Thursday, December 27, 2018


ಪಾಕಿಸ್ತಾನದ ಮಗ್ಗಲ ಮುಳ್ಳು ಬಲೂಚಿಸ್ತಾನ....
ಮೈ ಪಾಕಿಸ್ತಾನಿ ನಹಿ ಹೂಂ! ಮೇರಾ ಪೆಹಚಾನ್ ಬಲೋಚಿ ಹೈ” ಹಾಗಂತ ಹೇಳುತ್ತಿದ್ದ ಆ ಹಡುಗಿಯ ಕಣ್ಣಲ್ಲಿ ಮಿಂಚು ಧ್ವನಿ ಯಲ್ಲಿ ಕಂಚು ತುಂಬಿತ್ತು
ಬಲೋಚಿಗರಿಗೆ ತಮ್ಮನ್ನು ತಾವು ‘ಪಾಕಿಸ್ತಾನಿ’ ಗಳೆಂದು ಒಪ್ಪಿಕೊಳ್ಳುವುದಕ್ಕೆ ಮನಸ್ಸು ತಯಾರಿಲ್ಲ, ಇನ್ನು ತಮ್ಮನ್ನು ಪಾಕಿಸ್ತಾನದ ಒಂದು ಭಾಗವೆಂದು? ಛೇ ...! ಸಾಧ್ಯವೇ ಇಲ್ಲ.
“ನೆನಪಿಡಿ,ಇತಿಹಾಸದಲ್ಲಿ ಎಂದೂ ಪಾಕಿಸ್ತಾನವಿರಲಿಲ್ಲ ಆದರೆ ಇತಿಹಾಸದ ಪುಟಗಳಲ್ಲಿ ಬಲೋಚಿಗರ ಶ್ರೀಮಂತ ಸಂಸ್ಕೃತಿ ಸೇರಿಹೋಗಿದೆ”-ಬಲೋಚಿ
ಹೀಗೆ ಯಾವ ದಿಕ್ಕಿನಿಂದಲೂ ತಮ್ಮನ್ನು ತಾವು ಪಾಕಿಸ್ತಾನದ ಭಾಗವೆಂದು ಒಪ್ಪಿಕೊಳ್ಳಲು ತಯಾರಿಲ್ಲದ ಜನತೆಯನ್ನು ಪಾಕಿಸ್ತಾನದ ಭಾಗವಾಗಿಸಿದ್ದೆ ಒಂದು ‘ರಾಜಕೀಯ ಷಡ್ಯಂತ್ರ’!!!ಪಾಕಿಸ್ತಾನದ ವಿಷಯ ಪ್ರಸ್ತಾಪವಾದಗಲೆಲ್ಲಾ ಹೇಗೆ ಜಿನ್ಹಾ ನೆನಪಾಗುತ್ತಾರೆ ಹಾಗೆ ಬಲೋಚಿಗರು ಜಿನ್ಹಾ ನೆನೆಯುತ್ತಲೆ ಆಕ್ರೋಶದಿಂದಲೇ ಬಂಡೇಳುತ್ತಾರೆ.
ಬಲೋಚಿಸ್ತಾನ:-
ಪಾಕಿಸ್ತಾನ ಹುಟ್ಟುವುದಕ್ಕೂ ಮೊದಲು ಬಲೋಚಿಸ್ತಾನದ ಅಸ್ತಿತ್ವವಿತ್ತು. ಬಲೋಚಿಸ್ತಾನ್ ಎನ್ನುವುದು  ನಾಲ್ಕು-ಕಲಾಟ್,ಲಾಸ್ ಬೆಲಾ,ಮಕರನ್ ಮತ್ತು ಖರಾನ್ ರಾಜ್ಯಗಳನ್ನೊಳಗೊಂಡ ಪಾಕಿಸ್ತಾನದ ನೈರುತ್ಯ ಭಾಗಕ್ಕಿರುವ  ಭೂ ಪ್ರದೇಶ. ಮೊದಲಿನಿಂದಲೂ ಕಲಾಟ್ ನ ಖಾನ್ ಮತ್ತು ಜಿನ್ಹಾ ನಡುವೆ ಒಂದು ಸುಮುಧರ ಬಾಂಧ್ಯವ್ಯವಿತ್ತು . ಆಗಿನ್ನು ಬಲೋಚಿಸ್ತಾನದ ಕೆಲವು ಭಾಗಗಳು ಬ್ರೀಟಿಷರ ಕೈಯಲ್ಲಿದ್ದ ಕಾಲ .ಹಾಗಾಗಿ  ಸ್ವತಃ ಜಿನ್ಹಾರೆ ಬಲೋಚಿಸ್ತಾನ್ ಸ್ವಾತಂತ್ರದ ವಕಾಲತ್ತು ವಹಿಸಿದ್ದರು.ಆಗಷ್ಟ್ 11 1947ರಂದು ಬ್ರೀಟಿಷರು ಕಲಾಟ್ ನ್ನು ಸ್ವಾತಂತ್ರವೆಂದು ಘೋಸಿಸಿದರು.ಈ ಘಟನೆಯಾದ ಕೇವಲ ನಾಲ್ಕು ದಿನಗಳ ನಂತರ ಜಗತ್ತಿನ ಭೂಪಟದಲ್ಲಿ ಇನ್ನೊಂದು ರಾಷ್ಟ್ರ,ಅಂದರೆ ಪಾಕಿಸ್ತಾನವೆನ್ನುವ ದ್ವೇಷದಿಂದ ಹುಟ್ಟಿದ ಮತ್ತೊಂದು ರಾಷ್ಟ್ರದ ಉಗಮವಾಯಿತು.ಆಗ ಕಲಾಟ್ ರಾಜ್ಯಕ್ಕೆ(ಬಹುತೇಕ ಬಲೂಚಿಗರು ಇರುವ ಪ್ರದೇಶ) ಕೆಲವು ಒಪ್ಪಂದಗಳನ್ನು ಪಾಕಿಸ್ತಾನ ಮತ್ತು ಕಲಾಟ್ ನ ರಾಜನ ನಡುವೆ ಬ್ರಿಟಿಷ್ ಸರ್ಕಾರ ಬರೆದಿತ್ತು. ಅದರಲ್ಲಿ ಮುಖ್ಯವಾಗಿ ವಿದೇಶಾಂಗ ನೀತಿಗಳು ಮತ್ತು ರಕ್ಷಣಾ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಸ್ವಾಯತ್ತತೆ ಇರುವುದಾಗಿತ್ತು.
 ಬಲೋಚಿಸ್ತಾನದ ಭೂಭಾಗ ಮತ್ತು ಅಲ್ಲಿನ ಜನರ ಮನಸ್ಥಿತಿಯನ್ನು ಚೆನ್ನಾಗಿಯೆ ಅರಿತಿದ್ದರು ಜಿನ್ಹಾ.ಆಗಸ್ಟ್ 1947 ರಂದು ಸ್ವಾತಂತ್ರ ಹೊಂದಿದ ಪಾಕಿಸ್ತಾನದ ಮೊದಲ ಗವರ್ನರ್ ಜನರಲ್ ಆಗಿದ್ದ ಮೊಹದಮದ್ ಅಲಿ ಜಿನ್ಹಾ ಒಂದು ಷಡ್ಯಂತ್ರವನ್ನು ರಚಿಸಿ ಬಲೋಚಿಸ್ತಾನವನ್ನು ಪಾಕಿಸ್ತಾನಕ್ಕೆ ಸೇರಿಸುವಂತೆ’ಖಾನ್ ಆಫ್ ಕಲಾಟ್’ ಗೆ ಸಂದೇಶ ರೆವಾನಿಸಿದ್ದನು.ಬಲೋಚಿಸ್ತಾನ ಪಾಕಿಸ್ತಾನವನ್ನು ಸೇರುವುದಕ್ಕೆ ಒಂದು ಉದ್ದೇಶವನ್ನೂ ರಚಿಸಿದ್ದನು ಆದೇನೆಂದರೆ “ನಾವೆಲ್ಲರು ಮುಸಲ್ಮಾರು”!!!
ಏಕೆ ಪಾಕಿಸ್ತಾನಕ್ಕೆ ಬಲೋಚಿಸ್ತಾನ ಬೇಕು:-
1.ಸುಮಾರು ಶೇ,44 ಪಾಕಿಸ್ತಾನದ ಭಾಗ ಬಲೋಚಿಸ್ತಾನವನ್ನು ಒಳಗೊಂಡಿದೆ
2.ನೈಸರ್ಗಿಕವಾಗಿ ದೊರೆಯುವ ಅನಿಲ ಮತ್ತು ಖನಿಜ ಸಂಪತ್ತಿನಿಂದ ಬಲೋಚಿಸ್ತಾನ ಭಾಗ ಶ್ರೀಮಂತವಾಗಿದೆ
3.ಮತ್ತೆ ತೀರ ಇತ್ತೀಚಿನ ಬೆಳವಣಿಗೆಗಳಲ್ಲಿ ಚೀನಾ ಮತ್ತು ಇರಾನಗಳಿಗೆ ಸಂಪರ್ಕ ಕಲ್ಪಿಸುವ ವ್ಯಪಾರ,ವ್ಯವಹಾರ ಮತ್ತು ವಾಣಿಜ್ಯಾತ್ಮಕವಾಗಿ ಬೆಳೆಯಲು ಹೆಬ್ಬಾಗಿಲಾಗಿದೆ.
  ಪಾಕಿಸ್ತಾಕ್ಕೂ ಮೊದಲೆ ವ್ಯವಸ್ಥಿತವಾದ ಸಂಸತ್ತನ್ನು ಹೊಂದಿದ್ದ ಬಲೋಚಿಸ್ತಾನದಲ್ಲಿ ಜಿನ್ಹಾರ ಪ್ರಸ್ತಾಪವನ್ನು ಫೆಬ್ರವರಿ 1948ರಂದು House of Commons and a House of Lords ಮುಂದೆ ಪ್ರಸ್ತಾಪಿಸಲಾಯಿತು.ಆದರೆ ಸಂಸತ್ತಿನ ಎರೆಡೂ ಮನೆಗಳು ಜಿನ್ಹಾರ ಪ್ರಸ್ತಾಪವನ್ನು ತೀಕ್ಷ್ಣವಾಗಿ ತಿರಸ್ಕರಿಸದ್ದವು.ಅದಾದ ಕೆಲವೆ ದಿನಗಳ ನಂತರದಲ್ಲಿ ಉಳಿದ ಮೂರು ರಾಜ್ಯಗಳಾದ ಲಾಸ್ ಬೆಲಾ,ಮಕರನ್ ಮತ್ತು ಖರಾನ್ ಪಾಕಿಸ್ತಾನಕ್ಕೆ ಸೇರುವುದಕ್ಕೆ ಒಪ್ಪಿಕೊಂಡಿವೆ ಎನ್ನುವ ಸುದ್ದಿಯನ್ನು ಬೇಕು ಅಂತಲೆ  ಕಲಾಟ್ ನ ಖಾನಗೆ ತಲುಪಿಸಿದರು.ಆ ಹೊತ್ತಿಗಾಗಲೆ ಪಾಕಿಸ್ತಾನದ ದುರ್ಬುದ್ದಿಯಿಂದ  ನಲುಗಿ ಹೋಗಿದ್ದ ಖಾನ್(ಕಲಾಟ್) .ಅಷ್ಟೆ ಅಲ್ಲದೆ ಪಾಪಿ ಪಾಕಿಸ್ತಾನ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮಾರ್ಚ್ 1948ರಂದು ಬಲೋಚಿಸ್ತಾನದ ಕರಾವಳಿ ಮೇಲೆ ಆಕ್ರಮಣ ಮಾಡಿ ‘ಕಲಾಟ್ ನ ಖಾನ್’ ನನ್ನು ಒತ್ತಾಯ ಪೂರ್ವಕವಾಗಿ ಪಾಕಿಸ್ತಾನವನ್ನು ಸೇರುವಂತೆ ಸಹಿ ಹಾಕಿಸಿಕೊಂಡರು.ಅಲ್ಲಿಗೆ ಒಂದು ಶ್ರೀಮಂತ ಸಂಸ್ಕೃತಿ,ಅಪರಿಮಿತ ಖನಿಜ ಸಂಪತ್ತನ್ನು ಹೊಂದಿದ್ದ ಭೂಬಾಗವನ್ನು ಕಬಳಿಸವು ಹುನ್ನಾರಕ್ಕೆ ಜಯ ಸಿಕ್ಕಂತಾಗಿತ್ತು.ಆದರೆ ಬ್ರಿಟಿಷರಿಂದ ಸ್ವತಂತ್ರ ಹೊಂದಿ ಸುಮಾರು 227 ದಿನಗಳ ಕಾಲ ಸ್ವತಂತ್ರ ರಾಷ್ಟ್ರವಾಗಿದ್ದ ಬಲೋಚಿಸ್ತಾನವನ್ನು ರಾಷ್ಟ್ರದ ಭೂಪಟದಲ್ಲಿಯೆ ಇರದ ರಾಷ್ಟ್ರ ನಿರ್ನಾಮ ಮಾಡಿಯಾಗಿತ್ತು.ಅಲ್ಲಿಂದ ಇಲ್ಲಿಯ ವರೆಗೆ ಬಲೋಚಿಸ್ತಾನದ ಸ್ವಾತಂತ್ರಕ್ಕೆ ನಡೆದ ಹೋರಾಟದ್ದೆ ಒಂದು ರಕ್ತ ಸಿಕ್ತ ಅಧ್ಯಾಯ.

ಬಲೋಚಿಗರ ಸ್ವಾತಂತ್ರ ಹೋರಾಟ:-
 ಪಾಕಿಸ್ತಾನದಲ್ಲಿರುವ ಐದು ಪ್ರಾವಿನೆನ್ಸಗಳಲ್ಲಿ ಬಲೋಚಿಸ್ತಾವೂ ಒಂದು.- ಪಂಜಾಬ,ಸಿಂಧ್,ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನ.ಮೊದಲಿನಿಂದಲೂ ವಿದೇಶ ನೀತಿ ಮತ್ತು ರಕ್ಷಣಾ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಸ್ವಾಯತ್ತತೆ ಬೇಕೆಂದು ಬಯಸಿದ್ದ ಬಲೋಚಿಗರಿಗೆ ಜಿನ್ಹಾನ ನಡೆ ಹಿಂದಿನಿಂದ ತಿವಿದ ಚಾಕುವಿನಂತಾಗಿತ್ತು.ಆ ಕ್ಷಣದಿಂದಲೆ ತಮ್ಮ ‘ಅಸ್ತಿತ್ವಕ್ಕಾಗ ಬಲೊಚಿಗರು ಹೋರಾಟ ನಡೆಸುತ್ತಲೆ ಇದ್ದಾರೆ. ಒಮ್ಮೆ ಉಗ್ರವಾಗಿದ್ದು ಮೊಗದಮ್ಮೆ ಸಾತ್ವಿಕವಾಗಿ ಕೇವಲ ರಾಜ ನೀತಿಗಳಿಂದ ಪಾಕಿಸ್ತಾವನ್ನು ಹಣಿಯುವ ಪ್ರಕ್ರಿಯೆ  1948ರಿಂದ ಇಲ್ಲಿಯ ವರೆಗೆ ನಡೆದೆ ಇದೆ!ಇದರಲ್ಲಿ – ‘ಬಲೂಚ ಲಿಬರೇಷನ್ ಆರ್ಮಿ, ಬಲೂಚ ರಿಪಬ್ಲಿಕನ್ ಆರ್ಮಿ,ಬಲೂಚ ಲಿಬರೇಷನ್ ಫ್ರಂಟ್,ಬಲೂಚಿ ರೆಪಬ್ಲಿಕನ್ ಪಾರ್ಟಿ,ಪ್ರಮುಖವಾದ ಸಂಘಟನೆಗಳು. ಈ ಸ್ವತಂತ್ರ ಹೋರಾಟದಲ್ಲಿ ಅಕ್ಬರ್ ಬುಕ್ತಿ ಹೆಸರು ಮುಂಚುಣಿಯಲ್ಲಿತ್ತು. ಪಾಕಿಸ್ತಾನದ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ರಾಜಕೀಯವಾಗಿ ಪಾಕಿಸ್ತಾನವನ್ನು ಹಣಿಯಲು ಭುಕ್ತಿ ಹವಣಿಸಿದ್ದರು.ಆದರೆ ಯಾವಾಗ ರಾಜಕೀಯ ದಾಳಗಳು ಫಲ ಕೊಡದೆ ಹೋಯಿತೊ, ಶಸ್ತ್ರಾಸ್ತ ಹೋರಟಕ್ಕೆ  ಅಣಿಯಾದರು.ಆದರೆ 2006 ರಲ್ಲಿ  ಪಾಕಿಸ್ತಾನದ ಪಿತೋರಿಯಿಂದ ಅಕ್ಬರ್ ಬುಕ್ತಿಯನ್ನು ಹತ್ಯೆಗೈಯಲಾಯಿತು.ಇಂತಹ ಎಷ್ಟೋ ಹೊರಾಟಗಾರರನ್ನು ಮತ್ತು ಹೋರಾಟಗಳನ್ನು ಮಣಿಸಲು ಪಾಕಿಸ್ತಾನ ಅಡ್ಡದಾರಿ ಹಿಡಿದಿದ್ದಾಗಿದೆ.ಅಂತರಾಷ್ಟ್ರೀಯ ಮಟ್ಟದಲ್ಲಿ ಬಲೂಚಿಗರು ತಮ್ಮ ಹೋರಾಟಕ್ಕೆ ಬೆಂಬಲ ಸಿಗಬೇಕು ಎನ್ನುವ ಉದ್ದೇಶದಿಂದ ಪಾಕಿಸ್ತಾನ ಎಸಗಿದ ಪಾಪ ಕೃತ್ಯಗಳ ಒಂದು ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.ಆ ಪಟ್ಟಿಯಲ್ಲಿರುವ ಕೆಲವು ಪ್ರಮುಖ ಅಂಶಗಳು ಈ ಕೆಳಗಿನಂತಿವೆ.
·         ಬಲೂಚಿಗರ ಕಣ್ಮರೆ
·         ಮಾನವ ಹಕ್ಕುಗಳ ಉಲ್ಲಂಘನೆ
·         ಬಲೂಚಿಸ್ತಾನ ಸ್ವಾತಂತ್ರ ಹೋರಾಟಗಾರರ ಅಪಹರಣ
·         ಮತ್ತು ಎಲ್ಲಕಿಂತ ಮಿಗಲಾದದ್ದು ಪಾಕಿಸ್ತಾನಕ್ಕು ಮೊದಲೆ ಬೇರೆ ರಾಷ್ಟ್ರವೆಂದು ಗುರುತಿಸಿಕೊಂಡಿದ್ದನ್ನು ಮೊಸದಿಂದ ಅತಿಕ್ರಮಗೊಳಿಸಲಾಗದೆ
·         ಬಲೂಚಿಗರ ಬಡತನಕ್ಕೆ ಗಮನ ಕೊಡದ ಪಾಕಿಸ್ತಾನದ ರಾಜಕೀಯ ಹಿತಾಸಕ್ತಿ
·         ಮರೀಚಿಕೆಯಾಗಿರುವ ಅಭಿವೃಧ್ಧಿಗಳು

ಭಾರತದ ಪಾತ್ರ:-ಭಾರತಕ್ಕೆ ಯಾವುದೆ ತೆರೆನಾದ ಸಂಬಂಧವಿರದ ಭೂಭಾಗವಾಗಿರುವ ಬಲೂಚಿಸ್ತಾನದ ಸ್ವಾತಂತ್ರ ಪಾಕಿಸ್ತಾನವನ್ನು ಹಣಿಯುವ ಒಂದು ತಂತ್ರ ಹೊರತು ಬೇರೆನು ಆಗಿರಲಿಕ್ಕೆ ಸಾಧ್ಯವಿಲ್ಲವೆಂದು ಭಾರತದ ಭದ್ರತಾ ಸಲಹೆಗಾರರಾಗಿರುವ – ಅಜಿತ್ ಧೋವಲ್ ಅವರೆ ಕೆಲವು ಸಂದರ್ಶನಗಳಲ್ಲಿ ಹೇಳಿದ್ದಾರೆ.ಇದರ ಒಂದು ತಂತ್ರವೆನ್ನುವಂತೆ  ನಮ್ಮ ಪ್ರಧಾನ ಮಂತ್ರಿ ನರೆಂದ್ರ ಮೋದಿಯವರು ಸಹಾ ಆಗಸ್ಟ್ 15 2016ರಂದು ಬಲೋಚಿಸ್ತಾನದ ಜನತೆಗೆ ನಾವು ನಿಮ್ಮ ಜೊತೆ ಇದ್ದೇವೆ ಎಂದು ಹೇಳಿಕೆ ಕೊಟ್ಟಿದ್ದರು.ಇದಾದ ನಂತರ ಬಲೂಚಿಸ್ತಾನದಲ್ಲಿ ಒಂದು ಸಂಚಲನವೆ ಸೃಷ್ಟಿಯಾಗಿತ್ತು.ಬಲೂಚಿಗರು ಈಗಲೂ ಭಾರತದ ಕಡೆ ತಮ್ಮ ಆಸೆಗಣ್ಣಿನಿಂದ ನೋಡುತ್ತಲೆ ಇದ್ದಾರೆ.ಹೇಗೆ ಭಾರತವು ಪೂರ್ವ ಪಾಕಿಸ್ತಾನಕ್ಕೆ ತನ್ನ ಸಹಾಯಹಸ್ತ ಚಾಚಿ ಅದನ್ನು ಪಶ್ಚಿಮ ಪಾಕಿಸ್ತಾನದಿಂದ ಬೇರ್ಪಡಿಸಿ ಬಂಗ್ಲಾ ಎನ್ನುವ ಒಂದು ಹೊಸ ರಾಷ್ಟ್ರ ನಿರ್ಮಾಣಕ್ಕೆ ಸಹಾಯಮಾಡಿತೊ , ಅದೆ ರೀತಿ ಭಾರತವು ಬಲೂಚಿಗರ ಹೋರಾಟಕ್ಕೆ ಸಹಾಯ ಮಾಡಿ ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸಿ ಬಲೂಚಿಗರ ಅಸ್ತಿತ್ವ ಕಾಪಾಡಬೇಕು.ಎನ್ನುವುದು ಬಲೂಚಿಗರ ಬಹುದಿನದ ಬಯಕೆ.



Wednesday, November 21, 2018

ಏಕತಾ ಮೂರ್ತಿ...

                                                                       ಏಕತಾ ಮೂರ್ತಿ

"Intelligence  also has to be devided"?" – ಜಿನ್ಹಾ
“No, Intelligence can not be divided .You have your own intelligence ." – ಸರ್ದಾರ್
  ಇದು ಸರ್ದಾರ ಪಾಟೇಲ್!!!
  ಭಾರತದ ಸ್ವಾತಂತ್ರ ಕಥೆಯ ಜೊತೆ ‘ವಿಭಜನೆ’ ಎನ್ನುವ ಕರಾಳ ಪುಟವನ್ನು ಬ್ರೀಟೀಷರು ಮತ್ತು ಸ್ವಾರ್ಥ ಸಾಧನೆಗೋಸ್ಕರ ಜಿನ್ಹಾ ಮಂಡಿಸಿದ್ದ –‘ಎರೆಡು ರಾಷ್ಟ್ರಗಳ ಸಿಧ್ದಾಂತ’ ವು ತೆರೆದು ಕೊಳ್ಳುತ್ತಿರುವಾಗ ಸರ್ದಾರ್ ಪಟೇಲ್ ತೋರಿದ್ದ ಮುತ್ಸದ್ದಿತನವನ್ನು ಮೇಲಿನ ಸಂಭಾಷಣೆ ತೋರಿಸುತ್ತದೆ.ದೇಶ ವಿಭಜನೆಯ ಕೊನೆ ಹಂತದ ಸಭೆಗಳಲ್ಲಿ ಜಿನ್ಹಾನ ಕುಹಕ ಬುಧ್ದಿಯನ್ನು ಅಲ್ಲಲ್ಲೆ ತಡೆ ಹಿಡಿದು ಹಿಂದುಸ್ತಾನಕ್ಕಿಂತ ಪಾಕಿಸ್ತಾನ ಬಲಾಢ್ಯ ರಾಷ್ಟ್ರವಾಗುವಂತೆ ಜಿನ್ಹಾ ಮಾಡುತಿದ್ದ ಕುತಂತ್ರವನ್ನು ಹದ್ದು ಬಸ್ತಿಗೆ ತಂದದ್ದು ಸರ್ದಾರ ಪಟೇಲ್.
  ಸಾವಿರಾರು ದೇಶ ಪ್ರೇಮಿಗಳ ತ್ಯಾಗ ಮತ್ತು ಬಲಿದಾನಗಳಿಂದ ಭಾರತವು ಸ್ವಾತಂತ್ರವೇನೊ ಆಯಿತು.ಆದರೆ ರಾಷ್ಟ್ರದ ಮುಂದಿದ್ದ ಸವಾಲುಗಳು ಬೆಟ್ಟದಷ್ಟಿದ್ದವು.ಆವುಗಳಲ್ಲಿ  ಮುಖ್ಯವಾದುದು – ದೀಶಿಯ ಪ್ರಾಂತಗಳ ವಿಲೀನ.ಸುಮಾರು ಐದು ನೂರಾ ಐವತ್ತೆರೆಡು  ದೇಶಿಯ ಪ್ರಾಂತಗಳಿದ್ದವು.ಬಹುತೇಕ ಎಲ್ಲಾ ರಾಜ ಮನೆತನಗಳು ಭಾರತದ ಒಕ್ಕೂಟಕ್ಕೆ  ವಿಲೀನವಾಗಲು ಒಪ್ಪಿದವು.ಅದರಲ್ಲೂ ಕೆಲವು ರಾಜರು ಒಪ್ಪದೆ ಹೋದಾಗ ಅವರವರ ಸಾಮರ್ಥ್ಯ ಮತ್ತು ಯೋಗ್ಯತೆಗನುಗುಣವಾಗಿ ಸಭೆಗಳನ್ನು ನಡೆಸಿ, ಇಲ್ಲವೆ ಹೆದರಿಕೆಯ ತಂತ್ರದಿಂದ ಭಾರತದ ಒಕ್ಕೂಟಕ್ಕೆ ಒಪ್ಪಿಕೊಳ್ಳುವಂತೆ ಮಾಡಿದರು.ಆದರೆ ಜೂನಾಗಢ,ಕಾಶ್ಮೀರ ಮತ್ತು ಹೈದರಬಾದ ಮತ್ತು ಸಂಸ್ಥಾನಗಳನ್ನು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ತರುವಲ್ಲಿ ಸರ್ದಾರ ಪಟೇಲ್ ರ ಮುತ್ಸದ್ದಿತನ ತೋರುತ್ತದೆ.
 ಜುನಾಗಢದ ಸಂಸ್ಥಾನದ ರಾಜ ಮೊಹಮ್ಮದ್ ಮೊಹಬ್ಬತ್ ಖಾನ್- (ಮೂರನೆಯ) ಸೆಪ್ಟೆಂಬರ್ ಹದಿಮೂರ 1947 ರಂದು “ಜುನಾಗಢ ಸಂಸ್ಥಾನವು ಪಾಕಿಸ್ತಾನದ ಒಕ್ಕೂಟಕ್ಕೆ ಸೇರಿದೆ” ಎಂದು ಘೋಷಿಸಿಬಿಡುತ್ತಾನೆ.ಮೊದಲೆ ಪಾಕಿಸ್ತಾನವನ್ನು ಧರ್ಮದ ಆಧಾರದ ಮೇಲೆ ಸೃಷ್ಟಿಸಲಾಗಿದೆ.ಆದರೆ ಜುನಾಗಢದ ಬಹುಸಂಖ್ಯಾತ ಹಿಂದುಗಳು ರಾಜನ ಘೋಷಣೆ ವಿರುಧ್ಧ ದಂಗೆ ಎದ್ದರು.ಅದೆ ವರ್ಷ ಡಿಸೆಂಬರ್ ನಲ್ಲಿ ಜನಾಭಿಪ್ರಾಯವನ್ನು ಸಂಗ್ರಹಿಸಿ ಜುನಾಗಢನ್ನು ಭಾರತದ ಒಕ್ಕೂಟಕ್ಕೆ ತರಲಾಯಿತು. ಕಾಶ್ಮಿರದ್ದು ಇನ್ನೊಂದು ಕಥೆ!!! ಕಾಶ್ಮಿರ ದ ರಾಜ ಮಹಾ ರಾಜ ಹಿರಿ ಸಿಂಗ್ ಭಾರತದ ಒಕ್ಕೂಟ ವ್ಯವಸ್ಥೆಯಲ್ಲೂ  ಬಾರದೆ ಪಾಕಿಸ್ತಾನಕ್ಕು ಹೋಗದೆ ಸ್ವತಂತ್ರ ವೆಂದು ಘೋಷಿಸಿ ಬಿಟ್ಟ.ಆದರೆ ಪಾಪಿ ಪಾಕಿಸ್ತಾನ ಕಾಶ್ಮಿರವನ್ನು ಕಬಳಿಸುವ ಹುನ್ನಾರದಿಂದ ಕಾಶ್ಮಿರದ ಮೇಲೆ ಆಕ್ರಮಣ ಮಾಡಿತು.ಮಹಾರಾಜ ಹರಿ ಸಿಂಗ್ ಭಾರತದ ಸಹಾಯನ್ನು ಕೇಳಿದಾಗ “ಭಾರತದ ಜೊತೆ ವಿಲೀನವಾದರೆ  ಮಾತ್ರ ನಾವು ನಿಮಗೆ ಸಹಾಯವನ್ನು ಮಾಡಬಲ್ಲೆವು” ಎನ್ನುವ ಕಠಿಣ ಸಂದೇಶವನ್ನು ರೆವಾನೆ ಮಾಡುತ್ತಲೆ ಕಬ್ಬಿಣ ಕಾದಾಗಲೆ ಬಡಿಯಬೇಕು ಎನ್ನುವ ಸಿಧ್ದಾಂತವನ್ನು ಬಳಸಿ ಮುತ್ಸದ್ದಿತನವನ್ನು ತೋರಿದ್ದರು ಪಟೇಲ್.ಆ ಕಡೆ ಪಾಕಿಸ್ತಾನದ ದಾಳಿಯಿಂದ ತಪ್ಪಿಸಿಕೊಳ್ಳಲಾಗದೆ ಕೊನೆಗೆ  ಅಕ್ಟೋಬರ್ 26 1947 ರಂದು ಭಾರತದ ಒಕ್ಕೂಟಕ್ಕೆ ಸೇರಿಕೊಳ್ಳಲು ಕಾಶ್ಮೀರದ ರಾಜ ಮಹಾರಜ ಹರಿ ಸಿಂಗ್ ಒಪ್ಪಿಕೊಳ್ಳುತ್ತಾನೆ.ಆದರೆ ಎಲ್ಲಾ ರಾಜ ಸಂಸ್ಥಾನಗಳ ಭಾರತ  ಒಕ್ಕೂಟದ ವಿಲೀನಕ್ಕಿಂತ ಭಿನ್ನ ಮತ್ತು ರೋಚಕವಾದ ಇತಿಹಾಸವನ್ನು ಹೊಂದಿರುವುದೆಂದರೆ ಹೈದರಬಾದಿನ ವಿಲೀನ.
ಆಪರೇಷನ್ ಪೋಲೊ:-
  ಹೈದರಬಾದ್ ಪ್ರಾಂತವನ್ನು ಹೈದರಬಾದಿನ ನಿಜಾಮರ ಸಂತತಿಯಾದ ಮೀರ್ ಒಸ್ಮಾನ ಅಲಿ ಖಾನ್ ಆಳುತಿದ್ದನು.ಆದರೆ ಹೈದರಬಾದ್ ಪ್ರಾಂತವು ಹಿಂದೂ ಬಾಹುಳ್ಯದಿಂದ ಕೂಡಿದ್ದ ಭಾಗವಾಗಿತ್ತು.ಹೈದರಬಾದ್ ನಿಜಾಮನು ಭಾರತ ಸ್ವಾತಂತ್ರದ ನಂತರ ತಾನು ಸ್ವತಂತ್ರವಾಗಿಯೆ ಇರುವೆ ಎಂದು ಘೋಷಿಸಿ ಕೊಂಡಿದ್ದ.ಆದರೆ ಅವನ ಮನಸ್ಸಿನಲ್ಲಿ ಹೈದರಬಾದ್ ಪಾಕಿಸ್ತಾನದ ಭಾಗವಾಗಬೇಕು ಎನ್ನುವದಾಗಿತ್ತು.ಭಾರತವು ಸ್ವತಂತ್ರವಾಗಿ ಪಾಕಿಸ್ತಾನವೆನ್ನುವ ರಾಷ್ಟ್ರ ಉದಯವಾದಾಗ ಇದೆ ಹೈದರಬಾದಿನ ನಿಜಾಮ ಪಾಕಿಸ್ತಾನಕ್ಕೆ  ಒಂದು ದೊಡ್ಡ ಮೊತ್ತದ ಸಹಾಯವನ್ನು ಮಾಡಿ ತನ್ನ ‘ಮುಸ್ಲಿಂ’ ಪ್ರೇಮವನ್ನು ಯಾವುದೆ ಮುಜುಗರವಿಲ್ಲದೆ ತೋರಿರುತ್ತಾನೆ.ಈ ನಿಜಾಮನನ್ನು ನಿಯಂತ್ರಿಸುತ್ತಿದ್ದುದು - the most cruel villain of the Hyderbad story, ಅದೆ ಖಾಸಿಂ ರಿಜ್ವಿ!!!!.
   ಖಾಸಿಂ ರಿಜ್ವಿ ‘ರಜಾಕರ’ ಎನ್ನುವ ಸೇನೆಯ ತೆರೆನಾದ ಖಾಸಗಿ  ತಂಡವನ್ನು ಕಟ್ಟಿಕೊಂಡು ಹೈದರಬಾದಿನ ಸುರಕ್ಷೆಗೆ ಹೋರಾಡುತ್ತಿರುವ ಒಬ್ಬ ಬಂಡು ನಾಯಕ!!.(‘ರಜಾಕರ’ ರ ಹಾವಳಿ ಮತ್ತು ಉಪಟಳಗಳನ್ನು ತಿಳಿಯ ಬೇಕಾದರೆ ಈಗಿನ ಹೈದರಬಾದ ಕರ್ನಾಟಕ ಭಾಗದ 85 ವಯಸ್ಸು ದಾಟಿರುವ ಹಿರಿಯರನ್ನು ಕೇಳಿ).ಇದೆ ಖಾಸಿಂ ರಿಜ್ವಿ ಆಗಿನ ಗೃಹ ಖಾತೆಯ ಮಂತ್ರಿ ಮತ್ತು ಉಪ ಪ್ರಧಾನಿಯಾಗಿದ್ದ ಸರ್ದಾರ್ ಪಟೇಲರನ್ನು ಮುಖತಃ ಭೇಟ್ಟಿಯಾಗಿ –“ಹೈದರಬಾದ್ ಸ್ವತಂತ್ರ ರಾಷ್ಟ್ರ ಮತ್ತು ಹೈದರಬಾದಿನ ಮೇಲೆ ಏನಾದರು ಶಕ್ತಿ ಪ್ರದರ್ಷನಕ್ಕೆ ಭಾರತವು ನಿಂತರೆ,ಭಾರತದ ಸೈನ್ಯವು  ಒಂದು ಕೋಟಿ ನಲವತ್ತು ಲಕ್ಷ ಹಿಂದುಗಳ ಹಣವನ್ನು ನೋಡ ಬೇಕಾಗುತ್ತದೆ” ಎಂದು ಹೆದರಿಸಿದಾಗ.ಅಷ್ಟೆ ಸಮಾಧಾನದಿಂದ “ನೀವು ಹಿಂದುಗಳ ಹೆಣವನ್ನು ಉರುಳಿಸುವ ವರೆಗು ನಾವು ಸುಮ್ಮನಿರುತ್ತೆವೆಯೆ?” ಎಂದು  ಖಡಕ್ ಉತ್ತರವನ್ನು ಕೊಟ್ಟು ‘ಆಪರೇಷನ್ ಪೋಲೊ’ ಗೆ ಹಸಿರು ನಿಶಾನೆಯನ್ನು ತೋರಿಸುತ್ತಾರೆ.ಮುಂದೆ ಕೆವಲ 108 ಗಂಟೆಗಳಲ್ಲಿ ಹೈದರಬಾದ್ ಭಾರತದ ಮುಂದೆ ಮಂಡಿಯೂರಿ ಕುಳಿತು ಬಿಟ್ಟಿತು.
  ಹೀಗೆ ಹಿಂದುಸ್ಥಾನಕ್ಕೆ ತಲೆ ನೋವಾಗಿದ್ದ ಮೂರು ದೇಶಿಯ ಪ್ರಾಂತಗಳನ್ನು ಭಾರತದ ಒಕ್ಕೂಟಕ್ಕೆ ತಂದಿದ್ದರು ಸರ್ದಾರ ಪಟೇಲ್,ಐದುನೂರ ಐವತ್ತರೆಡು ಪ್ರಾಂತಗಳನ್ನು ಭಾರತದಲ್ಲಿ ವಿಲೀನ ಗೊಳಿಸದೆ ಯಾವುದಾದರೊಂದು ಪ್ರಾಂತ ಭಾರತದ ಒಕ್ಕೂಟದ ವ್ಯವಸ್ಥೆಯಿಂದ ಹೊರಗಡೆ ಉಳಿದಿದ್ದೇ ಆಗಿದ್ದರೆ ಭಾರತದ ಭೂಪಟ ಈಗಿನಂತೆ ಇರುತ್ತಿರಲಿಲ್ಲ.ಹೀಗೆ ಎಲ್ಲಾ ಪ್ರಾಂತಗಳನ್ನು ಏಕತೆಯೊಳಗೆ ಬಂಧಿಸಿದ ‘ಉಕ್ಕಿನ ಮನುಷ್ಯ’ಗೆ ಈಗ  ತಡವಾಗಿಯಾದರು ನಾವು ಗೌರವ ತೋರುವ ಸಮಯ.ರಾಷ್ಟ್ರದ ಅಖಂಡತೆಯನ್ನು ಸಾರಿ ನಾಡಿನ ಏಕತೆಯ ಹರಿಕಾರನಾಗಿದ್ದ ಪಟೇಲ್ ರ ಬೃಹತ್ ಮೂರ್ತಿಯನ್ನು ಸ್ಥಾಪಿಸುವುದು ಅದೆ ‘ಏಕತೆಯ ಮೂರ್ತಿ’!!!.ಇದು ಭಾರತೀಯರಾದಂತಹ ನಾವು ತೋರಿಸುತ್ತಿರುವ ಗೌರವ,ಭಕ್ತಿ,ಪ್ರೀತಿ ಮತ್ತು ವಿಶ್ವಾಸ!!!
 2010 ರಲ್ಲಿ ಆಗಿನ ಗುಜರಾತ ಸರ್ಕಾರ Sardar Vallabhbhai Patel Rashtriya Ekta Trust (SVPRET) ಎನ್ನುವಂತಹ ಒಂದು ಸಂಸ್ಥೆಯನ್ನು ಸ್ಥಾಫನೆಮಾಡಿತು, ಸರ್ದಾರ ಪಟೇಲರ ಪುತ್ಥಳಿಯನ್ನು ಪ್ರತಿಷ್ಠಾಪಿಸುವ ಜವಬ್ದಾರಿಯನ್ನು ಆ ಸಂಸ್ಥೆಗೆ ವಹಿಸಲಾಯಿತು. ಆಕ್ಟೋಬರ್ 31 2014 ರಲ್ಲಿ ಆಗಿನ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೆಂದ್ರ ಮೋದಿ–‘ Statue of Unity’ ಗೆ ಭೂಮಿ ಪೂಜೆ ಮಾಡಿದರು. Sardar Vallabhbhai Patel Rashtriya Ekta Trust (SVPRET) ಸಂಘಟನೆಯ ಉಸ್ತುವಾರಿಯಲ್ಲಿ ಈ ಯೋಜನೆಯು ಪ್ರಗತಿಯಲ್ಲಿದೆ.ಇದೆ ಅಕ್ಟೋಬರ್ 31 ಕ್ಕೆ ಇದರ ಉದ್ಘಾಟನೆಯೂ ಆಗಲಿದೆ.
   ‘Statue of Unity’ ಯ ಕೆಲವು ಅಂಕಿ ಸಂಖ್ಯೆಗಳು:-
ಮೂರ್ತಿಯ ಎತ್ತರ:-182 ಮೀಟರಗಳು,ಪ್ರಪಂಚದ ಅತಿ ಎತ್ತರದ ಮೂರ್ತಿ
ಎಲ್ಲಿ:-ನರ್ಮದಾ ನದಿಯ ಆಣೆಕಟ್ಟೆಯ ದ್ವೀಪವಾದಂತಹ ‘ಸಾಧು ಬೇಟ್’ನಲ್ಲಿ.
ಮೂರ್ತಿ ತಯಾರಿಕೆ ಬೇಕಾಗಿರುವ ಸಾಮಾಗ್ರಿಗಳ ವಿವರ:- 75000 ಘನ ಮೀಟರ್ ನಷ್ಟು ಸಿಮೆಂಟ್,5700 ಮೆಟ್ರಿಕ್ ಟನ್ ನಷ್ಟು ಉಕ್ಕು,18500 ಟನ್ ನಷ್ಟು ಉಕ್ಕಿನ ಸಲಾಖೆಗಳು ಮತ್ತು 22500 ಟನ್ ಗಳಷ್ಟು ಕಂಚು
ಖರ್ಚು:-2063 ಸಾವಿರ ಕೋಟಿ ಎಂದು ಅಂದಾಜು ಮಾಡಲಾಗಿದೆ
ಗುತ್ತಿಗೆ:-ಭಾರತದ ಕಂಪನಿಯಾಗಿರತಕ್ಕಂತಹ ‘ಲಾರ್ಸನ್ ಅ್ಯಂಡ್ ಟರ್ಬ್ಯೊ’

ಬಾಲ್ಯ ಮತ್ತು ಹೋರಾಟದ ಹಾದಿ:-
   1885 ಆಕ್ಟೋಬರ್ 31 ರಂದು( ದಿನಾಂಕಕ್ಕೆ ಯಾವುದೆ ಅದಿಕೃತ ದಾಖಲೆಗಳಿಲ್ಲ.ಆದರೆ ಪಟೇಲ್ ತಾವು ಮೆಟ್ರಿಕ್ಯುಲೆಷನ್ ಪರೀಕ್ಷೆಗಾಗಿ ಭರ್ತಿ ಮಾಡಿದ ಅರ್ಜಿಯಲ್ಲಿ ತಾವೆ ಯೋಚಿಸಿ ನಮೂದಿಸಿದ ದಿನಾಂಕವಾಗಿದೆ) ನಾಡಿಯೆಡ್ (ಈಗಿನ ಗುಜರಾತ್ ನಲ್ಲಿ) ಜನಿಸಿದರು.ತಂದೆಯ ಹೆಸರು ಝವೇರ ಭಾಯ್ ಪಾಟೇಲ್ ಮತ್ತು ತಾಯಿ ಲಾಡ್ ಬಾಯಿ.ತಂದೆಯು ಒಕ್ಕಲುತನವನ್ನು ನಡೆಸಿಕೊಂಡು ಬರುತಿದ್ದರು ಮತ್ತು ವಲ್ಲಭಬಾಯ್ ಪಟೇಲ್ ರು ಸಹ ತಂದೆ ಗೆ ಹೊಲಗಳಲ್ಲಿ ಸಹಾಯ ಮಾಡುತ್ತಾ ತಮ್ಮ ಪ್ರೌಢ ಶಿಕ್ಷಣದ ನಂತರ ಕಾನೂನು ಶಿಕ್ಷಣಕ್ಕಾಗಿ ಲಂಡನ್ ಗೆ ಪ್ರಯಾಣ ಬೆಳೆಸಿದರು.ಲಂಡನ್ ನಲ್ಲಿ ಬ್ಯಾರಿಷ್ಟರ್ ನ್ನು ಪಡೆದು ಭಾರತಕ್ಕೆ ಮರಳಿದ ಪಟೇಲರು ಸ್ವಲ್ಪ ಸಮಯದ ವರೆಗೂ ಗೋಧ್ರಾದಲ್ಲಿ ಸ್ವಂತ ವಕೀಲಿಕೆಯನ್ನು ನಡೆಸಿದರು ಮತ್ತು ಅವರ ಆದಾಯವು ಚೆನ್ನಾಗಿಯೆ ಇತ್ತು.1917 ರಲ್ಲಿ ಪಟೇಲರು ಗುಜರಾತ್ ಸಭಾದ ಕಾರ್ಯದರ್ಶಿಗಳಾಗಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ್ನು ಪ್ರತಿನಿಧಿಸಿದರು.ನಂತರದಲ್ಲಿ ನಡೆದದ್ದು ಇತಿಹಾಸ:
ವಲ್ಲಭ ಬಾಯಿ ‘ಸರ್ದಾರ’  ಆದದ್ದು:-1918 ರಲ್ಲಿ ಪಟೇಲರು  ‘ಕರ ನಿರಾಕರಣೆ ಚಲುವಳಿ’ಯ ನೆತೃತ್ವ ವಹಿಸಿದರು.ಇದರಿಂದ ಒಂದು ದೊಡ್ಡ ರೈತ ಸಮುದಾಯದ ನಾಯಕರಾಗಿ ಬಿಂಬಿತರಾದರು.ಕೊನೆಗೆ ರೈತರ ಮತ್ತು ಪಟೇಲರ ಶಾಂತಿ ಯ ಹೋರಾಟದ ಫಲವಾಗಿ ಬ್ರಿಟೀಷರು ರೈತರ ಭೂಮಿಗಳನ್ನು ಅವರ ಸ್ವಾಧೀನಕ್ಕೆ ವಾಪಸ್ಸು ಕೊಟ್ಟರು.ಹೀಗೆ ಬಾರ್ಡೊಲಿ ಸತ್ಯಾಗ್ರಹದಲ್ಲಿ ಅಲ್ಲಿನ ಮಹಿಳೆಯರು ಪಟೇಲರಿಗೆ ಇನ್ನು ಮುಂದೆ ನೀವು ನಮ್ಮ ನಾಯಕರು ಅಂದರೆ ‘ಸರ್ದಾರ’ ಎನ್ನುವ ಉಪನಾಮವನ್ನು ಕೊಟ್ಟರು.
 ಇಂತಹ ಮಹಾನ್ ನಾಯಕ ಡಿಸೆಂಬರ್ 1950 ರಂದು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಬಿಟ್ಟರು and that is the end of the story.ಇನ್ನೊಬ್ಬ ನಾಯಕ ಅವರಿಗೆ ಸರಿಸಮಾನವಾಗಿ ಯಾರು ನಿಲ್ಲಲಿಲ್ಲ.ಆದರೆ ಪಟೇಲರ ಎಲ್ಲಾ ಕೆಲಸಗಳಲ್ಲಿಯೂ ನಾವು ಅವರನ್ನು ಈಗಲೂ ನೆನಯುತ್ತೇವೆ. ರಾಷ್ಟ್ರಕ್ಕಾಗಿ ಏನೆಲ್ಲವನ್ನು ಸಾಧನೆ ಮಾಡಿದ ಮಹಾನ್ ನಾಯಕನಿಗೆ ಯಾವತ್ತೊ ‘ಭಾರತ ರತ್ನ’ ವನ್ನು ಕೊಡಬಹುದಾಗಿತ್ತು.ಆದರೂ "Better late than never" 1991 ರಲ್ಲಿ ಅವರಿಗೆ ಭಾರತ ರತ್ನವನ್ನು ಕೊಡಲಾಯಿತು.

Friday, October 19, 2018

ಅರ್ಬನ್ ನಕ್ಸಲ್ ಎನ್ನುವ....


ಅರ್ಬನ್ ನಕ್ಸಲ್ ಎನ್ನುವ....

   ತೀರ ಇತ್ತೀಚಿನ ಶಬ್ದಗಳಲ್ಲಿ ಅತೀ ಹೆಚ್ಚು ಪ್ರಾಮುಖ್ಯತೆ ಪಡೆದು ಒಂದು ಲೆಕ್ಕದಲ್ಲಿ ಮೋದಿ ಸರ್ಕಾರವನ್ನು ಕಾಡಲು ಶರುವಾಗಿರುವ ನಿಜವಾದ ಅರ್ಥದಲ್ಲಿ ಅಷ್ಟೇನು ದೊಡ್ಡದಾಗಿರದ  ಶಬ್ದ ‘ಅರ್ಬನ್ ನಕ್ಸಲ್’. ನಕ್ಸಲ್ ಎನ್ನುವ ಶಬ್ದಕ್ಕೆ ಸುಮಾರು ದಶಕಗಳ ಇತಹಾಸವೆ ಇದೆ.ಆದರೆ ಅರ್ಬನ್ ನಕ್ಸಲ್(ನಾಡ ನಕ್ಸಲ್) ಎನ್ನುವುದುಕ್ಕೆ ಕೇವಲ ಕಲವು ಪುಟಗಳನ್ನಷ್ಟೆ ತಿರುವಿದರೆ ಸಾಕು.ಆದರ ಇತಿಹಾಸ,ಆಳ,ಅಗಲ ಅರ್ಥವಾಗಿ ಹೋಗುತ್ತೆ

ನಕ್ಸಲ್ ರ ಆದಿ ಮತ್ತು ಉಗಮ:-

 ಪಶ್ಚಿಮ ಬಂಗಾಲದ ನಕ್ಸಲ್ ಬಾರಿ ಎನ್ನುವ ಸ್ಥಳದಲ್ಲಿ ಉಗಮ ವಾದ ಒಂದು ಹೋರಾಟದ ಮಾದರಿ.ಇದು ಮಾವೋ ಸಿಧ್ದಾಂತಗಳಿಂದ ಪ್ರಭಾವಿತವಾಗಿ ವ್ವವಸ್ಥೆಯ ವಿರುಧ್ಧ ಹೋರಾಡುತ್ತಾ ತೀಕ್ಷ್ಣ ಮತ್ತು ತೀವ್ರತರವಾದ ಬದಲಾವಣೆಯನ್ನು ಬಯುಸುತ್ತಲೆ ಶಸ್ತ್ರಸಜ್ಜಿತ ಹೋರಾಟಕ್ಕೆ ಅಣಿಯಾದ ಒಂದು ಎಡ ಪಂಥೀಯ ಸಂಘಟನೆ. ಈ ಹೋರಾಟಕ್ಕೆ ಇನ್ನಷ್ಟು ಪುಷ್ಟಿ ಕೊಡುವ ಉದ್ದೇಶದಿಂದ ಈ ಮಾವೋವಾದಿ ಹೋರಾಟವನ್ನು  ರಾಜಕೀಯವಾಗಿ ಬಲಿಷ್ಟವಾಗಿಸಲು ಸಿಪಿಐ (ಮಾವೋ) ಎನ್ನುವ ಸಂಘಟನೆ 2004 ರಲ್ಲಿ ಒಂದು ಸಂಘಟಿತ ಸಂಘಟನೆಯನ್ನಾಗಿ ಸ್ಥಾಪಸಲಾಯಿತು ಆರ್ಥಿಕವಾಗ ಹಿಂದುಳಿದ ಪ್ರದೇಶಗಳಲ್ಲಿ ಮವೋ ಸಿಧ್ದಾಂತ ಗಳನ್ನು ಪ್ರಚಾರ ಪಡಿಸುತ್ತಲೆ ಅಲ್ಲಿನ ಅತೃಪ್ತ ನಾಗರಿಕರನ್ನು ಶಸ್ತ್ರ ಸಜ್ಜಿತ ಹೋರಾಟಕ್ಕೆ ಪ್ರಚೋದನೆ ನೀಡುವುದು ಮತ್ತು ಹೋರಾಟಗಳನ್ನು ಪ್ರಖರವಾಗಿ ವಿಸ್ತಾರ ಮಾಡುವುದು.ಸಿ.ಪಿ.ಐ(ಮಾವೋ) ಸಂಘಟನೆಯ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದು.ಭಾರತದ ರಾಜ್ಯಗಳಾದ ಓಡಿಶ್ಶಾ,ಬಿಹಾರ,ಮಧ್ಯ ಪ್ರದೇಶ,ಪಶ್ಚಿಮ ಬಂಗಾಳ,ಜಾರ್ಖಂಡ್,ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ಹಲವಾರು ಜಿಲ್ಲೆಗಳನ್ನು ಈ ಮಾವೋ ವಾದಿಗಳು ತಮ್ಮ ಪ್ರಾಭಲ್ಯವನ್ನು ಈಗಾಗಲೆ ಸ್ಥಾಪಿಸಿಯಾಗಿದೆ.ಬಿಬಿಸಿಯ ಒಂದು ಅಂದಾಜಿನ ಪ್ರಕಾರ  1990 ರಿಂದ 2010 ರ ವರೆಗಿನ ಅವಧಿಯಲ್ಲಿ ಸುಮಾರು ಆರು ಸಾವಿರ ಜೀವಗಳ ಬಲಿಯಾಗಿವೆ(ಇದರಲ್ಲಿ ನಾಗರಿಕರು,ಸಿಅರ್ಪಿ ಎಫ್,ಮತ್ತು ಮಾವೋ ಉಗ್ರರು ಸೇರಿದ್ದಾರೆ). ಆದರೆ ಇದರ ಹೋರಾಟದ ಮಾದರಿ ಮತ್ತು ವೈಖರಿಯನ್ನು ಗಮನಸಿದ ಸರ್ಕಾರವು ಈ ಸಿ.ಪಿ.ಐ(ಮಾವೋ)  ಸಂಘಟನೆಯನ್ನು ಯು.ಪಿ,ಏ(ಎರಡನೆ ಬಾರಿ) ಸರ್ಕಾರವು ನಿರ್ಭಂಧಿಸಿದೆ,

ಅರ್ಬನ್ ನಕ್ಸಲ್:-

  ಈಗಿನ ಮಾತಲ್ಲ 2013 ರಲ್ಲೆ ಆಗಿನ ಕೇಂದ್ರದ ಯು.ಪಿ,ಎ ಸರ್ಕಾರವು ಸುಪ್ರಿಂ ಕೋರ್ಟಿಗೆ ಸಲ್ಲಿಸಲಾಗಿರುವ ಒಂದು ಕೌಂಟರ್ ಆಫ್ಡಿವೇಟ್ ನಲ್ಲಿ ಶಿಕ್ಷಕ ವೃತ್ತಿಗೆ ಸಂಬಂದಿಸಿದವರು,ಹೋರಾಟಗಾರು ಹಾಗೂ ಬರಹಗಾರರು ಕೆಲವೊಂದು ಸಂಘಟನೆಗಳ ಪ್ರಭಾವಕ್ಕೆ ಒಳಗಾಗಿದ್ದಾರೆ ಮತ್ತು ಆ ಎಲ್ಲಾ ಸಂಘಟನೆಗಳನ್ನು ಮಾವೋವಾದಿಗಳು ‘ಮಾನವ ಹಕ್ಕು’ ಎನ್ನುವ ತಲೆಬರಹದಡಿಯಲ್ಲಿ ಸುರಕ್ಷಿತವಾಗಿರುಸುತಿದ್ದಾರೆ.ಈಗ ಬಂದಿರುವ ವಿಚಾರ ಆಗಷ್ಟ್ 2018 ರಲ್ಲಿ ಐದು ಮಾವೋ ಉಗ್ರರ ವಿಚಾರಗಳನ್ನು ಪೋಷಿಸುತ್ತಿರುವ ಐವರನ್ನು ಭೀಮಾ ಕೋರೆಗಾಂವ್ ನಲ್ಲಿ ನಡೆದ ದಂಗೆಯ ವಿಚಾರವಾಗಿ ಬಂಧಿಸಲಾಗಿದೆ.ಅಲ್ಲದೆ ಮಾವೋ ಉಗ್ರರು ನಮ್ಮ ಪ್ರಧಾನ ಮಂತ್ರಿಯಾದ ನರೆಂದ್ರ ಮೋದಿಯನ್ನು ಹತ್ಯಗೈಯುವ ಒಂದು ಯೋಜನೆಯನ್ನೂ ಇಲ್ಲಿ ಪ್ರಸ್ತಾಪಲಾಗಿದೆ.ಮೊದಲೆ ಸಿ.ಪಿ.ಐ(ಮಾವೋ) ಒಂದು ನಿರ್ಭಂಧಿಸಿದ ಸಂಘಟನೆ.ಅದರಲ್ಲೂ ಈ ಸಂಘಟನೆಗೆ ನಗರದಲ್ಲಿದ್ದುಕೊಂಡು ಆರ್ಥಿಕ ಸಹಾಯ ಮತ್ತು ಇನ್ನಿತರೆ ನಗರಗಳಿಂದ ಮಾತ್ರ ಒದಗಿಸಬಹುದಾಂತಹ ಸಹಾಯ ಮತ್ತು ಅನುಕೂಲಗಳನ್ನು ಮಾವೋ ಉಗ್ರರಿಗೆ ಒದಗಿಸುತ್ತಿದ್ದಾರೆ.ಈಗ ಎಲ್ಲಕಿಂತಲೂ ಹಾಸ್ಯಸ್ಪದ ಎನ್ನುವಂತೆ ನಗರದಲ್ಲಿರುವ ಕೆಲವು ಬುಧ್ದಿ(?) ಜೀವಿಗಳು ‘ನಾನು ನಗರ ನಕ್ಸಲ್’ ಎನ್ನುವ ಹಣೆ ಪಟ್ಟಿಯನ್ನು ಹಾಕಿಕೊಂಡು ತಿರುಗಾಡುತಿದ್ದಾರೆ.

 

‘ಮಹದಾಯಿ ಕಣಿವೆ ತಿರುವು ಯೋಜೆನೆ’ ಮತ್ತು ಕಳಸಾ ಬಂಡೂರೊ ನಾಲ ಜೋಡಣೆ ಯೋಜನೆ


‘ಮಹದಾಯಿ ಕಣಿವೆ ತಿರುವು ಯೋಜೆನೆ’ ಮತ್ತು ಕಳಸಾ ಬಂಡೂರೊ ನಾಲ ಜೋಡಣೆ ಯೋಜನೆ

   ಸುಮಾರು ಹದಿನಾಲ್ಕು ವರುಷಗಳ ಹಿಂದಿನ ಮಾತು ನಾನಾಗ ಬಳ್ಳಾರಿಯಲ್ಲಿದ್ದೆ.ಯಥಾ ಪ್ರಕಾರ ತಮಿಳು ನಾಡು ಕಾವೇರಿ ವಿಷಯಕ್ಕಾಗಿ ಕ್ಯಾತೆ ತೆಗೆದಿತ್ತು.ಹಳೇ ಮೈಸೂರು ಭಾಗ ಅದರಲ್ಲಿಯೂ ಕಾವೇರಿ ಕಣಿವೆಯ ಜಿಲ್ಲೆಗಳು ಧಗ ಧಗನೆ ಹೊತ್ತಿ ಉರಿಯುತ್ತಿದ್ದವು.ನಂತರದ ದಿನಗಳಲ್ಲಿ ಬೆಳಗಾವಿ ವಿಷಯವಾಗಿ  ಮಹಾರಾಷ್ಟ್ರ ಕಾಲು ಕೆದರಿಕೊಂಡು ಜಗಳಕ್ಕೆ ಬಂದಿತ್ತು ಮತ್ತು ಆಗೊಮ್ಮೆ ಈಗೊಮ್ಮೆ ಸಣ್ಣಗೆ ಆಂದ್ರಪ್ರದೇಶವೂ ತುಂಗಾಭದ್ರ ಮತ್ತು ಕೃಷ್ಣ ನೀರಿನ ಹಂಚಿಕೆಯ ವಿಷಯವಾಗಿ ಕ್ಯಾತೆ ತೆಗೆಯುತ್ತಲೆ ಇದ್ದರೂ ಉತ್ತರ ಕರ್ನಾಟಕದ ಈ ವಿಷಯಗಳಿಗೆ ಕಾವೇರಿ ಕಣಿವೆಯ ಜಿಲ್ಲೆಗಳಿಂದ ಅಷ್ಟಾಗಿ ಸಹಕಾರ ಮತ್ತು ಬೆಂಬಲ ಸಿಗುತ್ತರಲಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್.ಆರ್.ಬೊಮ್ಮಾಯಿವರು ಒಂದು ಸಂದರ್ಷನದಲ್ಲಿ ಹೇಳಿದ್ದು ನನಗೆ ಈಗಲು ನೆನಪಿದೆ “ ಕಾವೇರಿ ಮತ್ತು ಕೃಷ್ಣ ಎರೆಡು ನದಿಗಳು ಕರ್ನಾಟಕದ ಎರೆಡು ಕಣ್ಣುಗಳು” ಎಂದು.ಆದರೂ  ಕಾವೇರಿಗೆ ಇರುವ ಕಾವು ಕೃಷ್ಣೆಗೇಕಿಲ್ಲ  ಎಂದು ಮನಸ್ಸಿನಲ್ಲೆ ಕೊರಯುತ್ತಿತ್ತು.ಈ ಆಕ್ರೋಶ ಕಿಡಿಯಿಂದ ‘ಕಾವೇರಿಗೆ ಇರುವ ಕಾವು ಕೃಷ್ಣೆಗೇಕಿಲ್ಲ’ ಒಂದು ಸುದಿರ್ಘ ಲೇಖನವನ್ನು ಆಗಿನ ಕಾಲಕ್ಕೆ ಪ್ರಕಟವಾಗುತ್ತಿದ್ದ ‘ಸಂಗ್ರಾಮ’ ಪತ್ರಿಕೆಯಲ್ಲಿ ಬರೆದಿದ್ದೆ. ಇದಾಗಿ ಸುಮಾರು ಹದಿನಾಲ್ಕು ವರುಷಗಳು ಕಳೆದಿವೆ. ಈಗ ನಾನು ಬೆಂಗಳೂರು ನಿವಾಸಿ ಇಲ್ಲಿಯೇ ಕೆಲಸ.ತೀರ ಇತ್ತೀಚಿನವೆರೆಗೂ  ನಡೆದ ಕನ್ನಡ ಪರ ಹೋರಾಟಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದೇನೆ.ಬೆಳಗಾವಿ ವಿಚಾರವಿರಲಿ,ಕೃಷ್ಣೆಯ ವಿಚಾರವಿರಲಿ ಅಥವಾ  ಮಹಾದಾಯಿ ನದಿ ತಿರುವು ಮತ್ತು ಕಳಸಾ ಬಂಡೂರಿ ನಾಲಾ ಯೋಜನೆಗಳೆ ಇರಲಿ ಜನ ಸ್ವಯಂ ಪ್ರೇರಿತರಾಗಿ ಬಂದ್ ಗೆ ಬೆಂಬಲ ಕೊಡುತ್ತಿದ್ದಾರೆ ಮತ್ತು ಮುಕ್ತ ಮನಸ್ಸಿನಿಂದ ಸಹಕರಿಸುತ್ತಿದ್ದಾರೆ.ಅಲ್ಲದೆ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿರು ಉತ್ತರ ಕರ್ನಾಟಕದ ಭಾಗಗಳ ಬಗ್ಗೆ ಒಂದು ಅಂಥಃ ಕರಣ ತುಂಬಿದ ಕಾಳಜಿ ಮತ್ತು ಕನಿಕರವನ್ನು ನಾನು ಇಲ್ಲಿನ ಜನತೆಯುಲ್ಲಿ ಗಮನಿಸಿದ್ದೇನೆ.ಈಗ ಬರೆಯ ಬೇಕಾಗಿರುವ ವಿಚಾರ –‘ಮಹಾದಾಯಿ ನದಿ ತಿರುವು ಮತ್ತು ಕಳಸಾ ಬಂಡೂರಿ ನಾಲಾ ಯೋಜನೆ’!!!!

ಮಲಪ್ರಭ ನದಿಯ ಉಗಮ ಮತ್ತು ಆರು ಹಳ್ಳಗಳ ಜೋಡನೆ ಯೋಜನೆ:

  ಮಲಪ್ರಭ ನದಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಹುಟ್ಟಿ ಸುಮಾರು 304 ಕಿಲೋಮೀಟರ್ ಗಳಷ್ಟು ಕ್ರಮಿಸಿ, ಬಾಗಲಕೋಟೆಯ ಕೂಡಲ ಸಂಗಮದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ.1962 ಮಲಪ್ರಭ ನದಿಗೆ ಅಡ್ಡಲಾಗಿ ಬೆಳಗಾವಿ ಜಿಲ್ಲೆಯ ಸೌದತ್ತಿಯ ಬಳಿ ಡ್ಯಾಮ್ ಕಟ್ಟುವುದಕ್ಕೆ ಭೂಮಿ ಪೂಜೆ ಮಾಡಲಾಯಿತು. ಈ ಯೋಜನೆ ಸುಮಾರು ಹತ್ತು ವರ್ಷಗಳ ನಂತರ ಅಂದರೆ 1972 ಕ್ಕೆ ಲೋಕಾರ್ಪಣೆಯಾಯಿತು.37 ಟಿ.ಎಮ್.ಸಿ ನೀರನ್ನು ಹಿಡಿದಿಡುವ ಗಾತ್ರವನ್ನು ಹೊಂದಿರುವ ಈ ಡ್ಯಾಮಿನ ಮೂಲ ಉದ್ದೇಶ ಬೆಳಗಾವಿ,ಧಾರವಾಡ,ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳ ಕೆಲವು ತಾಲೂಕಿಗಳಿಗೆ ನೀರುಣಿಸುವದಾಗಿತ್ತು.ಸರಿ ಸುಮಾರು ನಲವತ್ತೈದು ವರ್ಷಗಳು ಕಳೆದರು ನವಿಲು ತೀರ್ಥ(ರೇಣುಕ ಸಾಗರ)ದ ಡ್ಯಾಮ್ ಭರ್ತಿಯಾಗಿರುವುದು ಕೆವಲ ಬೆರಳಣಿಕೆಯಷ್ಟು ಮಾತ್ರವೇ.ಹಾಗಾಗಿ ಬೆಳಗಾವಿ,ಧಾರವಾಡ,ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳ ಕೆಲವು ತಾಲೂಕಿಗಳಿಗೆ ನೀರುಣಿಸುತ್ತೇವೆ ಎಂದು ಹೊರಟ ಸರ್ಕಾರಗಳ ಭರವಸೆ ಮತ್ತು ಭರವಸೆಯಾಗಿಯೂ ಉಳಿಯಿತು.ಆದರೆ ಡ್ಯಾಮ್ ಎದೆ ಸೆಟೆದು ನಿಂತಿದ್ದು ಮಾತ್ರ ಕಾಣಿಸಿತು.

   ನವಿಲು ತೀರ್ಥ ಅಥವಾ ರೇಣುಕಾ ಸಾಗರ ಡ್ಯಾಮ್ ಪ್ರಾರಂಭಕ್ಕೂ ಮೊದಲೆ ಒಂದು ದೂರ ದೃಷ್ಟಿಯುಳ್ಳ ಯೋಜನೆಗೆ ಗುದ್ದಲಿ ಪೂಜೆ ನೆರವೇರಿತ್ತು.ಆದೆ ಮಲೆಪ್ರಭೆಯ ಪ್ರಭಾವಲಯದಲ್ಲಿ ಹರಿಯುವ ಆರು ಹಳ್ಳಗಳನ್ನು  ಕಳಸಾ,ಬಂಡೂರಿ,ಹರತಾಳ.ಗುರ್ಕಿ,ಚುರ್ಲಿ,ಪೋಟ್ಲಾ ಮಲೆಪ್ರಭೆಗೆ ಸೇರಿಸುವುದು.ಅಂದರೆ 1960 ಆಕ್ಟೋಬರ್ 2ರಂದು ಈ ಆರು ಹಳ್ಳಗನ್ನು (ಕಳಸಾ,ಬಂಡೂರಿ,ಹರತಾಳ.ಗುರ್ಕಿ,ಚುರ್ಲಿ,ಪೋಟ್ಲಾ) ಮಲೆಪ್ರಭೆಗೆ ಸೇರಿಸಿ ಅದರಿಂದ ಮಲೆಪ್ರಭೆಯ ಹರಿಯುವ ನೀರಿನ ಪ್ರಮಾಣವನ್ನು ಹೆಚ್ಚಿಸುವ ಯೋಜೆನೆಯನ್ನು ಕೈಗೊಳ್ಳಲಾಯಿತು,ಅಲ್ಲದೆ ಈ ಯೋಜನೆಗೆ ‘ಮಹದಾಯಿ ಕಣಿವೆ ತಿರುವು ಯೋಜೆನೆ’ಅಂತ ಹೆಸರಿಡಲಾಯಿತು.ಈ ‘ಮಹದಾಯಿ ಕಣಿವೆ ತಿರುವು ಯೋಜೆನೆ’ ಎನ್ನುವ ಹೆಸರೆ ಮುಳುವಾಗಿಬಿಟ್ಟಿತು.ಕಾರಣ ಇಷ್ಟೆ ಯೋಜನೆಯ ಹೆಸರಲ್ಲಿರುವ ‘ಮಹಾದಾಯಿ’!!!!

ಮಹಾದಾಯಿ ನದಿಯ ಉಗಮ ಮತ್ತು ಹರಿವು:

   ಬೆಳಗಾವಿ ಜಿಲ್ಲೆಯ ದೆವಣಗಾಂವ್ ನಲ್ಲಿ ಹುಟ್ಟುವ ಮಹಾದಾಯಿ ನದಿ, ಸುಮಾರು  80 ಕಿಮಿ .ಗಳಷ್ಟು ಕ್ರಮಿಸಿದ ನಂತರ ಗೋವಾ ರಾಜ್ಯದಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. 29 ಕಿ.ಮೀ ಗಳಷ್ಟು ಕರ್ನಾಟಕದಲ್ಲಿ ಕ್ರಮಿಸಿ ನಂತರ 52 ಕಿ.ಮಿಗಳಷ್ಟು ಗೋವಾದಲ್ಲಿ ಕ್ರಮಿಸಸುವ ಇದೇ ಮಹಾದಾಯಿ ನದಿಯನ್ನು  ಗೋವಾದಲ್ಲಿ ಮಾಂಡೋವಿ ಎಂದು ಕರೆಯಲಾಗುತ್ತದೆ.ಈ ಮಹಾದಾಯಿ ನದಿಯಿಂದ ಬಳಕೆಗೆ ಅರ್ಹವಾಗಿರುವ ಸುಮಾರು 210 ಟಿ.ಎಮ್.ಸಿ ಗಳಷ್ಟು ನೀರು ಗೋವಾದಲ್ಲಿ ಸಮುದ್ರ ಸೆರುವ ಮೊದಲು ಪೋಲಾಗುತ್ತದೆ ಅಂದರೆ ಗೋವಾದಲ್ಲಿ ಈ ನದಿಯ ನೀರುನ್ನು ಯಾವುದೇ ಉದ್ದೇಶಕ್ಕಾಗಿ ಬಳಸುತ್ತಿಲ್ಲ.ಈ ನದಿಯ ಹರಿವಿನಲ್ಲಿ 52 ಟಿ.ಎಮ್.ಸಿ ಕರ್ನಾಟಕದ ಪಾಲಾಗಿರುವುದು.ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಕುಡಿಯು ಉದ್ದೇಶಕ್ಕಾಗಿ ಬಳಸಿಕೊಳ್ಳುವುದಕ್ಕಾಗಿ 1978ರಲ್ಲಿ ಆಗಿನ ಕರ್ನಾಟಕದ ಮುಖ್ಯ ಮಂತ್ರಿಯಾಗಿದ್ದ ಆರ್.ಗುಂಡೂರಾವ್ ಅವರು ಎಸ್.ಆರ್.ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದರು. 1980ರಲ್ಲಿ ವರದಿ ನೀಡಿದ ಸಮಿತಿ ಯೋಜನೆಯನ್ನು ಜಾರಿಗೊಳಿಸಬಹುದು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತು. ಕರ್ನಾಟಕ ಸರ್ಕಾರ 1988ರಲ್ಲಿ ಯೋಜನೆಗೆ ಒಪ್ಪಿಗೆ ನೀಡಿತು. ಆದರೆ, ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿತು. ಮಹಾದಾಯಿ ಯೋಜನೆಯ ವರದಿ ನೀಡಿದ್ದ ಸಮಿತಿಯಲ್ಲಿದ್ದ ಎಸ್‌.ಆರ್.ಬೊಮ್ಮಾಯಿ ಅವರು 1989ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಗೋವಾ ಸಿಎಂ ಪ್ರತಾಪ್ ಸಿಂಗ್ ರಾಣಾ ಜೊತೆ ಮಾತುಕತೆ ನಡೆಸಿದರು. ಆಗ ಯೋಜನೆಗೆ ಗೋವಾ ಒಪ್ಪಿಗೆ ನೀಡಿತು. ‘ಮಹದಾಯಿ ಕಣಿವೆ ತಿರುವು ಯೋಜೆನೆ’ ಜಾರಿಯಾದರೆ ಗೋವಾದಲ್ಲಿ ನೀರಿನ ಕೊರತೆ ಉಂಟಾಗುತ್ತದೆ ಅಲ್ಲದೆ ಮಾಂಡೋವಿ ನದಿ ಸಮುದ್ರ ಸೇರುವ ಸ್ಥಳದಲ್ಲಿ ಜಲಚರಗಳಿಗೆ ತೊಂದರೆಯಾಗುತ್ತದೆ ಎಂದು ವಾದಿಸಿತ್ತು.ಯಾವಾಗ ಇದು ಮೂರು ರಾಜ್ಯಗಳ ನಡುವಿನ ನೀರಿನ ಹಂಚಿಕೆ ವಿಚಾರವಾಗಿ ಪರಿವರ್ತನೆಯಾಯಿತೊ ಆಗ ಕೇಂದ್ರ ಸರ್ಕಾರ ‘ಮಹದಾಯಿ ನ್ಯಾಯಾಧಿಕರಣ’ವನ್ನು ರಚಿಸಿತು.ಯಾವಾಗ ನ್ಯಾಯಾಧಿಕರಣ ರಚಿಸಲಾಯಿತೊ ಆಗ ಕರ್ನಾಟಕ ಸರ್ಕಾರ ‘ಮಹದಾಯಿ ಕಣಿವೆ ತಿರುವು ಯೋಜೆನೆ’ ಯನ್ನು ತಾತ್ಕಾಲಿಕ ವಾಗಿ ಕೈ ಬಿಟ್ಟು 2002 ರಲ್ಲಿ ಎಸ್.ಎಮ್.ಕೃಷ್ಣ ಸರ್ಕಾರ ಕೇವಲ ಹಾಳೆಗಳಲ್ಲಿ ಮಾತ್ರ ಇದ್ದ ಕಳಾಸಾ ಮತ್ತು ಬಂಡೂರಿ ನಾಲಾ ಜೋಡನೆಯ ಯೋಜನೆಗೆ ಕೈ ಹಾಕಿತು.

                                        

ಕಳಸಾ ಬಂಡೂರಿ ನಾಲಾ ಯೋಜನೆ

   ಮಹಾದಾಯಿ ನದಿಯಲ್ಲಿ  ಕರ್ನಾಟಕದ ಪಾಲಾಗಿರುವ ೊಟ್ಟು 52 ಟ.ಎಮ್.ಸಿ. ನೀರಿನಲ್ಲಿ ಕೇವಲ 7.56 ಟಿ.ಎಮ್.ಸಿ ನೀರನ್ನು ಬಳಸಿ ಮಲಪ್ರಭೆಗೆ ಸೇರಿಸಿ ಅದರಿಂದ ಧಾರವಾಡ (ಧಾರವಾಡ,ಹುಬ್ಬಳ್ಳಿ,ಕಲಘಟಗಿ,ನವಲಗುಂದ,ಕುಂದಗೋಳ),ಬೆಳಗಾವಿ(ಖಾನಾಪುರ,ರಾಮದರ್ಗ,ಸೌದತ್ತಿ, ,ಬೈಲಹೊಂಗಲ,) ಬಾಗಲ ಕೋಟೆ(ಬಾದಾಮಿ) ಮತ್ತು ಗದಗ( ಗದಗ,ನರಗುಂದ,ರೋಣ)ಜಿಲ್ಲೆಯ 13 ತಾಲೂಕು ಹಾಗೂ 900 ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಾಗಿತ್ತು.ಆದರೆ ಗೋವಾದಲ್ಲಿ ಬಿ.ಜೆ.ಪಿ.ಸರ್ಕಾರದ  ಮುಖ್ಯಮಂತ್ರಿಯಾಗಿದ್ದ ಮನೋಹರ್ ಪಾರಿಕ್ಕರ್ ಮಾಂಡೋವಿ ನದಿ ಪಾತ್ರದಲ್ಲಿ ಜೀವ ಸಂಕುಲಗಳಿಗೆ ತೊಂದರೆಯಾಗುತ್ತದೆ ಎನ್ನುವ ವಿಚಾರ ಮುಂದಿಟ್ಟು ನಿಗದಿತ ಕಾಮಾಗಾರಿಗೆ ತಡೆಯಾಜ್ಞೆಯನ್ನು ತರಲಾಗಿತು.2006 ಹೆಚ್.ಡಿ.ಕುಮಾರ ಸ್ವಾಮಿಯ ಸರ್ಕಾರ ಯೋಜೆನಯನ್ನು ಕೈಗೆತ್ತಿಕೊಂಡು ಸೆಪ್ಟೆಂಬರ್ 22 2006ರಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಕಳಾಸ ಹಳ್ಳವನ್ನು ಸುಮಾರು 5 ಕಿ.ಮೀ ಸುರಂಗದ ಮೂಲಕ ಮಲಪ್ರಭ ನದಿಗೆ ಸೇರಿಸುವುದು,ಪೋಟ್ಲಾ ಹಳ್ಳವನ್ನು ಒಂದುವರೆ ಕಿ.ಮೀ ಸುರಂಗದ ಮೂಲಕ ಕಳಸಾ ಹಳ್ಳಕ್ಕೆ ,ಹಾಗೂ ಹರತಾಳ ಹಳ್ಳವನ್ನು ಒಂದು ಕಿ,ಮಿ ನಾಲೆಯ ಮೂಲಕ ಕಳಸಾ ಹಳ್ಳಕ್ಕೆ ಸೇರಿಸುವ ಕಾಮಾಗಾರಿಯನ್ನು ಪ್ರಾರಂಭಿಸಲಾಯಿತು.ಆದರೆ ಗೋವಾರ ಸರ್ಕಾರ ಸುಪ್ರೀಮ್ ಕೋರ್ಟಗೆ ಹೋಗಿ ಈ ಯೋಜನೆಗೆ ತಡೆಯಾಜ್ಞೆಯನ್ನು ತರಲಾಯಿತು.ಸುಮಾರು ಒಂದುವರೆ ವರ್ಷಗಳ ಕಾಲ ದಾಖಾಲಾತಿಗಳನ್ನು ಕೊಡದೆ ಕಾಲ ಕಳೆದ ಗೋವಾ ಸರ್ಕಾರಕ್ಕೆ ಸುಪ್ರೀಮ್ ಕೋರ್ಟ ಛೀ ಮಾರಿ ಹಾಕಿ  ಗೋವಾದ ಅರ್ಜಿಯನ್ನು ವಜಾಗೊಳಿಸಿತು.ಈ ಕ್ಷಣಕ್ಕೆ ನಮ್ಮ ಸರ್ಕಾರ ಎಚ್ಚೆತ್ತುಕೊಂಡು ಕಾಮಾಗಾರಿಯನ್ನು ತುರಾತುರಿಯಲ್ಲಿ ಮುಗಿಸಿಬಿಡಬೇಕಾಗಿತ್ತು.ಆದರೆ ನಮ್ಮ ರಾಜಕೀಯ ಪಕ್ಷಗಳ ಕೆಸರೆಚಾಟ, ಮತ್ತು ವಿಳಂಬ ನೀತಿ ಕಾಮಾಗಾರಿಯನ್ನು ಅಲ್ಲಿಗೆ ನಿಲ್ಲಿಸಿ ಬಿಟ್ಟಿತು.

                     

   
ಇದಿಷ್ಟು ಕೇವಲ ಕಳಸಾ  ನಾಲಾ ಜೋಡನೆ ವಿಚಾರ ಇನ್ನು ಬಂಡೂರಿ ನಾಲಾ ಜೋಡನೆಗೆ ಇನ್ನೆಷ್ಟು ದಶಕಗಳು ಕಾಯಬೇಕೊ? ಅಲ್ಲದೆ ಮಹದಾಯಿ ನದಿ ನೀರಿನಲ್ಲಿ ಕರ್ನಾಟಕದ ಪಾಲಾದ 52 ಟಿ.ಎಮ್.ಸಿ ನೀರನ್ನು ಬಳಸಿಕೊಳ್ಳಲು ಇನ್ನೆಷ್ಟು ದಶಕಗಳು ಕಳೆಯಬೇಕೊ?ಮಿಲಿಯನ್ ಡಾಲರ್ ಪ್ರಶ್ನೆ!!!


References: