದರ್ಶಿಸುವುದಕ್ಕಗಿ ಇನ್ನೊಬ್ಬ ನ 'ಕಾಲು ಎಳೆಯುವುದು' ಇವಿಷ್ಟೂ ಅಲ್ಲಿ ಇರಲಿಲ್ಲ!.
ಇದನ್ನೆಲ್ಲಾ ಅವನಿಗೆ ಅರ್ಥ ಮಾಡಿಸಿ ಹೇಳಬೇಕೆಂದು ಕೊಂಡೆ,ಆದರೆ ಅದನ್ನೆಲ್ಲಾ ತಿಳಿಸಿ ಹೇಳುವ ವ್ಯವಧಾನವನ್ನೂ ಬೆಂಗಳೂರು ಬಸಿದು ಬಿಟ್ಟಿತ್ತು!
ಇದೆಲ್ಲಾ ನಾನು ನಾನೇ ಆಡಿ ಕೊಂಡ ಮಾತುಗಳು.
"ಪ್ರದೀಪ್ ಏನೇ ಆದ್ರೂ ನಾನು ಆರಾಮ ಗೆ ಇದ್ದೀನಿ..." ಅಂತ ಮನಸ್ಸಿಂದ ಹೇಳಿದ್ದ.ಆ ಮಾತನ್ನು ಹೇಳಿ ಮುಗಿಸಿದ ಮೇಲೆ ಅವನು ನಕ್ಕನೊ ಇಲ್ಲವೋ ಗೊತ್ತಿಲ್ಲ ಆದರೆ ನನಗೆ ಅವನೆಲ್ಲೋ ನಕ್ಕಿದ್ದಾನೆ ಅಂತ ಅನ್ನಿಸಿತು.
ಇದೆಲ್ಲ ನಡೆದದ್ದು ನಾನು ಮೊನ್ನೆ ನಮ್ಮೊರಿಗೆ ಹೂದಾಗ!

Friday, July 11, 2008

ನೀನಿಲ್ಲದೆ?

ಬಿಟ್ಟಿ ಹೋದೆ ನಡು ರಾತ್ರಿಯ,
ದಟ್ಟ ಅರಣ್ಯದಲಿ!
ಬದುಕಿ ಬರುವ ಆಸೆ ಇರಲಿಲ್ಲ-
ನಿನಗಾದರೂ ತೋರಿಸ ಬೇಕಿತ್ತು,
ನೀನಿಲ್ಲದೆ ನಾ ಬದುಕಬಲ್ಲೆನೆಂದು.
ಇನ್ನೂ ಚೆಂದಾಗಿ ಬಾಳಬಲ್ಲೆನೆಂದು.

Thursday, July 3, 2008

ಕಾಡ ಸುಮದ ಪ್ರೀತಿ....!


ಅಲ್ಲಿ ಮಾತಿರಲಿಲ್ಲ.ಬರೀ ಮಾತು ಏನು? ಅಲ್ಲಿ ಏನು ಇರಲಿಲ್ಲ.
ಒಂದು ಪ್ರೀತಿ ಅನಾಥ ವಾಗ್ತ ಇದೆ ಅಂತ ಇಬ್ಬರಿಗೂ ಅನ್ನಿಸಲಿಲ್ಲ.
ಮುಗಿಚಿ ಬಿದ್ದಿತ್ತು ಪ್ರೀತಿ.ಅರ್ಥವಿಲ್ಲದ ಅಹಂಕಾರದ ನಡುವೆ ಗಂಧವೇ ಇಲ್ಲದ ಹಮ್ಮಿನಲ್ಲಿ.
ಅವರಿಬ್ಬರೂ ಊಹಿಸಿರಲಿಲ್ಲ ಅದು ಅವರಿಬ್ಬರ ಪ್ರೀತಿಯು ಕೊನೆಯಾದ ಕ್ಷಣವೆಂದು.ಎರೆಡು ವರುಷದ ತೀವ್ರ ಪ್ರೀತಿ
ಎಲ್ಲವನ್ನು ಕಳೆದುಕೊಂಡು ಹೆಣವಾದ ಕ್ಷಣ!
"ಇನ್ನೆಂದು ನಾ ನಿನ್ನ ಮಾತಡಿಸಲ್ಲ.."
......
............
............
"...ಮುಂದಿನ ನಮ್ಮ ಭೇಟಿ ಯಾವಾಗ...?"
"ನಾನು ಮನಸ್ಸು ಮಾಡಿದಾಗ......"

ಇಷ್ಟೆ ಇದೆ ಕಡೆಯ ಮಾತು.ಅನಂತರದ ದಿನಗಳು ದಾರುಣ ವಾಗಿದ್ದವು.ಇಬ್ಬರಿಗೂ.ಹತ್ತು ವರುಷ ಗಳು ಕಳೆದವು.ಯಾರ ಬಳಿಯೂ ಹೇಳಲಾಗದು.ಹೇಳಬೇಕೆನ್ನಿಸಿದರೂ.ಅರ್ಹರಾದವರು ಯಾರು ಅನ್ನೊ ಅನುಮಾನದಲ್ಲೇ ಬದುಕ ಕವಲು ದಾರಿಯಲ್ಲಿ ಸಾಗಿತ್ತು.ಇಬ್ಬರೂ ಬದುಕ ಕಟ್ಟಿ ಕೊಳ್ಳ ಹತ್ತಿದರು.
" ಈಗ ನಂಗೆ ನಿನ್ನ ಅವಶ್ಯಕತೆ ಇಲ್ಲ.."
"I am the creator"
ನಿಜವಾಗಿಯೂ ಯಾರು ಯಾರಿಗೂ ಅನಿವಾರ್ಯ ವೂ ಆಗಿದ್ದಿಲ್ಲ.ಆವಶ್ಯಕವೂ ಆಗಿದ್ದಿಲ್ಲ.ಅದಿಷ್ಟೂ ಅಪ್ರಬುದ್ಧ ಮನಸ್ಸಿನ ಅಪಕ್ವ ನಿರ್ಧಾರವಾಗಿತ್ತು!ಆ 'ಪ್ರೀತಿ..' ಎನ್ನುವುದಕ್ಕೂ ಮುಂಚೆ ಅವಿರಿಬ್ಬರು ಅರಾಮಾಗೆ ಇದ್ದರು.ಅಸಲಿಗೆ ಅವರು ತಮ್ಮ ತಮ್ಮ ಬದುಕನ್ನು ತಾವು ಹಳಿಗೆ ತಂದರು .ಕಟ್ಟೀ ಕೊಂಡರು.
ಜಗತ್ತಿನ ಯಾವ ಯಾವ ಮೂಲೆ ಯಲ್ಲಿ ಇದ್ದರೆಂದು ಇಬ್ಬರಿಗೂ ಗೊತ್ತಲ್ಲಿದಂತೆ ಬದುಕಿನ ಓಟದಲ್ಲಿ ಬಿದ್ದುಬಿಟ್ಟರು.ಅವಳಿಗೆ ಒಂದು ಗಂಡು ನೋಡಿ ಮನೆಯವರು ವಯಸ್ಸಿಗೆ ಮದುವೆ ಮಾಡಿದರು.ಇವನ ಮನೆಯವರು ಅಷ್ಟೆ ತಕ್ಕ ವಯಸ್ಸಿಗೆ ಮದುವೆ ಮಾಡಿದರು.ಇಬ್ಬರದು ಬೇರೆ ಬೇರೆ ಪುಟ್ಟ ಪುಟ್ಟ ಸಂಸಾರ.ಒಂದೇ ಊರಲ್ಲಿ ಇಬ್ಬರೂ ಇದ್ದರೂ ಎದುರು ಬದುರಾಗುವ ಸಂದರ್ಬ ಬರಲಿಲ್ಲ!
ಹೌದು! ಮುಂದೆಂದು ಅವರಿಬ್ಬರೂ ಒಬ್ಬರೊನ್ನೊಬ್ಬರು ಮಾತಡಿಸಲಿಲ್ಲ.ಒಂದು ಸಣ್ಣ ಭೇಟಿ ಗೂ ಮನಸ್ಸು ಮಾಡಲಿಲ್ಲ!
ಕೇಳಬೇಕೆಂದು ಅಂದುಕೊಂಡಿದ್ದ ಪ್ರೆಶ್ನೆಗಳು ಹಾಗೆ ಉಳಿದವು.ಮಾತು ಅರ್ಧದಲ್ಲೆ ತುಂಡರಿಸಿತ್ತು.

Tuesday, July 1, 2008

ಓ ! ಗೆಳತಿ

ನನ್ನೆದೆಯ ಮೇಲೆ ಒದ್ದೊಡುವ,
ಇರಾದೆ ಇದ್ದಿದ್ದೇ ಆಗಿದ್ದರೆ?
ಒಂದು ಸಣ್ಣ ಕಣ್ಸನ್ನೇ ಸಾಕಿತ್ತು
ಈ ಹೃದಯವನ್ನೇ ಹಾಸಿರುತಿದ್ದೇ
ನನ್ನ ಪಾದದಡಿಗೆ.

ಅವಳಿಗಾಗಿಯೇ...!

ಅಷ್ಟಾಗಿ ಇದನ್ನ ಬರೆದಿದ್ದಾದರೂ ಏಕೆ?ಇದು ಯಾರಿಗಾಗಿ?
ಅವಳಿಗಾಗಿಯೇ...! ನಿಜ.
ಆದರೇ ಅವನು ಅವಳಿಗಾಗಿಯೇ ಬರೆದಿದ್ದೊ ಅಥವಾ ಅವಳಿಗಾಗಿ ಕೆಲವು ಹೇಳಲೇಬೇಕಾಗಿರುವುದೋ?
ಅದು ಬರೆದಾದಿ ನಂತರವೂ ನನಗೆ ಸ್ಪಷ್ಟವಾಗಿಲ್ಲ.ಒಟ್ಟಾಗಿ ಬರೆದೆ,ಅವಳಿಗಾಗಿ..!ಇಲ್ಲಿ
ಪ್ರೀತಿ ಯ ತೀವ್ರತೆ ಯೂ ಇದೆ ಅದರ ಜೊತೆಯಲ್ಲೇ ದ್ರೋಹ ದ ಧಗೆಯೂ ಇದೆ!ಯಾರ ಪ್ರೀತಿ?ಯಾರ ದ್ರೋಹ?
ಅದ್ಯಾವುದು ಇಲ್ಲಿ ಮುಖ್ಯವಾಗಿ ಇಲ್ಲ.ಇಲ್ಲಿ ನಾನು ನನ್ನ ಕಾಲೇಜು ದಿನಗಳಲ್ಲಿ ನೋಡಿದ ಆ ಪ್ರೇಮ ಕಥೆ ಗಳನ್ನೆ ವಿಧ ವಿಧ ವಾಗಿ
ಇಲ್ಲಿ ದಖಾಲಿಸುತ್ತ ಬಂದೆ.ಅದೇ ಈ ಅವಳಿಗಾಗಿ..!ಕಾಲೇಜು ದಿನಗಳ ಸ್ನೇಹಿತರು "ಮತ್ತೊಮ್ಮೆ ಅದೆ ತರಹದ
ಹನಿ ಗಳನ್ನು ಬರೆಯೂ....! ಪುಸ್ತಕ ಮಾಡು .ಒಟ್ಟಾಗಿ ಓದಲು ಸಿಗುತ್ತೆ" ಅಂತ ಹೇಳಿದ್ದ ರಿಂದ ಇದಕ್ಕೆ ಜೀವ ಬಂತು.
ಇಷ್ಟು ಮಾತ್ರದ ವಿವರದೊಂದಿಗೆ...

Thursday, June 26, 2008

'ಅವಳಿಗಾಗಿ...'

ಅವಳಿಗಾಗಿ...' ಮತ್ತೊಮ್ಮೆ ಕಾಡಹತ್ತಿದೆ.ನಿಂತಲ್ಲಿ,ಕುಳಿತಲ್ಲಿ,ಹೋದಲ್ಲಿ,ಬಂದಲ್ಲಿ.
ಹಿಂದೊಮ್ಮೆ ಬರೆಯಿಸಿ ಕೊಂಡಿತ್ತು! ಆದರೆ ನನ್ನ ಮದುವೆ,
ಬದುಕಿನ ಜಂಜಡ ಗಳ ಮಧ್ಯೇ 'ಅವಳಿಗಾಗಿ....' ಮರೆತೇ ಹೊಗಿತ್ತು.
ಈಗ ಮತ್ತೊಮ್ಮೆ ಕಾಡ ಹತ್ತಿದೆ.ಬಹುಶಃ ಈ ಬಾರಿ ಬರೆಯಿಸಿ ಕೊಳ್ಳದೆ ಇರದು.
ಹೀಗೆ ಕಾಡದೆ ಹೋದರೆ ಬರೆಯುವ ಬರಹಕ್ಕೆ ಅರ್ಥ ವೇ ಇಲ್ಲವೇನೊ?
ಎನ್ನುವ ನನ್ನದೇ ಆದ ಸಿದ್ಧಾಂತ ದಿಂದ ಬರೆಯದೇ ಬಿಟ್ಟಿದ್ದೆ.