Thursday, December 3, 2020

ತೊಂದರೆ ಇಲ್ಲ


Published in 29/11/2020 VIKRAMA

***************************************

ಮಸೀದಿ ಕೆಡವಿದ್ದರ ಬಗ್ಗೆಯೆ

ಬರೆಯುತ್ತೀರಿ ಅದರ ಬಗ್ಗೆಯೆ ಮಾತಾಡುತ್ತೀರಿ,

ಆದರೆ ಮಸೀದಿ ಕೆಳಗಿದ್ದ ದೇವಸ್ಥಾನದ ಬಗ್ಗೆ

ಒಮ್ಮೆಯಾದರೂ ಯೋಚಿಸಿ.


ಸುಖಾ-ಸುಮ್ಮನೆ ಉನ್ಮತ್ತ ಜನ ಸಮುದಾಯ

ಮಸೀದಿ ಕೆಡುವುದಕ್ಕೆ ಮುಂದಾಗಲಿಲ್ಲ.

ಶ್ರೀ ರಾಮನ ದೇವಸ್ಥಾನದ ಮೇಲಿರುವ ಮಸೀದಿಯ ನೋಡಿ

ಕೈಕಟ್ಟಿ ಕೂಡುವ ಜಾಯಮಾನ ನಮ್ಮದಲ್ಲ.

ಇದನ್ನು ಪೌರಷದ ಪ್ರದರ್ಶನವೆನ್ನುವುದಾದರೂ ತೊಂದರೆ ಇಲ್ಲ!


ಕೋಟಿ ಕೋಟಿ ಹೃದಯ ಸಾಮ್ರಾಜ್ಯದ ಮಾರ್ಯಾದ

ಪುರುಷೋತ್ತಮನ ದೇವಸ್ಥಾನದ

ಮೇಲೆಯೆ ಮಸೀದಿ ನಿಂತಿದ್ದರೆ, ನೋಡುತ್ತಾ ಸುಮ್ಮನಿರಿ ಅಂದರೆ

ಆಗುವುದಿಲ್ಲ!ನಮ್ಮನ್ನು ಪರಧರ್ಮ ಅಸಹಿಷ್ಣು ಅಂದರೂ ತೊಂದರೆ ಇಲ್ಲ.

ನಮ್ಮ ಸಹಿಷ್ಣಿತೆಗೆ ಸಿಕ್ಕ ಮರ್ಯಾದೆ ಎಂದು ಸುಮ್ಮನಾಗುತ್ತೇವೆ.


ದೇಶ ವೀಭಜನೆಯ ಕರಾಳ ಕಥೆಯೆ ಹೇಳುತ್ತದೆ

ಎಷ್ಟು ಜನ ಹಿಂದುಗಳ ಮಾರಣ ಹೋಮ ನಡೆಯಿತೆಂದು

ದೇಶದೊಳಗಿದ್ದು ದೇಶ ದ್ರೋಹವೆಸಗುವವರಿಗೂ ಮನ್ನಿಸಿ

ನಮ್ಮವರೆಂದು ಪೊರೆದೆವು.

ಆದರೂ ನಮ್ಮನ್ನು ಜರಿದಿರಿ.ಪರವಾಗಿಲ್ಲ!!!


ನಮ್ಮನ್ನು ಜರಿದರೂ ಅಸಹಿಷ್ಣು ಅಂದರೂ ಪರವಾಗಿಲ್ಲ!

ತೊಂದರೆ ಇಲ್ಲ!!

No comments: