Tuesday, December 15, 2020

ಅಲ್ಲಿ –ಇಲ್ಲಿ

Published in 6th December 2020 Karmaveera

************************************************


ಅಲ್ಲಿ - ಇಲ್ಲಿ, ಅಲ್ಲ-

ಇಲ್ಲಿ-ಅಲ್ಲಿಯೂ ಅಲ್ಲ-

ಎಲ್ಲೆಲ್ಲಿಯೂ ಇಲ್ಲ!


ಭೂಮಿಯ ಮೇಲು ಅಲ್ಲ

ಭೂಮಿಯ ಕೆಳಗೂ ಇಲ್ಲ!

ಇಹದೊಳಗೂ ತುಂಬಿಲ್ಲ ಪರದೊಳಗೂ ಮೆರೆದಿಲ್ಲ!


ನಾ ದಿನ ನಿತ್ಯ ಕುಟ್ಟುವ ಲ್ಯಾಪ್-ಟಾಪ್‌ ನೊಳಗೂ

ಅವಿತಿಲ್ಲ !ಕಟ್ಟುವ ಲಾಜಿಕ್‌ ನೊಳಗೂ ಸೇರಿಲ್ಲ.

ಅಲ್ಲಿ-ಇಲ್ಲಿ, ಇನ್ನೆಲ್ಲಿ?


ಮಾಡುವ ಕೆಲಸದೊಳಗಿಲ್ಲ

ನೋಡುವ ನೋಟದಲೂ ಮುಳುಗಿಲ್ಲ

ಅಲ್ಲಿ – ಇಲ್ಲಿ, ಇನ್ನೆಲ್ಲಿ?


ಅಲ್ಲಿ-ಇಲ್ಲಿಯೊಳಗಿಣ ಶಬ್ದಗಳಿಗಿಲ್ಲ

ವೆತ್ಯಾವಷ್ಟು.ಇದ್ದರು ಅಷ್ಟೆ ಒಂದಕ್ಷರದ

ವೆತ್ಯಾಸಷ್ಟೆ!


ಆ ಅಲ್ಲಿ – ಇಗೂ ಇಲ್ಲೆ ಎಲ್ಲಿ

ಕಾಲ ಬುಡದಲ್ಲಿ, ತೋರುಬೆರೆಳ ಸನಿಹದಲ್ಲೆ

ಉಸಿರ ಸ್ಪರ್ಷದಲ್ಲೆ!


ಎಲ್ಲವೂ ಇಲ್ಲೆ

ಯಮನು ಕೇಳಿದ ಆ “ವೇಗದ” ಪ್ರಶ್ನೆಗೆ

ಧರ್ಮನುತ್ತರಿಸಿದ ಉತ್ತರದ ʼಮನಸಿನʼ ಸುಳಿಯೊಳಗೆ

ಸಿಗ್ಮಂಡ್‌ ಫ್ರಾಡ್‌ ನ ಕನಸಿನ ಕನವರಿಕಯೊಳಗೆ

ಅಷ್ಟೆ!!!!

Thursday, December 3, 2020

ತೊಂದರೆ ಇಲ್ಲ


Published in 29/11/2020 VIKRAMA

***************************************

ಮಸೀದಿ ಕೆಡವಿದ್ದರ ಬಗ್ಗೆಯೆ

ಬರೆಯುತ್ತೀರಿ ಅದರ ಬಗ್ಗೆಯೆ ಮಾತಾಡುತ್ತೀರಿ,

ಆದರೆ ಮಸೀದಿ ಕೆಳಗಿದ್ದ ದೇವಸ್ಥಾನದ ಬಗ್ಗೆ

ಒಮ್ಮೆಯಾದರೂ ಯೋಚಿಸಿ.


ಸುಖಾ-ಸುಮ್ಮನೆ ಉನ್ಮತ್ತ ಜನ ಸಮುದಾಯ

ಮಸೀದಿ ಕೆಡುವುದಕ್ಕೆ ಮುಂದಾಗಲಿಲ್ಲ.

ಶ್ರೀ ರಾಮನ ದೇವಸ್ಥಾನದ ಮೇಲಿರುವ ಮಸೀದಿಯ ನೋಡಿ

ಕೈಕಟ್ಟಿ ಕೂಡುವ ಜಾಯಮಾನ ನಮ್ಮದಲ್ಲ.

ಇದನ್ನು ಪೌರಷದ ಪ್ರದರ್ಶನವೆನ್ನುವುದಾದರೂ ತೊಂದರೆ ಇಲ್ಲ!


ಕೋಟಿ ಕೋಟಿ ಹೃದಯ ಸಾಮ್ರಾಜ್ಯದ ಮಾರ್ಯಾದ

ಪುರುಷೋತ್ತಮನ ದೇವಸ್ಥಾನದ

ಮೇಲೆಯೆ ಮಸೀದಿ ನಿಂತಿದ್ದರೆ, ನೋಡುತ್ತಾ ಸುಮ್ಮನಿರಿ ಅಂದರೆ

ಆಗುವುದಿಲ್ಲ!ನಮ್ಮನ್ನು ಪರಧರ್ಮ ಅಸಹಿಷ್ಣು ಅಂದರೂ ತೊಂದರೆ ಇಲ್ಲ.

ನಮ್ಮ ಸಹಿಷ್ಣಿತೆಗೆ ಸಿಕ್ಕ ಮರ್ಯಾದೆ ಎಂದು ಸುಮ್ಮನಾಗುತ್ತೇವೆ.


ದೇಶ ವೀಭಜನೆಯ ಕರಾಳ ಕಥೆಯೆ ಹೇಳುತ್ತದೆ

ಎಷ್ಟು ಜನ ಹಿಂದುಗಳ ಮಾರಣ ಹೋಮ ನಡೆಯಿತೆಂದು

ದೇಶದೊಳಗಿದ್ದು ದೇಶ ದ್ರೋಹವೆಸಗುವವರಿಗೂ ಮನ್ನಿಸಿ

ನಮ್ಮವರೆಂದು ಪೊರೆದೆವು.

ಆದರೂ ನಮ್ಮನ್ನು ಜರಿದಿರಿ.ಪರವಾಗಿಲ್ಲ!!!


ನಮ್ಮನ್ನು ಜರಿದರೂ ಅಸಹಿಷ್ಣು ಅಂದರೂ ಪರವಾಗಿಲ್ಲ!

ತೊಂದರೆ ಇಲ್ಲ!!