Wednesday, October 1, 2008

...ಯಕ್ಷಗಾನ

...ಮುಂದಿನ ಕೆಲವು ದಿನಗಳ ನಂತರ ನಮ್ಮೆನೆಯವರೆಲ್ಲಾ ಸೇರಿ ಕೊಂಡು
ಇಡುಗುಂಜಿ ಸಿದ್ದಿ ವಿನಾಯಕ ನ ದರ್ಶನಕ್ಕೆ ಹೋದೆವು.ನನ್ನ ಅಕ್ಷರ ಸಹ ಹಿಡಿದಿಟ್ಟಿದ್ದು ಅಲ್ಲಿನ ಹಸಿರು,ಆ ಬೆಟ್ಟ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಊರು ಎನ್ನುವ ಹೆಸರಿದ್ದರೂ ಕೇವಲ ನಾಲ್ಕಾರು ಮನೆಗಳ ಕಾಡಿನ ಜೀವನ.ನನಗೆ ಆಗಲೇ ಅಲ್ಲಿಯ ಜೀವನ ಅಪ್ಯಾಯಮಾನ ವಾಗಿ ಹೋಯಿತು.ಕಣ್ಣು ತುಂಬಿ ಕೊಂಡು ಬಂದೆ.ಆದರೆ ನನ್ನ ಮತ್ತು ನನ್ನನ್ನೇ ಆ ಪರಿಸರ ಮತ್ತು ಎಲ್ಲಕ್ಕಿಂತ ಮಿಗಿಲಾಗಿ 'ಯಕ್ಷಗಾನ' ಆವರಿಸಿ ಬಿಟ್ಟಿತ್ತು.ನನಗೆ ಆ ಗುಂಗಿ ನಿಂದ ಹೊರಬರಲು ಆಗಲೆ ಇಲ್ಲ.ಇದಲ್ಲೆವನ್ನು ತಣಿಸಿಲೆಂದೆ ಏನೂ ಗೊತ್ತಿಲ್ಲ 'ಚಂದನ' ವಾಹಿನಿ ಯಲ್ಲಿ ಪ್ರಸಾರ ವಗುತ್ತ ಇದ್ದ 'ಯಕ್ಷಗಾನ' ತಪ್ಪದೆ ನೊಡುತ್ತಾ ಇದ್ದೆ.
ನಂತರ ದ ದಿನಗಳಲ್ಲಿ ನನಗೆ ಕೆರೆಮನೆ ಶಂಭು ಹೆಗಡೆ ಯವರ ವಕ್ತಿತ್ವ ದ ಪರಿಚಯ ವಾಯಿತು.ಅವರನ್ನೆ ಮತ್ತು ಸಂಪೂರ್ಣವಾಗಿ 'ಯಕ್ಷಗಾನ' ಕ್ಕೆ ಮೀಸಲಿಟ್ಟ ಅವರ ಕುಟುಂಬ ನನಗೆ ಈ ಜಾಗತೀಕರಣ ದ ಬೆನ್ನಲ್ಲಿ ಬೆರಗಾಗಿತ್ತು.
ಹೀಗೆ ನನಗೆ ಗೊತ್ತಿಲ್ಲದೆ 'ಯಕ್ಷಗಾನ' ನನ್ನನ್ನ ಆವರಿಸಿ ಬಿಟ್ಟಿದೆ.

No comments: