Saturday, June 13, 2009

Countdown...!


Sun Showers us with,
Rays of light.
Treasures of beauty,
In the morning sight.
Stars shine, Blossoms
Make breeze as fragrance.
Moon as milky white,
Millions of beauty on Earth.

This is not the one,
That we have created.
This is the one,
That we are blessed.

No longer we can see these miracles,
Inhale the fragrance, enjoy the beauties.

This is not the one,
That we are blessed.
This is the one,
That we are cursed.

Thursday, April 2, 2009

ಲಂಕೇಶ ರ ’ಹುಳಿಮಾವಿನಮರ’ ಮತ್ತು ನಾನು


"ಉಳಿದಿರುವ ಕಾಲ ಎಷ್ಟೋ ಗೊತ್ತಿಲ್ಲ.ಒಂದು ಕಣ್ಣು ಮುಚ್ಚಿಹೋಗಿರುವಾಗ,ಹೊರಗೆ ತುಂತುರು ಹನಿ ಬಿಳುತ್ತಿರುವ ಈ ಆಗಷ್ಟ್ ತಿಂಗಳ ಕೊನೆಯಲ್ಲಿ ಯಾವ ಪಂಕ್ತಿಯೊಂದಿಗೆ ಇದನ್ನು ಮುಗಿಸಲಿ ಎಂದು ನೋಡುತ್ತಿದ್ದೇನೆ.ಆ ಪರಿಣಾಮ ಕಾರಿ ಮಾತುಗಳೂ ಅನಗತ್ಯ.ಇಷ್ಟಕ್ಕೆ ಸುಮ್ಮನಾಗುತ್ತಿದ್ದೇನೆ."--ಇದು ಲಂಕೇಶ್.
ನಾನು ಕನ್ನಡ ಸಾಹಿತ್ಯದ ಓದು ಪ್ರಾರಂಭ ಮಾಡಿದ್ದು ಕುವೆಂಪು ಅವರ ಕವನಗಳಿಂದ.ನಂತರ ಹೊರಳಿದ್ದು ಲಂಕೇಶ್ ಮತ್ತು ಕರ್ನಾಡ ರ ಬರಹಗಳಿಗೆ.ಇವರಿಬ್ಬರನ್ನು ನನಗೆ ಪರಿಚಯಿಸಿದ್ದು ನನ್ನ ಅಪ್ಪ.’ಅಕ್ಕ’ ಲಂಕೆಶ್ ರ ಕಾದಂಬರಿ ಓದಿ ಮುಗಿಸಿದಾಗ ನಾನು ಇಂಜಿನಿಯರಿಂಗ್ ನ ಎರಡನೇ ವರ್ಷ ದಲ್ಲಿದ್ದೆ.ಅದಾದ ನಂತರ ’ನನ್ನ ತಂಗಿಗೆ ಒಂದು ಗಂಡು ಕೊಡಿ’,’ತೆರೆಗಳು’ - ಹೀಗೆ ಒಂದಾದ ಮೇಲೆ ಒಂದು ಲಂಕೇಶ್ ರ ನಾಟಕ, ಕಾದಂಬರಿ ಯನ್ನು ಓದಿ ಮುಗಿಸಿದೆ.ಇದರ ಮಧ್ಯದಲ್ಲೇ ಲಂಕೇಶ್ ರ ಆತ್ಮಕಥನ ’ಹುಳಿಮಾವಿನ ಮರ’ ಬಿಡುಗಡೆ ಆಗಿತ್ತು.ಆದರೆ ನನಗೆ ಇದನ್ನು ಮಾತ್ರ ಓದಲು ಆಗಿರಲಿಲ್ಲ.ಮೊನ್ನೆ ಆಮೇರಿಕಾ ಕ್ಕೆ ಹೋಗುವಾಗ ’ಹುಳಿಮಾವಿನ ಮರ’ ಮತ್ತು ಭೈರಪ್ಪ ನವರ ’ಗ್ರಹಣ’ ಎರಡನ್ನೂ ತೆಗೆದುಕೊಂಡು ಹೋಗಿದ್ದೆ.ವಾಪಸಗುವ ಹೊತ್ತಿಗೆ ಇವೆರಡನ್ನು ಮುಗಿಸಿದ್ದೆ.ಆದರೇ ಲಂಕೇಶ್ ರ ’ಹುಳಿಮಾವಿನ ಮರ’ ನನ್ನ ಕಾಡುತ್ತಲೇ ಇತ್ತು.ನನಗೆ ಅವರ ಬರಹ ಗಳು ಕಾಡುವ ತೀವ್ರತೆ ಯಲ್ಲೆ ಅವರ ಆತ್ಮಕಥನ ವೂ ಕಾಡಿತ್ತು.
ಈ ಆತ್ಮಕಥನ ಓದುವ ವರೆಗೂ ಅದರ ಹೆಸರಿನ ಬಗ್ಗೆ ಒಂದು ಕುತೂಹಲ ವಿತ್ತು.ಆದರೇ ಲಂಕೆಶ್ ಮುನ್ನುಡಿಯಲ್ಲೇ ಅದನ್ನು ಸ್ಪಷ್ಟಪಡಿಸುತ್ತಾರೆ.ದೈತ್ಯವಾಗಿ ಬೆಳೆಯುತ್ತಾ ತನ್ನ ಹೂವು,ಕಾಯಿ,ಹಣ್ಣು ಗಳಿಂದ ಲೇ ಮಕ್ಕಳಲ್ಲಿ ಕುತೂಹಲ ಹುಟ್ಟಿಸುತ್ತಾ,ನೂರಾರು ವರ್ಷ ಬಾಳಿ ಕೊನೆಗೆ ಒಮ್ಮೆ ಮಣ್ಣಾಗಿ ಹೊದರೂ ಅದರ ಅಳಿದುಳಿದ ಬೊಡ್ಡೆ,ಕತ್ತರಿಸಿದ ಕೊಂಬೆ ಇನ್ನೋ ಲಂಕೇಶ್ ರಿಗೆ ಕುತೂಹಲ ವಾಗಿದ್ದವೂ.ಹೀಗೆ ಹೇಳುತ್ತಲೇ ತಮ್ಮ ಆತ್ಮ ಕಥನವನ್ನು ಪ್ರಾರಂಭಿಸುತ್ತಾರೆ,ಲಂಕೇಶ್. ನಿಜವಾಗಿಯೂ ಹೇಳುತ್ತೇನೆ ಎಲ್ಲಿ ಪುಸ್ತಕ ವನ್ನು ಗಟ್ಟಿಯಾಗಿ ಅದುಮಿ ಹಿಡಿದರೆ ಅದನ್ನು ಓದುವ ಸ್ವಾರಸ್ಯ ಕರಗಿ ಹೋಗುತ್ತೋ ಎನ್ನುವಂತೆ ಮೆತ್ತಗೆ ಹಿಡಿದು ಮೆತ್ತಗೆ ಪುಟಗಳನ್ನು ತಿರುವುತ್ತಾ ಓದಿದ್ದೇನೆ.ಮಾವಿನ ಮರದಂತೆ ವಾಟೆ,ಸಸಿ,ಗಿಡ ಮತ್ತು ಮರ ಎನ್ನುವಂತೆ ವಿವಿಧ ರೀತಿಯಲ್ಲಿ ತಮ್ಮ ಜೀವನ ದ ಘಟನೆ ಗಳನ್ನು ದಾಖಲಿಸುತ್ತಾ ಹೋಗುತ್ತಾರೆ.ಬದುಕು ಕೊನಗವಳ್ಳಿ ಯಿಂದ ಸಾಗಿ,ಶಿವಮೊಗ್ಗೆಗೆ ಬಂದು,ಅಲ್ಲಿಂದ ಮೈಸುರ್ ಗೆ ಹೋಗಿ ಅಲ್ಲಿಂದ ಮತ್ತೆ ಶಿವಮೊಗ್ಗೆ ಗೆ ಬಂದು ಮತ್ತೆ ಅಲ್ಲಿಂದ ಬೆಂಗಳೂರಿಗೆ ಬಂದು ನಿಲ್ಲುತ್ತದೆ.ಲಂಕೇಶ್ ರ ಆತ್ಮಕಥ ನ ಓದುವಾಗಿ ಒಂದು ಕಾಲ ದ ರಾಜಕೀಯ ಹೋರಾಟ ಗಳೇ ಇಲ್ಲಿ ಬಂದು ಹೋಗುತ್ತವೆ.ಗೋಪಾಲ ಗೌಡರು,ಬಸಲಿಂಗಪ್ಪ ನವರು,ಹೆಗಡೆ,ನಂಜುಡ ಸ್ವಾಮಿ..ಹೀಗೆ ಎಲ್ಲರ ಸಂಪರ್ಕ ಒಂದಲ್ಲಾ ಒಂದು ರೀತಿಯಲ್ಲಿ ಲಂಕೇಶ್ ರಿಗೆ ಬಂದು ಹೋಗುತ್ತವೆ.ಅಷ್ಟೇ ಅಲ್ಲದೆ ಒಂದು ಕಾಲದ ಸಾಂಸ್ಕೃತಿಕ ಮತ್ತು ಕನ್ನಡ ಭಾಷೆಯ ನಾಡಿಗಳಲ್ಲೂ ಲಂಕೇಶ್ ರನ್ನು ಕಾಣುತ್ತೇವೆ.ಅವರ ಸಿನಿಮಾ ಮಾಡುವ ಗೀಳು,ಭಾಷೆ ಯ ಬಗೆಗೆ ಅವರಿಗಿದ್ದ ಉಗ್ರ ಅಭಿಮಾನ ,ನಾಟಕ,ಹೀಗೆ ಎಲ್ಲಾ ತೆರೆನಾದ ಆ ಸಂದರ್ಬ ದ ನಾಡಿಮಿಡಿತವೆನ್ನುವಂತೆ ಲಂಕೇಶ್ ಆಗಿ ಬಿಡುತ್ತಾರೆ.ಎಲ್ಲಕಿಂತ ಮಿಗಿಲಾಗಿ ನನ್ನನ್ನ ಕಾಡಿದ್ದು ಅಂದರೆ ಹೀಗೆ ಬದುಕ ಬೇಕು ಅನ್ನದೆ ಧಗ ಧಗ ನೇ ಉರಿಯುವಂತೆ ಬದುಕಿ ಇರುವ ಸಮಯದಲ್ಲೆ ತೀವ್ರವಾಗಿ ಸಾಧಿಸಿ ಹೋದ ಲಂಕೇಶ್.ಅವರ ಆತ್ಮಕಥನ ವನ್ನು ಓದುತ್ತಲೇ ಇದನ್ನು ಇನ್ನೆಷ್ಟು ಪರಿಣಾಮಕಾರಿಯಾಗಿ ಮುಗಿಸಬಹುದು ಎನ್ನುವ ಕುತೂಹಲ ನನಗಿತ್ತು.ಸುಮ್ಮನೆ ನೋಡುವದರಲ್ಲಿ ಮೇಲೆ ಹೇಳಿದ ಅವರೇ ಹೇಳಿದ ಮಾತುಗಳು ಪರಿಣಾಮಕಾರಿಯಾಗಿ ಕಾಣದಿದ್ದರೂ - "ಇಷ್ಟೆಲ್ಲಾ ಹೇಳಿದಿನಿ ನನ್ನ ಬದುಕೇ ನಿಮಗೆ ಒಂದು ಎಚ್ಚರಿಕೆ ಅದೇ ಒಂದು ಗೈಡ್ ಎನ್ನುವಂತೆ ಮುಗಿಸುತ್ತಾರೆ ಲಂಕೇಶ್.ಇಷ್ಟಕ್ಕಿಂತ ಪರಿಣಾಮಕಾರಿ ಇನ್ಯವುದೇ ವಾಕ್ಯ ಕೊಡಲು ಸಾಧ್ಯವಿಲ್ಲ!

Thursday, January 1, 2009

ರೈಲು ಚಲಿಸಿದ ಹಾಗೆ ಅನ್ನಿಸಿತ್ತು!(ಸಣ್ಣಕಥೆ)

""ಮಂಜುನಾಥ ಆ ಚಿಲ್ದಾಗ ತಿನ್ನಾಕಿಟ್ಟೀನಿ ಅದನ್ನ ಎಂಟತ್ತ್ ದಿನ ಮಾಡ್ಕ್ಯಾ.ಊರು ಮುಟ್ಟಿದ್ಮ್ಯಾಕೆ ಪೋನ್ ಮಾಡ.ಕಂಪೂಟರ್ ಚೆಂದ ಕಲಿಯಾ..."ತಮ್ಮ ಮಗನ್ನ ರೈಲಿಗೆ ಹತ್ತಿಸಿದರು.
"ಹೂನ ಅವ್ವ ನೀ ಕಾಳಜಿ ಮಾಡ್ಬೇಡ ನೀ ಆರಾಮ ಇರ" ಅನ್ನ್ನುತ್ತ ಮಂಜುನಾಥ ಹಿಂದಿನ ನಿಲ್ದಾಣದಿಂದಲೇ ಹತ್ತಿದ್ದ ತನ್ನ ಇತರ ಸ್ನೇಹಿತರ ಗುಂಪಿನಲ್ಲಿ ಒಂದಾಗಿ ಹೋದ.'ಕೂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂ'ಎನ್ನುತ್ತಾ ರೈಲು ಚಲಿಸಲು ಪ್ರಾರಂಭಿಸಿತು.ಆ ತಾಯಿ ಮಗನಿಗೆ ಕೈ ಬೀಸುತ್ತಲೇ ನಿಂತಿದ್ದಳು. ಮಂಜುನಾಥ ತನ್ನ ಸ್ನೇಹಿತರ ಜೊತೆ ಹರಟುತ್ತಾ,ಗೇಲಿ ಮಾಡುತ್ತಾ, ಪೋಲಿ ಮಾತಾಡುತ್ತಾ ಬೋಗಿಯ ತುಂಬೆಲ್ಲಾ ಗದ್ದಲ ವೆಬ್ಬಿಸಿದ್ದ.ರೈಲು 'ಕುಂಟಗದ್ದೆ' ಬಿಟ್ಟಿತ್ತು.
ಫಲ್ಗುಣ ಗೆ ತನ್ನ ಕಾಲೇಜು ದಿನ ಗಳು ನೆನಪಾಗಿತ್ತು.ಮನಸ್ಸು ಅವನ ಕಾಲೇಜು ದಿನಗಳಿಗೆ ಮರಳಿತ್ತು."ಹೀಗೆ ಇದ್ದೆನಲ್ಲಾ ನಾನು ನನ್ನ ಕಾಲೇಜು ದಿನಗಳಲ್ಲಿ.ಮಣಿಪಾಲದಲ್ಲಿ ನಾನು ಇಂಜಿನೀಯರಿಂಗ್ ಸೇರುವಾಗ ಅಪ್ಪನೂ ನನ್ನನ್ನ ಹೀಗೆ ತಾನೇ ಬಿಟ್ಟು ಹೋಗಿದ್ದು.ಅಪ್ಪ ನನಗೆ ರೂಮ್ ಮಾಡಿ ಒಂದಿಷ್ಟು ಸ್ನೇಹಿತರ ಪರಿಚಯ ಮಾಡಿಸಿಕೊಟ್ಟು,ಕೈಗೆ ಒಂದಿಷ್ಟು ದುಡ್ಡು ಕೊಟ್ಟು ಇನ್ನೇನು ಊರಿಗೆ ಹೋಗಬೇಕು ಅನ್ನುವಾಗ ,ಅಪ್ಪನ್ನ ಬಸ್ ನಿಲ್ದಾಣದಲ್ಲೆ ಬಿಗಿದಪ್ಪಿ ಅಳುತ್ತ ಬಿಟ್ಟು ಹೋಗ ಬೇಡ ಅಂತ ಅತ್ತಿದ್ದು,ಅಮೇಲೆ ಒಂದೆರೆಡು ದಿನ ನನ್ನ ಜೊತೆ ಇದ್ದು ಮತ್ತೆ ಊರಿಗೆ ಹೊದರಲ್ಲವೇ...?ಈ ಎಲ್ಲವೂ ಅವನ ಮನಸಿನಲ್ಲಿ ಚಕ್...ಚಕ್..ಚಕ್ ಅನ್ನುತ್ತಾ ತಿರುವಿ ಹೋಯಿತು. ಎರೆಡು ವರ್ಷ ದೊರವಿದ್ದದ್ದರಿಂದ ಅಪ್ಪ ಅಮ್ಮ ನ್ನ ನೋಡುವ ಆಸೆ, ತನ್ನ ಗದ್ದೆಯ ತುಂಬೆಲ್ಲಾ ಇಂಚಿಂಚು ಬಿಡದಂತೆ ಅಡ್ಡಾಡ ಬೇಕು ಎನ್ನುವ ಅತೀವ ಬಯಕೆ ಫಲ್ಗುಣ ನ ಮನಸಲ್ಲಿ ಇತ್ತು.
********************************************
'ಹೊಸಹಳ್ಳಿ'ಯಲ್ಲಿ ರೈಲು ಮತ್ತೆ ನಿಂತಿತು.ಯಾವುದೋ ಎಕ್ಸಪ್ರೆಸ್ ರೈಲಿಗೆ ದಾರಿ ಬಿಡಬೇಕಾಗಿ ಬಂದಿತ್ತು.ಇದು ಪ್ಯಾಸೆಂಜರ್ ಗಾಡಿ ಕುಂಟುತ್ತಾ ಸಾಗಬೇಕು ಅಲ್ಲದೆ ಎಕ್ಸಪ್ರೆಸ್ ರೈಲುಗಳಿಗೆ ದಾರಿಯೂ ಬಿಡಬೇಕು.'ಹೊಸ ಹಳ್ಳಿ' ರೈಲು ನಿಲ್ದಾಣದಲ್ಲಿ funkey hair style ನಲ್ಲಿ ಒಬ್ಬ ಭುಜಕ್ಕೆ ಕ್ಯಾಮಾರ ನೇತು ಹಾಕಿಕೊಂಡು,ಕೈಯಲ್ಲಿ ಒಂದು ಫೈಲು ಹಿಡಿದು ಕೊಂಡು ಹತ್ತಿದ.ಅಲ್ಲೆ ಫಲ್ಗುಣ ನ ಎದುರಿಗೆ ಕಿಟಕಿ ಯ ಪಕ್ಕ ದಲ್ಲಿದ್ದ ಸ್ಥಳದಲ್ಲಿ ಆಸೀನನಾದ.ಫಲ್ಗುಣಗೆ ಅವನ ಅವತಾರ ನೋಡಿ ವಾಕರಿಕೆ ಬಂತು.ನೋಡಲು ಆಗದಿರುವಷ್ಟು ಅಸಹ್ಯವಾಯಿತು.ಆ ಚಿಂದಿಯಾದ ಜೀನ್ಸ್, ಎಡ ಕೈ ಮೇಲೆ ಮೊಣಕೈಯವರೆಗೂ ಡ್ರ್ಯಾಗನ್ TATTO(ಹಚ್ಚೆ),ಕಿವಿಯಲ್ಲಿ ದೊಡ್ಡದಾದ ಬಳೆ-ಇವೆಲ್ಲಾವನ್ನೂ ನೋಡಿ "ಛೇ, ಏನಿದು ಅವತಾರ" ಅಂತ ಮನಸಲ್ಲೇ ಅಂದು ಕೊಂಡು ಕಿಟಕಿ ಆಚೆ ಕಾಣುತ್ತಲ್ಲಿದ್ದ ಹಚ್ಚ ಹಸಿರನ್ನು ಕಣ್ತುಂಬ ನೋಡ ಹತ್ತಿದ.'ಸುಂಯ್................................' ಎಂದು ಬಿರುಗಾಳಿ ವೇಗದಲ್ಲಿ ಬಂದ ಎಕ್ಸಪ್ರೆಸ್ ರೈಲಿ ಕಿಟಕಿಯ ಪಕ್ಕದಲ್ಲಿ ನಿಂತಿತು."ಛೇ ,ಏನಿದು ಕಣ್ತುಂಬ ಹಸಿರು ನೋಡಕ್ಕೂ ಕಲ್ಲಾ....?" ಆಂತ ಮನಸಲ್ಲೇ ಅಂದು ಕೊಂಡ."Did you say something?" ಎಂದು ಫ಼ಂಕಿ ಮನುಷ್ಯ ಫಲ್ಗುಣ ನ್ನ ಕೇಳಿದ."nothing"! ಫಲ್ಗುಣ ಅಸಡ್ಡೆ ಯಿಂದ ಉತ್ತರಿಸಿದ."would you mind if I smoke here"? ಅನ್ನುತ್ತ ಸಿಗರೇಟ್ ನ್ನು ಬಾಯಿಗೆ ಇಳಿಸಿದ."never" ಫಲ್ಗುಣ ಉತ್ತರಿಸಿದ್ದ.ಕಣ್ಣುಗಳು ಅನೀರೀಕ್ಷೀತವಾಗಿ ಅವನ ಫೈಲ್ ಮೇಲೆ ಬಿತ್ತು.'PRESS' ಅಂತ ಅದರ ಮೇಲೆ ಬರೆದಿತ್ತು."ಖಂಡಿತಾ ನನಗೆ ಒಂದಿಷ್ಟು ಸಲಹೆಗಳನ್ನು ಕೊಡಬಹುದು.ಪ್ರಪಂಚದ ಎಲ್ಲಾ ವಿದ್ಯಾಮಾನಗಳನ್ನು ತಿಳಿದಿರುತ್ತಾರೆ.ಅದರಲ್ಲಿಯೂ ಈಗ ಧಗ ಧಗಿಸುತ್ತಿರುವ ಸುದ್ದಿಗಳೆಂದರೇ ಇವರಿಗೆ ಎಲ್ಲಿಲ್ಲದ ಆಸಕ್ತಿ."ಅಂದುಕೊಳ್ಳಿತ್ತಿರುವಾಗಲೇ,
"by the way I am ನಾಗೆಂದ್ರ ಹೊಸಹಳ್ಳಿ".
"ಎಲ್ಲೋ ಹೆಸರು ಕೇಳಿದ ಹಾಗೆ ಇದೆಯಲ್ಲ"?
"ಶ್ರೀಗಂಧ ಟೀವಿ ಚಾನೆಲ್ ನಲ್ಲಿ ಬರುವ 'ಮದ್ಯಾಹ್ನ ದ ಮಾತು' ಕಾರ್ಯಕ್ರಮಕ್ಕೆ ನಾನೇ ನಿರೂಪಕ ಮತ್ತು 'ಸಂಜೆಗತ್ತಲು' ಕಾರ್ಯಕ್ರಮದ ನಿರ್ದೇಶಕ.'ಸಂಜೆಗತ್ತಲು, ನ್ಯೂಸ್ ಪೇಪರ್ ಗಳಲ್ಲಿ ಬರುವ page-3 ತರಹದ ಕಾರ್ಯಕ್ರಮ.ದೊಡ್ಡ ವರ ಸಣ್ಣತನಗಳು,ಮೂರನ್ನೂ ಬಿಟ್ಟವರ ವ್ಯಕ್ತಿತ್ವದ ಅನಾವರಣ.....ಹೀಗೆ"ಎಂದು ಹೇಳಿ ತನ್ನ ಕಾರ್ಯ ಕ್ರಮದ ವಿವರ ವೃತ್ತಿಯ ವಿವರ ಗಳೆನ್ನೆಲಾ ತಿಳಿಸಿದ. ಸಲಹೆಗಳನ್ನು ಕೇಳಬೇಕೆಂದು ಕೊಂಡವ ಒಳಗೆ ಸುಮ್ಮನಾದ.ತಾನು ಕೇಳಿದ ಸಲಹೆಯನ್ನೇ ದೊಡ್ಡ ದಾಗಿ ಮಾಡಿ ಮತ್ತೆ ತನ್ನ ನ್ನೇ ಸುದ್ದಿ ಯಾಗಿ ಎಲ್ಲಿ ಬಿತ್ತರಿಸಿ ಬಿಡುತ್ತಾನೋ ಅನ್ನೋ ಆತಂಕ ಬಂತು.ಮತ್ತೆ ಅವನು ಸುದ್ದಿಗಾಗಿ ತಹ ತಹ ಸುತ್ತಿರುವವ.ಅವನಿಗೆ ಸುದ್ದಿ ಬೇಕು ಅಷ್ಟೆ.ಇಂತಹದೇ ಸುದ್ದಿಯಿಂದಿಲ್ಲ.ಏನಾದಾರೂ ಆಗಿರಬಹುದು.ಯಾರಾದರೂ ಆಗಿರಬಹುದು." ಅದಕ್ಕೆ ಏನನ್ನೂ ಕೇಳದೆ ಸುಮ್ಮನಾದ.
***************************************
ರೈಲು ಚಲಿಸಿತು!ಪಕ್ಕದಲ್ಲಿದ್ದ ರೈಲು ,ಅದು ಎಕ್ಸಪ್ರೆಸ್ ರೈಲು.ಪ್ಯಾಸೆಂಜರ್ ರೈಲು ಚಲಿಸಿದ ಹಾಗೆ ಅನ್ನಿಸಿತ್ತು.
***************************
ಫಲ್ಗುಣ ,ಆಮೇರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾಂಡಿಯಾಗೋ ಪಟ್ಟಣದಲ್ಲಿ ಸಾಫ್ಟವೇರ್ ವೃತ್ತಿ ನಿರತ.ಈಗಲೂ ಕೆಲಸದಲ್ಲಿ ಇದ್ದಾನೆ.ಇಡೀ ವಿಶ್ವವೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಸಂದರ್ಬದಲ್ಲಿ ತನ್ನ ಎಷ್ಟೋ ಸ್ನೇಹಿತರು ಆಮೇರಿಕಾದಾದ್ಯಂತ ಕೆಲಸ ಕಳೆದುಕೊಂಡಿದ್ದರು.ಇನೋ ಕೆಲವರು ಆತಂತ್ರ ದ ಸ್ಥಿತಿಯಲ್ಲಿ ಇದ್ದರು.ಕೆಲವೇ ಕೆಲವರು ಭದ್ರವಾಗಿದ್ದರು.ಅದರಲ್ಲಿ ಫಲ್ಗೂಣನೂ ಒಬ್ಬ.ತನ್ನ ಹಿರಿಯ ಅಧಿಕಾರಗಳು ಮತ್ತು ತನ್ನ ಸಹೋದ್ಯೂಗಿಗಳು ಅವನಿಗೆ ಸಾಕಷ್ಟು ಸಾರಿ "ನಿನ್ನ ಕೆಲಸದ ಬಗ್ಗೆ ಆತಂಕ ಬೇಡ" ಅಂತ ಮನವರಿಕೆ ಮಾಡಿದ್ದರು.ಆದರೆ ಅವನಿಗೆ ಆತಂಕ ನೆರಳಲ್ಲಿ ಬದುಕು ಸವೆಸುವುದು ಇಷ್ಟವಿರಲಿಲ್ಲ.ಇದೆಯಲ್ಲಾ ಗೊಂದಲಗಳಿಂದ ಹೊರಬರಲು ಬಹು ದಿನಗಳ ರಜೆ ಮೇರೆಗೆ ತನ್ನ ಹುಟ್ಟೂರಾದ 'ಹೊಸಗದ್ದೆ'ಗೆ ಬಂದಿದ್ದ.
****************************
ವಿಶ್ವ ಆರ್ಥಿಕ ಸಂಕಷ್ಟ ದಿನೇ ದಿನೇ ಏರುತ್ತಲಿತ್ತು.ಫಲ್ಗುಣ ನ ಕಂಪನಿ ಸಧೃಡ ವಾಗಿಯೇಇತ್ತು.
****************************************
ರೈಲು 'ಕೆಸರು ಗದ್ದೆ' ತಲುಪಿತ್ತು.
*******************************************