Published in VIKRAMA (VIJAYA DASHAMI SPECIAL-2019)
ಅಳಿಲ ಅಳಲು
ವೀರಾಧಿವೀರ ನರ-ವಾನರ ಸೈನ್ಯದ ನಡುವೆ
ನನಗೇನು ಕೆಲಸ? ಹಾಗೆಂದೆ ಕುಳಿತೆ
ಒಮ್ಮೆಯಾದರು ನಿನ್ನ ಕರುಣಾ ಚಕ್ಷುಗಳಿಗೆ
ನಾ ಬೀಳಬೇಕು ಮತ್ತು ನಿನ್ನ ಸೇವೆಯಲಿ ನನಗೂ ಪಾಲು ಬೇಕು!
ಹೆದರಿ ತೆವಳುತ ಬಂದೆ ಜೀವ ಕೈಲಿ ಹಿಡಿದು-
ಏಕೆಂದರೆ ಪರಮ ವೀರರ ರಣ ಕುಣಿತವದು.
ನೀನೊ ಪರಮ ಪುರುಷೋತ್ತಮನು
ಏನೆಂದು ಸೇವೆಗೈಯಲಿ ಕುಬ್ಜ ನಾನು
ನಿನ್ನ ಕಣ್ಣಿಗೆ ಬೀಳಲಿಲ್ಲ, ಸೇವೆಯೂ ಮಾಡಲಿಲ್ಲ
ಜೀವ ಕನಲಿತು ಮನಸ್ಸು ಅದುರಿತು
ಯಾವುದಕ್ಕೆ ಲಾಯಕ್ಕು ನಾನೆಂದು
ಕುಬ್ಜನಾದರೇನಂತೆ ಸಣ್ಣಗೆ ಮರಳ ಗಣಿಗಾರಿಕೆ ನಡೆಸಿ
ಮೈಗಂಟಿದ ಮರಳನೆ ಬಂಡೆಗಲ್ಲುಗಳ ಸಂದಿಗೊಂದಿಗಳಲಿ
ಕೊಡವಿ, ಮೈದಡವಿ, ನಿನ್ನದೆ ಪಾದತಲದಲಿ ಕೈಮುಗಿದು ನಿಂತೆ
ಸಾರ್ಥಕವಾಯಿತು ಬದುಕು
ನಿ ನನ್ನ ಬೆನ್ನು ಸವರಿದಾ ಸುದಿನವು!!
ಹಿಡಿ-ಹಿಡಿ ಉಸುಕನೆತ್ತಿದೆನಾಗ ಅಸುರ ಸಂಹಾರ ಯಾಗಕೆ
ಸೀತಾನ್ವೇಷಣೆಗೆ.
ನಡೆದಿಹುದೀಗ ಅನುದಿನವೂ ಭೂಮಿ
ಅಳಿಲ ಅಳಲು
ವೀರಾಧಿವೀರ ನರ-ವಾನರ ಸೈನ್ಯದ ನಡುವೆ
ನನಗೇನು ಕೆಲಸ? ಹಾಗೆಂದೆ ಕುಳಿತೆ
ಒಮ್ಮೆಯಾದರು ನಿನ್ನ ಕರುಣಾ ಚಕ್ಷುಗಳಿಗೆ
ನಾ ಬೀಳಬೇಕು ಮತ್ತು ನಿನ್ನ ಸೇವೆಯಲಿ ನನಗೂ ಪಾಲು ಬೇಕು!
ಹೆದರಿ ತೆವಳುತ ಬಂದೆ ಜೀವ ಕೈಲಿ ಹಿಡಿದು-
ಏಕೆಂದರೆ ಪರಮ ವೀರರ ರಣ ಕುಣಿತವದು.
ನೀನೊ ಪರಮ ಪುರುಷೋತ್ತಮನು
ಏನೆಂದು ಸೇವೆಗೈಯಲಿ ಕುಬ್ಜ ನಾನು
ನಿನ್ನ ಕಣ್ಣಿಗೆ ಬೀಳಲಿಲ್ಲ, ಸೇವೆಯೂ ಮಾಡಲಿಲ್ಲ
ಜೀವ ಕನಲಿತು ಮನಸ್ಸು ಅದುರಿತು
ಯಾವುದಕ್ಕೆ ಲಾಯಕ್ಕು ನಾನೆಂದು
ಕುಬ್ಜನಾದರೇನಂತೆ ಸಣ್ಣಗೆ ಮರಳ ಗಣಿಗಾರಿಕೆ ನಡೆಸಿ
ಮೈಗಂಟಿದ ಮರಳನೆ ಬಂಡೆಗಲ್ಲುಗಳ ಸಂದಿಗೊಂದಿಗಳಲಿ
ಕೊಡವಿ, ಮೈದಡವಿ, ನಿನ್ನದೆ ಪಾದತಲದಲಿ ಕೈಮುಗಿದು ನಿಂತೆ
ಸಾರ್ಥಕವಾಯಿತು ಬದುಕು
ನಿ ನನ್ನ ಬೆನ್ನು ಸವರಿದಾ ಸುದಿನವು!!
ಹಿಡಿ-ಹಿಡಿ ಉಸುಕನೆತ್ತಿದೆನಾಗ ಅಸುರ ಸಂಹಾರ ಯಾಗಕೆ
ಸೀತಾನ್ವೇಷಣೆಗೆ.
ನಡೆದಿಹುದೀಗ ಅನುದಿನವೂ ಭೂಮಿ
No comments:
Post a Comment