
ಮೊನ್ನೆ ಸೆಪ್ಟೆಂಬರ್ ಮೂವತ್ತಕ್ಕೆ ಶಂಕರನಾಗ್ ತೀರಿ ಕೊಂಡು ೧೮ ವರ್ಷಗಳಾಗಿ ಹೋದವು.ನಂಬಲಿಕ್ಕೆ ಆಗ್ತಾ ಇಲ್ಲ, ದಿನಗಳು ಎಷ್ಟು ಬೇಗ ಹೋಗ್ತ ಇದ್ದವಲ್ಲ!ನಾನು ಎಂಟನೇ ತರಗತಿ ಯಲ್ಲಿ ಇದ್ದೆ.ಶಂಕರ್ ನಾಗ್ ಸತ್ತು ಬಿಟ್ರು ಅಂತ ಹಡಗಲಿಗೆ ಸುದ್ದಿ ಬಂತು.ಶಂಕರಣ್ಣನ ಅಭಿಮಾನಿಗಳಮುಖ ನೋಡ್ಲಿಕ್ಕೆ ಆಗಿರಲಿಲ್ಲ.ನನಗಂತೂ ಯ್ಯಾಕ್ಷನ್ ಸಿನಿಮಾಗಳ ಹೀರೋ ಇನ್ನಿಲ್ಲವಲ್ಲ ಅನ್ನಿಸಿತ್ತು.
ಕನ್ನಡಕ್ಕೆ ಮುಂದೆ ಯಾರು 'ಕರಾಟೆ ಕಿಂಗ್'?
ಸೆಪ್ಟೆಂಬರ್ ಮೂವತ್ತು ೧೯೯೦ ಕ್ಕೆ ಕನ್ನಡದ ಒಬ್ಬ ಧೈರ್ಯ ವಂತ,ಎಂಟೆದೆ ಬಂಟ,ಕರಾಟೆ ಕಿಂಗ್, 'ಮಾಲ್ಗುಡಿ ಡೇಸ್' ನ ನಿರ್ದೇಶಕ,ಒಬ್ಬ ಅಧ್ಬುತ ದೂರದೃಷ್ಟಿ ನಾಯಕ ಇನ್ನಿಲ್ಲವಾಗಿದ್ದ.ಕೇವಲ ಕನ್ನಡದಕ್ಕೆ ಅಲ್ಲದೆ, ದೇಶ ದ ಹಿನ್ನೆಲೆಯಲ್ಲಿ ಒಬ್ಬ ಅದ್ಭುತ ನಿರ್ದೇಶಕ, ಕನ್ನಡ ಮತ್ತು ಮರಾಠಿ ರಂಗ ಭೂಮಿ ಒಬ್ಬ ಕ್ರೀಯಾಶೀಲ ನಿರ್ದೇಶಕನ್ನ ಕಳೆದು ಕೊಂಡಿತ್ತು. ಶಂಕರಣ್ಣ ಕೇವಲ ಯ್ಯಕ್ಷನ್ ಕಿಂಗ್ ಮಾತ್ರ ಆಗಿರಲಿಲ್ಲ.ಅವನೊಬ್ಬ ಹೊಸ ತನದ ಹಂಬಲ ಹೊತ್ತ ದಿಗ್ದರ್ಶಕನಾಗಿದ್ದ.ಶಂಕರಣ್ಣ ಗೆ ಕನ್ನಡ ಚಿತ್ರ ರಂಗ ದಲ್ಲಿ ಎರೆಡು ಬಯಕೆ ಗಳಿದ್ದವು.ಒಂದು ಅಣ್ಣಾವ್ರ ಸಿನಿಮಾ ನಿರ್ದೇಶನ ಮಾಡುವುದು ಮತ್ತೊಂದು ಪುಟ್ಟಣ್ಣ ನವರ ನಿರ್ದೇಶನದಲ್ಲಿ ಕೆಲಸ ಮಾಡುವುದು.ಮೊದಲನೆಯದು ಸಾಕರ ಗೊಂಡಿತು.ಆದರೆ ಎರೆಡೆನೆಯದಕ್ಕೆ ಕಾಲ ಕೂಡಿ ಬರಲಿಲ್ಲ.
ಶಂಕರಣ್ಣ ಸತ್ತು ಹೋಗಿದ್ದಾನೆ ಅಂತ ಯಾರು ಹೇಳಿದ್ದು?ಪ್ರತಿ ಆಟೋ ಡ್ರೈವರ್ ನ ಹೃದಯದಲ್ಲೊ ಅವನು ಇನ್ನೂ ಇದ್ದಾನೆ.ರಂಗಶಂಕರ ದ ಪ್ರತಿ ಪ್ರಯೋಗಗಳನ್ನು ಅಲ್ಲಿ ಗಡ್ಡ ನೇವರಿಸುತ್ತಾ ನೋಡುತ್ತಾ ನಿಂತಿದ್ದಾನೆ.ನನ್ನಂತಹ ಇನ್ನೂ ಎಷ್ಟೊ ಕನಸು ಕಾಣುವವರಿಗೆ ಅವನೇ ರೋಲ್ ಮಾಡೆಲ್ ಆಗಿದ್ದಾನೆ.ನಮ್ಮೆಲ್ಲರ ಬಾಲ್ಯ ದ ನೆನಪುಗಳ ನ್ನು ಕೆದಕಿ ಎಲ್ಲೊ ಒಂದು ಕಡೆ ಹಳೆ ಕಡತಗಳನ್ನು ತೆರೆಯುವಂತೆ ಮಾಡಿದ್ದ 'ಮಾಲ್ಗುಡಿ ಡೆಸ್' ನಲ್ಲಿ ಶಂಕರಣ್ಣ ಇದ್ದಾನೆ. ಶಂಕರಣ್ಣ ನೀ ಎಲ್ಲೂ ಹೋಗಿಲ್ಲ ಇಲ್ಲೆ ಇದ್ದೀಯಾ.ನನ್ನ ಕಥೆ ಗಳಲ್ಲಿ,ನಮ್ಮ ಮೆಟ್ರೂ ಪ್ರೊಜೆಕ್ಟ್ ನಲ್ಲಿ,ಬದುಕಿನ ಆಸಕ್ತಿಗಳಲ್ಲಿ,ಓಟದಲ್ಲಿ,ಆತೀವ ಉತ್ಸಾಹದಲ್ಲಿ,ಕನಸುಗಳಲ್ಲಿ,ಕನವರಿಕೆಗಳಲ್ಲಿ....
ಕನ್ನಡಕ್ಕೆ ಮುಂದೆ ಯಾರು 'ಕರಾಟೆ ಕಿಂಗ್'?
ಸೆಪ್ಟೆಂಬರ್ ಮೂವತ್ತು ೧೯೯೦ ಕ್ಕೆ ಕನ್ನಡದ ಒಬ್ಬ ಧೈರ್ಯ ವಂತ,ಎಂಟೆದೆ ಬಂಟ,ಕರಾಟೆ ಕಿಂಗ್, 'ಮಾಲ್ಗುಡಿ ಡೇಸ್' ನ ನಿರ್ದೇಶಕ,ಒಬ್ಬ ಅಧ್ಬುತ ದೂರದೃಷ್ಟಿ ನಾಯಕ ಇನ್ನಿಲ್ಲವಾಗಿದ್ದ.ಕೇವಲ ಕನ್ನಡದಕ್ಕೆ ಅಲ್ಲದೆ, ದೇಶ ದ ಹಿನ್ನೆಲೆಯಲ್ಲಿ ಒಬ್ಬ ಅದ್ಭುತ ನಿರ್ದೇಶಕ, ಕನ್ನಡ ಮತ್ತು ಮರಾಠಿ ರಂಗ ಭೂಮಿ ಒಬ್ಬ ಕ್ರೀಯಾಶೀಲ ನಿರ್ದೇಶಕನ್ನ ಕಳೆದು ಕೊಂಡಿತ್ತು. ಶಂಕರಣ್ಣ ಕೇವಲ ಯ್ಯಕ್ಷನ್ ಕಿಂಗ್ ಮಾತ್ರ ಆಗಿರಲಿಲ್ಲ.ಅವನೊಬ್ಬ ಹೊಸ ತನದ ಹಂಬಲ ಹೊತ್ತ ದಿಗ್ದರ್ಶಕನಾಗಿದ್ದ.ಶಂಕರಣ್ಣ ಗೆ ಕನ್ನಡ ಚಿತ್ರ ರಂಗ ದಲ್ಲಿ ಎರೆಡು ಬಯಕೆ ಗಳಿದ್ದವು.ಒಂದು ಅಣ್ಣಾವ್ರ ಸಿನಿಮಾ ನಿರ್ದೇಶನ ಮಾಡುವುದು ಮತ್ತೊಂದು ಪುಟ್ಟಣ್ಣ ನವರ ನಿರ್ದೇಶನದಲ್ಲಿ ಕೆಲಸ ಮಾಡುವುದು.ಮೊದಲನೆಯದು ಸಾಕರ ಗೊಂಡಿತು.ಆದರೆ ಎರೆಡೆನೆಯದಕ್ಕೆ ಕಾಲ ಕೂಡಿ ಬರಲಿಲ್ಲ.
ಶಂಕರಣ್ಣ ಸತ್ತು ಹೋಗಿದ್ದಾನೆ ಅಂತ ಯಾರು ಹೇಳಿದ್ದು?ಪ್ರತಿ ಆಟೋ ಡ್ರೈವರ್ ನ ಹೃದಯದಲ್ಲೊ ಅವನು ಇನ್ನೂ ಇದ್ದಾನೆ.ರಂಗಶಂಕರ ದ ಪ್ರತಿ ಪ್ರಯೋಗಗಳನ್ನು ಅಲ್ಲಿ ಗಡ್ಡ ನೇವರಿಸುತ್ತಾ ನೋಡುತ್ತಾ ನಿಂತಿದ್ದಾನೆ.ನನ್ನಂತಹ ಇನ್ನೂ ಎಷ್ಟೊ ಕನಸು ಕಾಣುವವರಿಗೆ ಅವನೇ ರೋಲ್ ಮಾಡೆಲ್ ಆಗಿದ್ದಾನೆ.ನಮ್ಮೆಲ್ಲರ ಬಾಲ್ಯ ದ ನೆನಪುಗಳ ನ್ನು ಕೆದಕಿ ಎಲ್ಲೊ ಒಂದು ಕಡೆ ಹಳೆ ಕಡತಗಳನ್ನು ತೆರೆಯುವಂತೆ ಮಾಡಿದ್ದ 'ಮಾಲ್ಗುಡಿ ಡೆಸ್' ನಲ್ಲಿ ಶಂಕರಣ್ಣ ಇದ್ದಾನೆ. ಶಂಕರಣ್ಣ ನೀ ಎಲ್ಲೂ ಹೋಗಿಲ್ಲ ಇಲ್ಲೆ ಇದ್ದೀಯಾ.ನನ್ನ ಕಥೆ ಗಳಲ್ಲಿ,ನಮ್ಮ ಮೆಟ್ರೂ ಪ್ರೊಜೆಕ್ಟ್ ನಲ್ಲಿ,ಬದುಕಿನ ಆಸಕ್ತಿಗಳಲ್ಲಿ,ಓಟದಲ್ಲಿ,ಆತೀವ ಉತ್ಸಾಹದಲ್ಲಿ,ಕನಸುಗಳಲ್ಲಿ,ಕನವರಿಕೆಗಳಲ್ಲಿ....
1 comment:
ನನ್ನ ಬಾಲ್ಯದ ದಿನಗಳು ನೆನಪಾದವು.ಶಂಕರನಾಗ ಆಗ ನೆಚ್ಚಿನ ನಟ.ನಿಮ್ಮ ಬರಹ ಸೊಗಸಾಗಿ....ಹಾಗೆ ಮನಸೂ ಕೂಡಾ..ನನ್ನೊಂದಿರು ಸಂಪರ್ಕಕ್ಕಾಗಿ thanks..
Post a Comment