Monday, September 29, 2008

ಯಕ್ಷಗಾನ ನಂಗೆ ಯ್ಯಾಕೆ ಇಷ್ಟವಾಗುತ್ತೆ?

ಯಕ್ಷಗಾನ ನಂಗೆ ಯ್ಯಾಕೆ ಇಷ್ಟವಾಗುತ್ತೆ?ಇದನ್ನು ನನಗೆ ನಾನೆ ನೊರಾರು ಬಾರಿ ಕೆಳಿಕೊಂಡಿದ್ದೇನೆ.
ಉತ್ತರ ಸಿಕ್ಕಿಲ್ಲ.ಆದ್ರೂ ಅದು ಯ್ಯಾಕೆ ನಂಗೆ ಇಷ್ಟವಾಗುತ್ತೆ ಅಂತ ನನ್ನನ್ನ ನಾನು ಕೇಳಿ ಕೊಳ್ಳುತ್ತಲೇ ಇದ್ದೇನೆ.
ಹುಟ್ಟಿದ್ದು ಬಟ್ಟ ಬಯಲ ಸೀಮೆ ಬಳ್ಳಾರಿ ಜಿಲ್ಲೆಯಾದರು ನನ್ನ ಊರು ಎಲ್ಲೂ ಒಂದು ಕಡೆ ಹಸಿರಿನಿಂದ ತುಂಬಿದೆ.ಬೇಸಿಗೆ ಯ ಒಂದು ಕಾಲದಲ್ಲಂತೂ ಹಾದಿ ತುಂಬ ಮಲ್ಲಿಗೆ 'ಘಮ'.ಅದುವೇ ನನ್ನೂರು 'ಹೂವಿನ ಹಡಗಲಿ'! ಹಂಪಿ ಯ ವಿರುಪಾಕ್ಷನ ಪೂಜೆ ಗೆ ಇಲ್ಲಿಂದಲೇ ಮಲ್ಲಿಗೆ ಸರಬರಾಜು ಅಗಿತ್ತಿತ್ತು ಎಂದು ಇದಕ್ಕೆ 'ಹೂವಿನ ಹಡಗಲಿ' ಅನ್ನುವ ಹೆಸರು ಬಂತು ಎನ್ನುವ ಓಂದು ಮಾತಿದೆ.ಈ ಊರನ್ನು ರಬ್ಬಲಾಂಬ ಎನ್ನುವ ರಾಣಿ ವಿಜಯನಗರದ ಅರಸರ ಸಾಮಂತೆ ಯಾಗಿ ಆಳಿದ್ದಳು.ಹೀಗೆ ಹತ್ತು ಹಲವು ಕಥೆ ಗಳು ನನ್ನೂರ ಬಗ್ಗೆ ಇವೆ ಅವನ್ನೇ ಓಂದು ಕಥಾ ಪುಂಜ ವಾಗಿ ಒಮ್ಮೆ ಹೇಳಿಕೊಳ್ಳುತ್ತೇನೆ.
ಆದರೆ ಈಗಿನ ನನ್ನ ಪ್ರೆಶ್ನೆ 'ಯಕ್ಷಗಾನ' ನನ್ನ ಈ ಪರಿಯಾಗಿ ಕಾಡುವುದು ಏಕೆ?ಮೇಲಿ ಹೇಳಿದ ಎಲ್ಲಾ ಪೀಠಿಕೆ ಯಿಂದ ಅರ್ಥ ವಾಗುತ್ತೆ ನಮ್ಮೂರಿಗೂ 'ಯಕ್ಷಗಾನ'ಕ್ಕೂ ಯಾವುದೇ ಸಂಬಂಧವಿಲ್ಲ ಅಂತ.'ಯಕ್ಷಗಾನ' ಉತ್ತರ ಕನ್ನಡ,ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜೀವ ನಾಡಿ. ಇಂದಿಗೂ ದೇಶ ವಿದೇಶ ಸುತ್ತು ತ್ತಿರುವಗೆ ತಾಯ ಮಡಿಲ ಸುಖ ಕೊಡುವುದು ಇದೇ 'ಯಕ್ಷಗಾನ'.'ತೆಂಕತಿಟ್ಟು' ಮತ್ತು 'ಬಡಗತಿಟ್ಟು' ಎನ್ನೋ ಎರೆಡು ವಿಧ ಗಳಿವೆ ಅಂತ ಕೇಳಿದ್ದೇನೆ. ಆ ಎರೆಡು ವಿಧಗಳ ಬಗ್ಗೆ ನಡುವೆ ಇರುವ ಸ್ವಲ್ಪ ವೆತ್ಯಾಸ ವೂ ಗೊತ್ತು.ನಮ್ಮೂರಿಂದ ಹೊದೆಡೇ ಹಾವೇರಿ ಜಿಲ್ಲೆ ದಾಟಿದರೆ ನಮಗೆ ಸಿಗುವುದೇ 'ಉತ್ತರ ಕನ್ನಡ' ಜಿಲ್ಲೆ.ಅದೇ ಜಿಲ್ಲೆ ಬಳಸಿ ಕೊಂಡು ಹೋದರೆ 'ಉಡುಪಿ' ಮತ್ತು 'ದಕ್ಷಿಣ ಕನ್ನಡ' ಜಿಲ್ಲೆಗಳು ದೊರೆಯುತ್ತವೆ.
'ಯಕ್ಷಗಾನ' ದ ಬಗ್ಗೆ ಮೊದಲು ಕೇಳಿದ್ದು ಶಿವರಾಂ ಕಾರಂತರ ಹೆಸರು ಕೇಳಿದಂದು.ಹೌದು!ಅವರು ಆಹೊತ್ತಿ ಗಾಗಲೇ 'ಯಕ್ಷಗಾನ'ದಲ್ಲಿ ಸುಮಾರು ಕೆಲಸ ಮಾಡಿದ್ದರು ಕಾರಂತರು.ನನಗೆ ಆಗ ಸುಮಾರು ಹತ್ತೂ ಹನ್ನೆರೆಡೊ ವರ್ಷ.ಅದಾದ ನಂತರ ನಮ್ಮೋರಲ್ಲೇ ನಮ್ಮೂರಿನ ಕೆಲವು ಹವ್ಯಾಸಿ ತಂಡ ನಡೆಸಿಕೊಟ್ಟ 'ಬಯಲಾಟ' ನೋಡಿದ್ದೆ.ಅದಾಗಲೇ ನಮ್ಮ ಭಾಗದಲ್ಲಿ 'ಬಯಲಾಟ' ಅವಸಾನ ದ ಅಂಚಿಗೆ ತಲುಪಿತ್ತು.ಬಹುಶಃ ಈ ಹೊತ್ತಿಗಾಗಲೇ ಆ ತಂಡ ದ ಹಿರಿಯ ತಲೆಗಳು ಇಲ್ಲದಾಗಿದ್ದಾವೂ,ಹೊಸಬರಿಗೆ ಅವೆಲ್ಲದರ ಬಗ್ಗೆ ತಾತ್ಸರ.ಈಗ ಆ ವೇಷ ಭೊಷಣ ಗಳು ಆ ಹಿರಿಯ ತಲೆಗಳ ಮನೆ ಜಂತಿ ಯ ಮೇಲೆ ಬಣ್ಣ ಕಳೆದು ಕೊಂಡು ತೂತು ಬಿದ್ದು ಧೂಳು ಹಿಡಿದು ಹಾಳಾಗುವ ಹಾದಿಯಲ್ಲಿದ್ದಾವು.
ಆ ಬಯಲಾಟ ನೋಡಿದಾಗ ಯ್ಯಾರು ಹೇಳಿದ್ದು ನೆನಪಿದೆ'..ಯಕ್ಷಗಾನ ಅಂದರೆ ಅದೂ ಹೀಗೆ ಇರುತ್ತೆ .." ಅಂತ.ಆ ದಿನದಿಂದಲೇ ನನಗೆ ಶಿವರಾಂ ಕಾರಂತರ ಷ್ಟೇ ಆಸಕ್ತಿ ಯ ವಿಷಯವಾಗಿ ಯಕ್ಷಗಾನ ನನ್ನಲ್ಲಿ ಕೊರೆಯಲಿಕ್ಕೆ ಶುರುಮಾಡಿತು.ಪತ್ರಿಕೆ,ಪುಸ್ತಕ ದಲ್ಲಿ ಬರುವ 'ಯಕ್ಷಗಾನ' ಸಂಬಂಧಿ ವಿಷಯಗಳನ್ನು ಶ್ರದ್ಧೆ ಯಿಂದ ಓದುತ್ತ ಇದ್ದೆ.ಆಗಲೇ ನನ್ನೊಳಗೆ 'ಯಕ್ಷಗಾನ' ದ ಜೊತೆ ಒಂದು ತೆರೆ ನಾದ ಸಂಬಂಧ ಶುರುವಾಯಿತು.ಅಷ್ಟೇ ಅಲ್ಲದೇ ಕೃಷಿ ಯಷ್ಟೆ 'ಯಕ್ಷಗಾನ' ವನ್ನೂ ಹಚ್ಚಿ ಕೊಂಡಿರುವ ಹವ್ಯಾಕ ಸಮುದಾಯ ದ ಬಗ್ಗೆಯೂ ಆಸಕ್ತಿ ಹುಟ್ಟಿತು....

Tuesday, September 9, 2008

ಮುಗಿಯದ ಮಾತು...!

ಮುಗಿಯದ ಮಾತು ನೋರಿಹವು,
ನಮ್ಮಿಬ್ಬರ ನಡುವೆ.
ಬತ್ತಿ ಹೋಗಿಹುದು ಒಲವು,
ಹಮ್ಮು-ಬಿಮ್ಮು ಗಳ ನಡುವೆ.


ನೂರೊಂದು ಕೂಣಿಯುತಿಹವು,
ಉತ್ತರವಿಲ್ಲದ ಪ್ರೆಶ್ನೆಗಳು.
ಕೂಗಿ ಕೆಳಲು ದನಿ ಇರಲಿಲ್ಲ,
ಸೂರೆ ಮಾಡಿದ್ದವು ಭಗ್ನ ಕನಸುಗಳು.

ತಿರುಗಿಯೂ ನೋಡದೆ ಹೊರಟು ಹೋದೆ,
ನಾನಲ್ಲೆ ನಿಂತಿದ್ದೆ ನೀಬರುವೆ ಎಂದು!
ದಿನಗಳೇ ಉರುಳಿದರು ಬಾರದೆ ಹೋದೆ.
ನೀ ಸುಖವ ಕಂಡಿದ್ದೆ ಮತ್ತೊಬ್ಬರ ತೆಕ್ಕೆಯಲಿ ಮಿಂದು.

Monday, September 1, 2008

ಯಾರು ಹಿತವರು...?(ಒಂದು ಸ್ವಗತ)

"ಪ್ರದೀಪ್, ಇಲ್ಲಿ ಏನೂ ಇಲ್ಲ!" ಅಂತ 'ಪೆಲ್ಲಿ'ಹೇಳಿ ಮಾತು ನಿಲ್ಲಿಸಿದ.
ಪೆಲ್ಲಿ ನನ್ನ ಬಾಲ್ಯ ಸ್ನೇಹಿತ.ಹಡಗಲಿಯವನು.ಅವನ ಹೆಸರು ಪ್ರಹ್ಲಾದ,
ಆದ್ರೆ ನಮ್ಮ ಬಾಯಲ್ಲಿ ಅದು 'ಪೆಲ್ಲಿ' ಆಗಿದೆ.ಹಾಗೆ ಅವನು ಹೇಳಿದಾಗ,
ನಾನು ಅವನ ಮುಂದೆ ಹೇಳಲೇಬೇಕೆಂದು ಕೊಂಡ ಅದೇ ಮಾತು ಹೇಳಲಾಗದೆ ಸುಮ್ಮನೆ ಮನದಲ್ಲೆ ನಕ್ಕು ಮಾತನ್ನು ಮುಂದುವರೆಸಿದೆ,
"ಹೌದು! ಪೆಲ್ಲಿ ಅಲ್ಲಿಯೂ ಏನೂ ಇಲ್ಲ! ಆ ಬೆಂಗಳೂರಿನಲ್ಲಿ.."ಅಂದೆ.
ಅವನ ಅರ್ಥದಲ್ಲಿ ನಮ್ಮೂರಲ್ಲಿ(ಹೂವಿನ ಹಡಗಲಿ) ಗಿಜಿ ಗಿಜಿ ಎನ್ನುವ ಟ್ರಾಫಿಕ್ ಇಲ್ಲ,ದಿನ ನಿತ್ಯ ದ ಉದ್ದುದ್ದದ ಪ್ರಯಾಣ ವಿಲ್ಲ,ಹೆಜ್ಜೆ ಹೆಜ್ಜೆ ಗೂ ಕಾಣ ಸಿಗುವ ಪಿಜ್ಜಾ ಕಾರ್ನರ್ ಗಳಾಗಲಿ,ಚೈನಿಸ್ ಸೆಂಟರ್ ಗಳಾಗಲಿ,ದೊಡ್ಡದೊಡ್ಡ ಷಾಪಿಂಗ್ ಮಾಲ್ ಗಳಾಗಲಿ,ಹೇಳಲಿಕ್ಕೆ ಬಾರದಂತಹ ಬಹು ದುಬಾರಿಯ ಅಂಗಿ ಪ್ಯಾಂಟ್ ಗಳ ಬ್ರಾಂಡೆಡ್ ಷೋರೂಂ ಗಳಾಗಲಿ ಇಲ್ಲ,'ಕೊಳ್ಳು ಬಾಕತನ'ವನ್ನೇ ಒಂದು ತೆರೆನಾದ ಚಟವಾಗಿ ಪರಿವರ್ತಿಸುತ್ತಿರುವ ಏಟಿಮ್ ಸೆಂಟರ್ ಗಳಾಗಲಿ ಇಲ್ಲ.ಇವೆಲ್ಲಕ್ಕಿಂತ ಮುಖ್ಯವಾಗಿ ಕಣ್ಣಿಗೆ ಚಮಕ್ ಚಮಕ್ ಅನ್ನಿಸುವಂತೆ ಮೈಮಾಟವನ್ನೇಲ್ಲಾ ತೋರಿಸಿಕೊಂಡು ಅಡ್ಡಾಡುತ್ತಿರುವ ಲಲಾನಮಣಿಗಳಿಲ್ಲ.ಮಬ್ಬುಗತ್ತಲಲ್ಲಿ ಮೈಗೆ ಮೈ ಅಂಟಿಸಿಕೊಂಡು ಬೀರನ್ನು ಹೀರುವ
'ಪಬ್' ಗಳಿಲ್ಲ.ಹಾಗಂತ ಅವನ ಮಾತಿನಿಂದಲೇ ನನಗೆ ತಿಳಿದು ಹೋಯಿತು.
ಬೆಂಗಳೂರಿ ನಿಂದ ನೂರಾರು ಮೈಲಿ ದೊರದಲ್ಲಿರುವ ಅವನು ಬೆಂಗಳೂರಿಗೆ ಬರುವುದು ಆಗೊಮ್ಮೆ ಈಗೊಮ್ಮೆ.
ಯಾವುದು ಕಛೇರಿಯ ಕೆಲಸಕ್ಕೂ, ಅಥವಾ ತನ್ನ ಸಂಬಂಧಿ ಕರನ್ನು ಕರೆದುಕೊಂಡು ಬೆಂಗಳೂರಿಗೆ ಬರುವುದು ಬಿಟ್ಟರೆ,ಅವನಿಗೆ ಬೆಂಗಳೂರು ತುಂಬಾನೆ ಅಪರಿಚಿತ.ದಿನ ನಿತ್ಯ ಸಾವಿರಾರು ಮಂದಿ ನಸುಕಿನಿಂದಲೇ ಮೆಜೆಸ್ಟಿಕ್ ನ್ನು ತುಳಿಯುವ ಜನರಲ್ಲಿ ಇವನೂ ಒಬ್ಬ. ಅಷ್ಟೇ!
ಖಂಡಿತಾ! ಪೆಲ್ಲಿ ಯಂತಹ ಸಾವಿರಾರು ಜನರಿಗೂ ಬೆಂಗಳೂರಿನ ಬಗ್ಗೆ ಈಗಲೂ ಒಂದು ಬೆರಗು,ಕೂತುಹಲ,ಆಕರ್ಷಣೆ ಇದೆ.ಬಹುಶಃ ಇದೆಲ್ಲದರ ಬೆನ್ನ ಹಿಂದೆ ಬಿದ್ದೆ ನಾನು ಬೆಂಗಳೂರಿಗೆ ಬದಿದ್ದು.ಏನೇನೂ ಮಾಡಿದೆ. ನನಗೆ ಈಗೀಗ ಅನ್ನಿಸ್ತಾಇದೆ 'ನಾನು ನನಗಲ್ಲದೆ ಇನ್ನ್ಯಾರಿಗೂ ನನ್ನನ್ನ ಮತ್ತು ನನ್ನ ಕೆಪಬಲಿಟಿಸ್ ನ್ನು ಪ್ರೂವ್ ಮಾಡಬೇಕಾಗಿತ್ತು.ಒಟ್ಟಾಗಿ ನಾನು ನನ್ನ ಬದುಕನ್ನು ಬದುಕಲಿಲ್ಲ.
ನನಗನ್ನಿಸುತ್ತಾ ಇತ್ತು.ಈ ಊರಲ್ಲಿ ಎಲ್ಲಾ ಇದೆ ಯಲ್ಲ?ಟ್ರಾಫಿಕ್ ನ ದೂಳು ಇಲ್ಲ,ಉದ್ದುದ್ದದ ಪ್ರಯಾಣ ವಿಲ್ಲ, ಜಗ್ಗ ಜನ ಎನ್ನಿಸುವಂತ ರಸ್ತೆಗಳಿಲ್ಲ.ಇವೆಲ್ಲಕ್ಕಿಂತ ಹೆಚ್ಚಾಗಿ ಕೃತ್ರಿಮತೆ ನನಗೆ ಎಲ್ಲೂ ಕಾಣಿಸಲಿಲ್ಲ.ಇವರೆಲ್ಲಾ ತಮಗೋಸ್ಕರವೇ ಬದುಕಿತಿದ್ದಾರೆ ಅಂತ ಅನ್ನಿಸುತ್ತ ಇತ್ತು.
ಊರಿಂದ ಒಂದಿಷ್ಟು ದೊರ ಹೊದೆಡೆ ಸಾಕು ಹಸಿರು.ಕಣ್ಣು ತಂಪಾಗುತ್ತೆ.ಬೆಂಗಳೂರಿನ ಚಮಕ್ ಚಮಕ್ ಗಿಂತಲೂ ಅಲ್ಲಿನ ಸ್ವಚ್ಛಂದ ಗಾಳಿ ಏನೋ ಒಂದು ತರಹದ ಹೇಳಲಿಕ್ಕೆ ಬಾರದಂತಹ 'ಮಜಾ' ಕೊಡುತ್ತೆ.ಆ ಊರಿಗೆ ಹೋದಾಗ ನನಗೆ ಸಿಗುವ ಸಂತೋಷ ಬಹುಶಃ ,ತಿಂಗಳ ಕೊನೆಯಲ್ಲಿ ನನ್ನ ಎಸ್ ಬಿ ಅಕೌಂಟಿ ಗೆ ಬಂದಾಗ ಆಗುವ ಸಂತೋಷ ಕಿಂತಲೂ ಅದು ಹೆಚ್ಚಾಗಿತ್ತು.
ಮಾತು ಮಾತಿ ಗೂ ಅಗತ್ಯ ವಿರಲಿ ಇಲ್ಲದೆ ಇರಲಿ.thanks,sorry,no issues, pardom me ,fine...ಶಬ್ದಗಳಿಂದ ಬೇಸತ್ತು ಹೋಗಿದ್ದೀನಿ.ನನಗೆ ಇಷ್ಟವಿರಲಿ ಇಲ್ಲದೆ ಇರಲಿ ಕೊನೆಗೆ ನನ್ನ ಅಸ್ತಿತ್ವಕ್ಕಾಗಿಯಾದರೂ ಅಥವಾ ನನ್ನ ದೊಡ್ಡಸ್ತಿಕೆ ಯನ್ನು ತೋರಿಸಿಕೊಳ್ಳುವುದಕ್ಕಾದರೂ ನಾನು ಆಡಲೇ ಬೇಕಾಗಿರುವ ಸಣ್ಣ ಸಣ್ಣ ಆಟ,ನಾಟಕಕ್ಕಿಂತಲೂ ಸಂಕೀರ್ಣವಾಗಿರೋ ನಾಟಕಗಳು,ತರಾವರಿ ವರಸೆಗಳು,ಗುಂಪುಗಾರಿಕೆ,ನನ್ನ ಬಲಾಢ್ಯವನ್ನು ಪ್ರದರ್ಶಿಸುವುದಕ್ಕಗಿ ಇನ್ನೊಬ್ಬ ನ 'ಕಾಲು ಎಳೆಯುವುದು' ಇವಿಷ್ಟೂ ಅಲ್ಲಿ ಇರಲಿಲ್ಲ!.
ಇದನ್ನೆಲ್ಲಾ ಅವನಿಗೆ ಅರ್ಥ ಮಾಡಿಸಿ ಹೇಳಬೇಕೆಂದು ಕೊಂಡೆ,ಆದರೆ ಅದನ್ನೆಲ್ಲಾ ತಿಳಿಸಿ ಹೇಳುವ ವ್ಯವಧಾನವನ್ನೂ ಬೆಂಗಳೂರು ಬಸಿದು ಬಿಟ್ಟಿತ್ತು!
ಇದೆಲ್ಲಾ ನಾನು ನಾನೇ ಆಡಿ ಕೊಂಡ ಮಾತುಗಳು.
"ಪ್ರದೀಪ್ ಏನೇ ಆದ್ರೂ ನಾನು ಆರಾಮ ಗೆ ಇದ್ದೀನಿ..." ಅಂತ ಮನಸ್ಸಿಂದ ಹೇಳಿದ್ದ.ಆ ಮಾತನ್ನು ಹೇಳಿ ಮುಗಿಸಿದ ಮೇಲೆ ಅವನು ನಕ್ಕನೊ ಇಲ್ಲವೋ ಗೊತ್ತಿಲ್ಲ ಆದರೆ ನನಗೆ ಅವನೆಲ್ಲೋ ನಕ್ಕಿದ್ದಾನೆ ಅಂತ ಅನ್ನಿಸಿತು.
ಇದೆಲ್ಲ ನಡೆದದ್ದು ನಾನು ಮೊನ್ನೆ ನಮ್ಮೊರಿಗೆ ಹೂದಾಗ!