Tuesday, October 29, 2019

---ಕೊಲೆಯಾ ಇಲ್ಲವೆ ಅತ್ಮಹತ್ಯೆಯಾ?

WOn First prize in PRAJA PRAGATHI(DAILY) on the Deepavali Occation -2019
*************************************************************
---ಕೊಲೆಯಾ ಇಲ್ಲವೆ ಅತ್ಮಹತ್ಯೆಯಾ?

ಆ ಕಾಡು ಬಂಡೆಯ ಮೇಲೆ
ನಾಗರಗಳು ಮೂಡಿದ್ದವು.
ನಿಸ್ತೇಜನಾಗಿ ನೋಡುತ್ತಲಿದ್ದೆ ನೋಡುತ್ತಲೆ ಇದ್ದೆ...
ಚಾಂಚಲ್ಯದಲ್ಲಿ ಜಡವಾಗಿ ಜಡದಲ್ಲಿ ಚಂಚಲಿಸಿ
ಮೋಡದಲ್ಲಿ ಅಗ್ನಿಯಾಗಿ ಅಗ್ನಿಯಲ್ಲಿ
ಮಳೆ ಹುಟ್ಟಿದಂತಾಯಿತು !

ನಾಗರಗಳು ಪ್ರೇಮಿಸ ಹತ್ತಿದವು-
ಪ್ರೇಮದ ಉತ್ತುಂಗ ಶಿಖರವನು ಏರಿದವು
ಬಿಸಿಲೇರಿದಂತೆ ಮಿಥುನದ ಪ್ರಮಾಣವೂ
ಹೆಚ್ಚಾಯಿತು!
ಕಣ್ಣು ತಿಕ್ಕಿ ಕೊಳ್ಳುವಷ್ಟರಲ್ಲಿ
ಅಲ್ಲಿ ನಾಗರಗಳಿರಲಿಲ್ಲ!
ರೂಪಕಗಳ ಕೊಲೆಯಾ ಇಲ್ಲವೆ ಅತ್ಮಹತ್ಯೆಯಾ?

ಮನದ ಒಡೆದ ಬಿಂಬ
ಮುಂದೆ ನಿಂತು ಆತ್ಮ ಸಾಕ್ಷಿಯಂತಾಯಿತು!
ಕಣ್ಣ ಮುಂದಿರುವ ಸತ್ಯ ಮಿಥ್ಯದಂತೆ ಕಂಡು
ಜಾಣ ಕುರುಡು ತೋರಿಸಿ ಅನುಕೂಲ ಸಿಂಧುವಿನಂತೆ
ಮೆರೆದು-‘ಬದುಕೆಂದು ಬರಡು’!
ರೂಪಕಗಳ ಕೊಲೆಯಾ ಇಲ್ಲವೆ ಅತ್ಮಹತ್ಯೆಯಾ?

ಬೆಂಕಿಯ ಕೆನ್ನಾಲಿಗೆಗೆ
ಧಗ ಧಗಿಸಿ ಹೊತ್ತಿ ಉರಿದು ಸುಟ್ಟು ಭಸ್ಮವಾಯಿತು!
ಉಸಿರು ತಿರುಗಿಸಿಕೊಳ್ಳುವಷ್ಟರಲ್ಲಿ
ಬೂದಿಯಿಂದ ಜೀವ ಅವಿರ್ಭವಿಸಿ ಆಶ್ಚರ್ಯವಾಯಿತು!
ರೂಪಕಗಳ ಕೊಲೆಯಾ ಇಲ್ಲವೆ ಅತ್ಮಹತ್ಯೆಯಾ?
Published in SANJEVANI deepavali Special 2019.
********************************************
                  ಮತ್ತೆ ಮತ್ತೆ ಬುಧ್ದ !!!!

ಲುಂಬಿಣಿಯ ಸಿದ್ದಾರ್ಥ ಕೇಶ ತೂರಿ
ಕಾಂತಕನಿಗೆ ಕಣ್ಣೀರ ವಿದಾಯ ಹೇಳಿ
ಹುಟ್ಟು, ಸಾವು, ರೋಗಗಳ ಮೂಲ ಕೆದಕಲು
ಸಿಧ್ಧನಾಗಿ ಬಧ್ಧನಾಗಿ ಬೋಧಿ ವೃಕ್ಷದ ಕೆಳಗೆ ಬುಧ್ದನಾದ!!!

ಕುಶಿ ನಗರದ ತೋಟದಲಿ
ತಲೆಗೆ ಕೈಕೊಟ್ಟು “ಈ ಮನುಜರ ಪಾಡೇನು?” ಅಂತ
ಯೋಚಿಸಿತ್ತಲೆ ಯೋಚಿಸುತ್ತಲೆ ಯೋಚಿಸುತ್ತಲೆ...ಮಲಗಿದ!!!
ಆದರೇನು ಫಲ? ನೋರಾರು ವರ್ಷಗಳು ಬೇಕಾದವು
ಬುದ್ದನ ನೆನೆದು ಎಲ್ಲವ ಮರೆತು ತಮ್ಮನ್ನು ತಾವು ಅರಿಯಲು !!

ಧನನಂದನು ಲೋಲುಪತೆಯ ಅಂಧಾಕರದಲಿ
ಮುಳುಗಿರಲು ಮಗಧದಲಿ
ರಾಷ್ಟ್ರ ರಕ್ಷಣೆಯ ರಾಜ ಧರ್ಮವ ಪಾಲಿಸುವಂತೆ
ದೈನೇಸಿಯಿಂದ ಬೇಡಿದ ಬಡ ಬ್ರಾಹ್ಮಣ ಭಿಕ್ಷೆಯಂತೆ
ಅಧಿಕಾರದ ಅಮಲು ನೆತ್ತಿಗೇರಿತ್ತು
ಪಾಪದ ಕೊಡವು ತುಂಬಿದ ಬಂದಿತ್ತು!!!
ಜುಟ್ಟು ಹಿಡಿದು ಹೊರ ಹಾಕಿದರು
ಒಡಲಿನ ಬೆಂಕಿ ಜ್ವಾಲಾಮುಖಿಯಾಗಿತ್ತು
‘ನಂದ’ ಸಾಮ್ರಾಜ್ಯದ ನಾಶಕ್ಕೆ ನಾಂದಿಯಾಯಿತು.
ಮೌರ್ಯರ ದರ್ಬಾರು ಮರೆದು ನಿಂತಿತು
ನಂದ ಸಾಮ್ರಾಜ್ಯ ನಂದಿ ಹೋಯಿತು

ಕ್ರೋರಿ ಆಶೋಕ ಚಕ್ರವರ್ತಿ(?) ಜಗವಾಳಲು ಹೋದ,
ನೆತ್ತರು ಕಾಲ ಕೆಳಗೆ ಸುಳಿದು ಹರಿದು
ನದಿ ನೀರಲಿ ನೀರಾಗುತ್ತಿತ್ತು

ಆಕಾಶಕ್ಕೆಲ್ಲಾ ಹಾರಾಡಿದವು ರುಂಡ ಮುಂಡಾದಿಗಳು
ಕೈಲಿದ್ದ ಕತ್ತಿಯ ಬಿಸುಪು ಸಡಿಲವಾಗಿತ್ತು
ನೆತ್ತರು ಹರಿದಂತೆ ಕ್ರೂರ ಮನಸ್ಸು ಕರುಗುತ್ತಲಿತ್ತು.
ಕಳಿಂಗ ಯುಧ್ಧವೇನೊ ಗೆದ್ದಿದ್ದ
ಆದರೆ ಮನಸ್ಸಲಿ ಎಲ್ಲಾ ಕಳೆದುಕೊಂಡು ಸೋತಿದ್ದ.
ತನಗೆ ತಾನು ಆಳಾದ ಯುಧ್ಧಗಳೆಲ್ಲವೂ ಕೀಳಾದವು.

ತನ್ನನ್ನು ತನ್ನೆಲ್ಲವನ್ನೂ ತೊರೆದು
ವರ್ಷಗಳ ಕಾಲ ಬುದ್ಧನ ಅರುಹಲು ಹೊರಟ
ಕತ್ತಿ ಅಲುಗಲಿ ನಲುಗಿದ ಜೀವಕ್ಕೀಗ ಬುಧ್ಧ ಬೇಕಾಗಿತ್ತು
ಹೌದು ಈಗಲೂ ಅಷ್ಟೆ!!!!
ನೆನಪಾಗುವುದು ಬುಧ್ದ ಮತ್ತೆ ಮತ್ತೆ!!!
Published in Samyuktha karnataka 27th Oct 2019 Sunday Supplement.
This story one won first prize in the story competation conducted by 'NIRATA SAHITYA SANGHA' BELTAHANGADI'.
**********************************************************
                                                                    ಪಳುಯುಳಿಕೆ

ಮೋಹನ ಮದುವೆಯಾಗಿ ಮಕ್ಕಳಾಗಿ ಆಗಲೆ ಸುಮಾರು ವರ್ಷಗಳಾಗಿ ಹೋದಾಗಲೂ ಇನ್ನೂ ಬಿಡದೆ ಅವಳ ನೆನಪು
ಕಾಡುತ್ತಿತ್ತು.ಈಗ ಮೋಹನ ಆಮೇರಿಕಾದ ಸ್ಯಾನ್ಪ್ರಾನ್ಸಿಸ್ಕೊಗೊ ಕಂಪನಿಯಿಂದ ಪ್ರೋಜೆಕ್ಟ್ ಕೆಲಸಕ್ಕಾಗಿ
ಹೋಗಿದ್ದಾನೆ.ಅದೊಂದು ವಾರಾಂತ್ಯದ ಬಿ.ಬಿ.ಸಿ ಸುದ್ದಿ ವಾಹಿನಿಯಲ್ಲಿ ಹಂಪೆಯ ಬಗ್ಗೆ ಒಂದು ಡಾಕ್ಯೂಮೆಂಟರಿಯನ್ನು
ನೋಡಿದ.ಆ ಕ್ಷಣದಿಂದಲೆ ವಿಪರೀತವಾಗಿ ವಿಚಲಿತನಾಗಿಬಿಟ್ಟ.ತನ್ನ ದುಗುಡುವನ್ನು ಕಡಿಮೆ ಮಾಡಿಲಿಕ್ಕಾಗಿಯೆ
ಭಾರತದಲ್ಲಿಯರಿವ ತನ್ನ ಹೆಂಡತಿಗೆ ಒಂದು ಈ ಮೇಲ ಬರೆಯುಲು ಶುರುವಿಟ್ಟ.
ಹಲೋ ಹನಿ,
ಬೆಳಿಗ್ಗೇನೆ ವಿಡಿಯೋ ಕಾಲ್ ಮಾಡಿ ಆಗಿದೆ ಮತ್ತೇನು ಈ 'ಅಕ್ಷರಗಳು ' ಅಂತ ಆಶ್ಚರ್ಯ ಆಗಬಹುದು.ಈ ಮೇಲಿಗೆ
ಒಂದು ಕಾರಣವಿದೆ.ಈ ವಾರಾಂತ್ಯದಲ್ಲಿ ಬಿ.ಬಿ.ಸಿಯ ಹಂಪೆಯ ಬಗ್ಗೆ ಒಂದು ಡಾಕುಮೆಂಟರಿಯನ್ನು
ನೋಡಿದೆ.ವಿಜಯನಗರ ಸಾಮ್ರಜ್ಯದ ವಿವರಗಳನ್ನು ಕಟ್ಟಿ ಕೊಟ್ಟರು.ಹಾಗೆಯೇ ಬಹಮನಿ ಸುಲ್ತಾನರಿಂದ ನಾಶವಾದ
ಹಂಪೆಯ ವಿವರವನ್ನು ಕೊಡಲಾಯಿತು.ಹಂಪೆಯ ನಾಶದ ವಿಷಯವನ್ನು ತೋರಿಸುವಾಗಲಂತೂ - ನಾನು
ನಿಜವಾಗಿಯೂ ಸತ್ತೆ ಹೋದೆ.ಆ ಸಾಲು ಸಾಲು ಮುರಿದು ಹೋದ ಮಂಟಪಗಳು,ಛಾವಣಿಯಿಲ್ಲದೆ ನಿಂತಿರುವ
ದೇವಸ್ಥಾನಗಳು,ಪ್ರತಿ ಉತ್ಖನನನಕ್ಕೂ ದೊರಕುತ್ತಿರುವ ಭಗ್ನ ವಿಗ್ರಹಗಳು, ಬಿರು ಬಿಸಿಲು,ಮಳೆ,ಛಳಿಗಳಿಗೆ ಮೈಯೊಡ್ಡಿ
ನಿಂತಿರುವ ಕಾಡು ಬಂಡೆಗಳು, ನನ್ನ ಎಲ್ಲ ನೆನಪುಗಳನ್ನು ಒಮ್ಮೆಲೆ ಮನದ ಮೂಲೆಯಿಂದ ಎತ್ತಿ ಪಡಸಾಲೆಗೆ ತಂದು
ಹಾಕಿದವು .ಎಷ್ಟೆ ಆ ನೆನೆಪುಗಳಿಂದ ಹೊರಬರಲು ಪ್ರಯತ್ನಿಸಿದರು,ಹೊರಬರಲಾಗಲಿಲ್ಲ. ಹಂಪೆಯ ಆ ಮುರುಕಲು
ಮಂಟಪಗಳಲ್ಲಿಯೆ ನಾನು ಮತ್ತು ಅವಳು ಅಡ್ಡಾಡಿದ್ದೆವು ನಮ್ಮಿಬ್ಬರ ಗಹನ ಪ್ರೇಮಕ್ಕೆ ಆ ಮಂಟಪಗಳೇ ಸಾಕ್ಷಿ ಆಗಿದ್ದವು
.ಎಂತಹ ದುರಂತ ನೋಡು ಅದೆ ಮಂಟಪಗಳಲ್ಲಿಯೆ ನಾನು ಮತ್ತು ಅವಳು ಬೇರೆ ಆಗುವ ಮಾತು ಆಗಿತ್ತು .ಹಾಳು
ಹಂಪೆಯಂತಿಯೆ ಪ್ರೇಮವೂ 'ಹಾಳು ಹಾಳು ಆಗಿತ್ತು. '
ಅಲ್ಲಿಯ ಮುರುಕಲು ಮಂಟಪದಂತೆಯೆ, ಛಾವಣಿಯಿಲ್ಲದ ದೇವಸ್ಥಾನಗಳಂತೆಯೆ,ಬಿಸಿಲು,ಮಳೆ ಮತ್ತು ಛಳಿಗೆ
ಮೈಯಿಡ್ಡಿದ ಕಲ್ಲು ಬಂಡೆಯಂತೆಯೆ ನನ್ನ ಜೀವನವು ಆಗಿತ್ತು.'ಅದೃಷ್ಟಕ್ಕೆ ನೀನು ಸಿಕ್ಕೆ ಮತ್ತೆ ನಾನು ನಕ್ಕೆ ' .ನನ್ನ ಎಲ್ಲ
ಪ್ರೇಮಾಲಾಪಗಳ ನಡುವೆಯೂ ನನ್ನನ್ನು ಮೆಚ್ಚಿದೆ, ಒಪ್ಪಿದೆ,ಮದುವೆಯೂ ಆದೆ.ಎಲ್ಲವನ್ನೂ ತಿಳಿದು ನೀನು ನನ್ನನ್ನು
ವರಿಸಿದ್ದು ನಿನ್ನ ಔದಾರ್ಯ.ನಮ್ಮ ಮದುವೆಯಾದಾಗ ಮೊಬೈಲಗಳು ಇರಲಿಲ್ಲ.ಇಬ್ಬರು ಬೇರೆ ಬೇರೆ ಊರಲ್ಲಿದ್ದರು ಪ್ರತಿ
ವಾರಕ್ಕೊಮ್ಮೆ ತಪ್ಪದೆ ಪತ್ರ ಬರೆಯುತ್ತಿದ್ದೆವು.ಆದರೆ ಈಗ ಮೊಬೈಲು ಬಂದ ಮೇಲೆ ಪತ್ರ ಬರೆಯುವುದನ್ನೆ ಮರೆತು
ಬಿಟ್ಟಿದ್ದೇವೆ.ನಿನ್ನ ಮತ್ತು ಮಕ್ಕಳ ನೆನಪಾದರೆ ಸಾಕು ವಿಡಿಯೋ ಕಾಲ್ ಮಾಡುತ್ತೇನೆ.ಆದರೆ ಮೊನ್ನೆ ರಾತ್ರಿ ಅಂದರೆ
ನಿಮ್ಮ ಬೆಳಗಿನ ಜಾವಕ್ಕೆ ನೋಡಿದ ಬಿ.ಬಿ.ಸಿ ಕಾರ್ಯಕ್ರಮ ನನ್ನ ಎಲ್ಲ ನೆನಪುಗಳನ್ನು ಬಡಿದೆಬ್ಬಿಸಿತು.ಆಕ್ಷಣಕ್ಕೆ ನನ್ನ
ಮನಸ್ಸಿಗೆ ತೋಚಿದ್ದನ್ನು ಈ ಮೇಲಲ್ಲಿ ಬರೆದಿದ್ದೇನೆ.ನನ್ನ ಮನಸ್ಸು ಹಗುರವಾಗಿದೆ ನಿನ್ನ ಮನಸ್ಸು ಭಾರವಾಗಿದೆ
ಅಂತಲೂ ಗೊತ್ತು.ನೀನು ಇದನ್ನು ಓದುವಷ್ಟರಲ್ಲಿ ನಾನು ಘಾಢ ನಿದ್ರೆಯಲ್ಲಿರುತ್ತೇನೆ .ಇನ್ನೇನು ನಾನು ಭಾರತಕ್ಕೆ
ವಾಪಸ್ಸು ಬರುವ ದಿನಗಳು ಸಮೀಪಿಸಿವೆ .ಇನ್ನೆಂದು ನಿಮ್ಮನ್ನು ಬಿಟ್ಟು ಇಷ್ಟು ದಿನ ಇರೆನು
ಕನಸಲಿ ಬರುವೆ
ಇಂತಿ ನಿನ್ನ
ಹಬ್ಬಿ

Friday, October 11, 2019

Published in VIKRAMA (VIJAYA DASHAMI SPECIAL-2019)

                       ಅಳಿಲ ಅಳಲು

ವೀರಾಧಿವೀರ ನರ-ವಾನರ ಸೈನ್ಯದ ನಡುವೆ
ನನಗೇನು ಕೆಲಸ? ಹಾಗೆಂದೆ ಕುಳಿತೆ
ಒಮ್ಮೆಯಾದರು ನಿನ್ನ ಕರುಣಾ ಚಕ್ಷುಗಳಿಗೆ
ನಾ ಬೀಳಬೇಕು ಮತ್ತು ನಿನ್ನ ಸೇವೆಯಲಿ ನನಗೂ ಪಾಲು ಬೇಕು!

ಹೆದರಿ ತೆವಳುತ ಬಂದೆ ಜೀವ ಕೈಲಿ ಹಿಡಿದು-
ಏಕೆಂದರೆ ಪರಮ ವೀರರ ರಣ ಕುಣಿತವದು.
ನೀನೊ ಪರಮ ಪುರುಷೋತ್ತಮನು
ಏನೆಂದು ಸೇವೆಗೈಯಲಿ ಕುಬ್ಜ ನಾನು
ನಿನ್ನ ಕಣ್ಣಿಗೆ ಬೀಳಲಿಲ್ಲ, ಸೇವೆಯೂ ಮಾಡಲಿಲ್ಲ
ಜೀವ ಕನಲಿತು ಮನಸ್ಸು ಅದುರಿತು
ಯಾವುದಕ್ಕೆ ಲಾಯಕ್ಕು ನಾನೆಂದು

ಕುಬ್ಜನಾದರೇನಂತೆ ಸಣ್ಣಗೆ ಮರಳ ಗಣಿಗಾರಿಕೆ ನಡೆಸಿ
ಮೈಗಂಟಿದ ಮರಳನೆ ಬಂಡೆಗಲ್ಲುಗಳ ಸಂದಿಗೊಂದಿಗಳಲಿ
ಕೊಡವಿ, ಮೈದಡವಿ, ನಿನ್ನದೆ ಪಾದತಲದಲಿ ಕೈಮುಗಿದು ನಿಂತೆ
ಸಾರ್ಥಕವಾಯಿತು ಬದುಕು
ನಿ ನನ್ನ ಬೆನ್ನು ಸವರಿದಾ ಸುದಿನವು!!

ಹಿಡಿ-ಹಿಡಿ ಉಸುಕನೆತ್ತಿದೆನಾಗ ಅಸುರ ಸಂಹಾರ ಯಾಗಕೆ
ಸೀತಾನ್ವೇಷಣೆಗೆ.
ನಡೆದಿಹುದೀಗ ಅನುದಿನವೂ ಭೂಮಿ