ಅಂದು ಬೆಳಗ್ಗಿನಿಂದಲೇ ಉಪವಾಸ ವಿದ್ದಿದ್ದರಿಂದಲೇ ಏನೋ,ನೀಲಕಂಠ ನಿಗೆ ಏನೋ ಒಂದು ತೆರೆನಾದ ಸಂಕಟ.ಕೆಲಸದ ಒತ್ತಡದಲ್ಲಿ ಬರೀ ಕಾಫಿ ಮತ್ತು ಚಹಾ ಬಿಟ್ಟರೆ ಗಂಟಲಿಗೆ ಏನೂ ಇಳಿದಿರಲಿಲ್ಲ.ಮೊದಲೇ ನಿರ್ಧೆಶಕ ನ ಜವಾಬ್ದಾರಿ.ಅದು ಈ ದಾರವಾಹಿಗೆ ಪ್ರಾಯೋಜಕರಾಗುರುವರು ಕನ್ನಡ ಚಿತ್ರೋದ್ಯಮದ ಹೆಸರಾಂತ ನಿರ್ಮಾಪಕರು.ಹೀಗಾಗಿ ಈ ದಾರವಾಹಿ ಯು ನೀಲಕಂಠ ನಿಗೆ ಬಹು ಮುಖ್ಯವಾಗಿತ್ತು.ಈ ದಾರವಾಹಿ ಯಲ್ಲಿ ಕೊಂಚ ಹೆಸರು ಗಳಿಸಿದರು ಈಗಿರುವ ಹೆಸರಿಗೆ ಅದೂ ಸೇರಿ ಖಂಡಿತಾ 'ಬೆಳ್ಳಿತೆರೆ' ಗೆ ಕಾಲಿರಸಬಹುದು ಎನ್ನುವ ಲೆಕ್ಕಚಾರ ಅವನದಾಗಿತ್ತು.
ಇದೆಲ್ಲವನ್ನು ಮನದಲ್ಲಿರಿಸಿಕೊಂಡು ಅವನು ಸಿದ್ಧಪಡಿಸಿದ ಚಿತ್ರಕಥೆ ಯನ್ನು ನಿರ್ದೇಶನಕ್ಕೆ ಅಣಿಮಾಡದೆ ತಾನೆ ಕುಳಿತು ಸಾಕಷ್ಟು ಓದು,ಮಾಹಿತಿಗಳನ್ನು ಕಲೆ ಹಾಕಿ,ಮನುಷ್ಯನ ಹುಟ್ಟಿನ ಮೂಲ,ಸಂಬಂಧಗಳ ಎಳೆ,ಅವರ ನಡುವಳಿಕೆಗಳು..ಹೀಗೆ ಎಲ್ಲದರ ಬಗ್ಗೆ ಮಾಹಿತಿ ಕಲೆ ಹಾಕಿ ಬರೆಯಲು ಕುಳಿತ. ಬರೆಯುವ ಭಾಗಗಳನ್ನು ಮುಗಿಸಿದ ಮೇಲೆ ಹಂತ ಹಂತವಾಗಿ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದ.
ಕಥೆ ಹಂದರ ತಲೆಯಲ್ಲಿ ಸಿದ್ಧವಾಗಿತ್ತು.ಆ ಕಥೆ ಮೇಲಿ ತಿಳಿಸಿದ ಹರವನ್ನೂ ಒಳಗೊಂಡಿತ್ತು.ಅದಿಸ್ಟಲ್ಲದೆ ಬದುಕು,ಇಲ್ಲಿನ ಸಂಭ್ರಮ-ಸಡಗರ,ಬದುಕಲ್ಲಿನ ಅನೀರಿಕ್ಷೀತ ತಿರುವು,ಅಘಾತ -ಇವೆಲ್ಲವನ್ನೂ ಬಳಸಿ ಬೆಳೆದಿತ್ತು.ಇನ್ನೂ ಅವನಿಗೆ ಉಳಿದಿದ್ದು ದರವಾಹಿ ಯ ಹೆಸರು: ಅದಕ್ಕೆ ಅವನು ಅಲೋಚಿಸಿ ಇಟ್ಟ ಹೆಸರು - 'ಇಷ್ಟೇ ಅಲ್ಲಾ...!'.
ಆ ದಿನ ರಾತ್ರಿ ಮನೆಗೆ ಬರು ಹೊತ್ತಿಗೆ ಸುಮಾರು ಹನ್ನೊಂದು ವರೆ ಆಗಿತ್ತು.ಬೆಳಿಗ್ಗೆ ಆರು ಗಂಟೆಗೆ ಮನೆ ಬಿಟ್ಟವನು ನಡು ರಾತ್ರಿ ಮನೆಗೆ ಹಿಂತುರಿಗಿದ್ದ. ಕಾರಲ್ಲಿ ಬರುತ್ತಿರುವಾಗಲೇ ಸಂಕಟ ಅತಿಯಾಗಿತ್ತು. ದಾರಿಯುದ್ದಕ್ಕೂ ಎಲ್ಲರಿಗೂ ಮನೆಗೆ ಹೋಗುವ ಆತುರ.ಟ್ರಾಫಿಕ್ ಸಿಗ್ನಲ್ ಇದೆಯೂ ಇಲ್ಲವೂ ಅದ್ಯಾವುದನ್ನೂ ನೋಡದೇ ಒಟ್ಟಾಗಿ ಎಲ್ಲರೂ ಓಡಿದ್ದೇ ಓಡಿದ್ದು.
ಇಡೀ ಬೆಂಗಳೂರೇ ನಿದ್ರೆ ಗೆ ಜಾರುವ ಸಮಯ.ಮುಂಜಾವಿನಿಂದ ಪ್ರತಿ ದಾರಿ ಹೋಕರಿಗೂ ಮೈಯೊಡ್ಡಿ ಇನ್ನು ಆಗಲಾರದು ಎನ್ನುವಂತೆ ರಸ್ತೆಗಳು ಆಕಾಶದಲ್ಲಿನ ನಕ್ಷತ್ರಗಳನ್ನು ಎಣಿಸುವಂತೆ ಮಲಗಿದ್ದವು.ಮುಖ್ಯ ರಸ್ತೆಗಳಲ್ಲಿ ಸುಮರಾಗಿ ವಾಹನಗಳು ಕಂಡುಬಂದರೂ ಬಡವಾಣೆ ಪ್ರವೇಶಿಸಿತಿದ್ದಂತೆಯೇ ಕತ್ತರಿ ರಸ್ತೆ ಗಳಲ್ಲಿ ಆಗಸಕ್ಕೆ ಮುಖಮಾಡಿ ನಾಲ್ಕು ದಾರಿಗಳಿಗೂ ಬೆಳಕ ಚೆಲ್ಲಿ ನಿಂತ ಹ್ಯಾಲೋಜನ್ ನ ಮಬ್ಬುಗತ್ತಲು.ಹಾದಿ ತಪ್ಪಿ ಬರುವಂತೆ ಕಾಣುವ ನಾಯಿಗಳು.ಬದುಕಲ್ಲಿ ಏನೆ ಬರಲಿ ಕೇವಲ ಹುಂಬ ಧೈರ್ಯದಿಂದಲೇ ಎದುರಿಸುತ್ತೇನೆ ಎನ್ನುವಂತೆ ಕಾಣುತ್ತಿರುವ ಕೇವಲ ಲಾಠಿ ಹಿಡಿದ ಪೋಲಿಸರನ್ನು ಬಿಟ್ಟರೆ ದಾರಿಯಲ್ಲಿ ಯಾವ ನರ ಪಿಳ್ಳೆ ಯೂ ಇಲ್ಲ.ಮನೆಯ ತಿರುವಿಗೆ ಬರವಷ್ಟರಲ್ಲಿ ಮಬ್ಬುಗತ್ತಲು ಮಾಯಾವಾಗಿ ಮನೆಗಳ ಕಿಟಕಿ ಗಳಿಂದ ಹೊರಬರುತಿದ್ದ ರಾತ್ರಿ ದೀಪದ ಬೆಳಕು ಮಾತ್ರ ಇತ್ತು.ರಸ್ತೆಯ ನಾಯಿಗಳು "ಯಾರಿದು...?" ಅಂತ ತಲೆ ಎತ್ತಿ ನೋಡಿ," ಅಯ್ಯೂ ಇವ ನಮ್ಮವ !" ಅನ್ನುವಂತೆ ತಲೆಯನ್ನು ಮತ್ತೆ ಭೂಮಿಗೆ ಹಾಕಿ ಮಲುಗಿದವು.ಮನೆಯ ಬಾಗಿಲು ತೆರೆಯುವಷ್ಟರಲ್ಲಿ 'ಸಂಕಟ' ತಾರಕಕ್ಕೇರಿತ್ತು. ಮನೆಯಲ್ಲಾ ತಡಕಾಡಿದ.ತಂದಿಟ್ಟಿದ್ದ ಬ್ರೆಡ್, ಹಣ್ಣು..ಎಲ್ಲವೂ ಮುಗಿದು ಹೋಗಿತ್ತು.ಆದರೆ ರೆಫ್ರಿಜೇಟರ್ ನಲ್ಲಿ ಹಾಲು ಮಾತ್ರ ಇತ್ತು.
****************************
ಹಾಲಿನ ಬಟ್ಟಲಿನಿಂದ ಒಂದಿಷ್ಟು ಹಾಲನ್ನು ಮತ್ತೊಂದು ಚಿಕ್ಕ ಬಟ್ಟಲಿಗೆ ಬಗ್ಗಿಸಿ ಬಿಸಿ ಮಾಡಲು ಗ್ಯಾಸ್ ಸ್ಟೋವ್ ಮೇಲೆ ಇಟ್ಟ.ಆ ಹೊತ್ತಿಗಾಗಲೇ ತಲೆ ಸಿಡಿತಾ ಇತ್ತು.
"ಹಸಿವೆ ಯಿಂದ ಇರಬೇಡ್ವೂ ಸಂಕಟನೂ ಹೆಚ್ಚಾಗುತ್ತೆ ಮತ್ತೆ ತೆಲೆ ನೋವು ಶುರುವಾಗುತ್ತೆ.."
ಸುಧಾ ಹೇಳುತಿದ್ದ ಮಾತು ನೆನಪಾಯಿತು.ಮನೆಯಲ್ಲಿ ಯಾರು ಇಲ್ಲದ್ದರಿಂದಲೋ ಎನೋ, ಮನೆ ಬಿಕೋ ಎನ್ನುತ್ತ ಇತ್ತು, ಮನಸ್ಸು ಅಯೋ ಮಯವಾಗಿತ್ತು.ತಲೆ ನೋವು ವಿಪರೀತವಾಗಿ ಕಾಡಲು ಶುರುವಾಯಿತು.ಮಲಗುವ ಕೋಣೆಯ ಅಲಮಾರದಲ್ಲಿದ್ದ ಸಂಗೀತಾ ಳ ದುಪ್ಪಟ್ಟ ತೆಗೆದು ತೆಲೆಗೆ ಬಿಗಿದ.ಕೈ ಗೆ ಹಿಡಿತ ಸಿಗಲಿಲ್ಲ.
"ಇಲ್ಲಿ ಬಿಡು ನಂಗೆ,ನಾನು ಕಡ್ತೇನೆ " ತನ್ನದೇ ದುಪಟ್ಟವನ್ನು ಒಮ್ಮೆ ಗಟ್ಟಿಯಾಗಿ ಸುಧಾ ಬಿಗಿದಿದ್ದಿಳು.ಮತ್ತೊಮ್ಮೆ ಸುಧಾಳ ಮಾತು ನೆನಪಾಗಿತ್ತು.ಈಗಂತೂ ತಡೆಯಲಾಗಲಿಲ್ಲ.ತೆಳ್ಳಗೆ ಹನಿಗಳು ಕಣ್ಣಲ್ಲಿ ಸಾಲುಗಟ್ಟಿದ್ದವು.ಮನಸು ಯಾವುದೋ ಕಳೆದು ಹೋದ ಅನನ್ಯ ವಸ್ತುವಿಗೆ ವಿಲ ವಿಲ ಒದ್ದಾಡಿತ್ತು.
ಹಾಲು ಉಕ್ಕೇರಿ ಬಂತು.ಅದಕ್ಕೂಂದಿಷ್ಟು ಸಕ್ಕರೆ ಹಾಕಿ ಚಿಕ್ಕದೊಂದು ಕಪ್ ಗೆ ಸುರಿದ.ಆ ಹೊತ್ತಿಗಾಗಲೇ ಗಡಿಯಾರದಲ್ಲಿ ಗಂಟೆ ಒಂದಾಗಿತ್ತು.ರಾಜ್ ಕಪೂರ್ ಹಿಟ್ಸ ನ ಗೀತೆಗಳ ಒಂದು ಸಿಡಿ ಯನ್ನು ಸಿಸ್ಟಮ್ ಗೆ ಸಿಕ್ಕಿಸಿ ಮೆಲ್ಲಗೆ ವಾಲ್ಯೂಮ್ ಇಟ್ಟನು.
ತಲೆ ನೋವು ಮತ್ತು ಸಂಕಟಗಳೆರೆಡು ವಿಪರೀತವಾಗಿತ್ತು.ಕೈಲಿದ್ದ ಹಾಲಿನ ಕಪ್ ನ್ನು ತುಟಿಗೆ ಸೇರಿಸಿ ಒಂದು ಗುಟುಕನ್ನು ಹೀರುವಷ್ಟರಲ್ಲು ಮನಸ್ಸು ಎಲ್ಲೊ ತಿರುಗುತಿತ್ತು.ಆದರೂ ಹೊಟ್ಟೆ ತಣ್ಣಾಗಗಿತ್ತು. ಆದರೆ ಮನಸ್ಸು ಅಶಾಂತಿಯಿಂದಲೇ ನಲುಗಿತ್ತು.
"..ಮೈ ಆವಾರ ಹೂಂ...ಆವಾರ ಹೂಂ..." ಮುಖೆಶ್ ಜಿ ಯ ಮಧುರ ಕಂಠಸಿರಿ ಯಿಂದ ಹಾಡು ಹರಿಯ ತೊಡಗಿತ್ತು.ಹಾಗೆ ಗುಟುಕಿನ ಮೇಲೆ ಗುಟುಕು ಹಾಲು ಕುಡಿಯುವ ಹೊತ್ತಿಗೆ ಮನಸ್ಸು ಮಾತಾಡ ತೊಡಗಿತು.
" ಸುಧಾಳನ್ನು ಪ್ರೀತಿ ಮಾಡಿದ್ದು ಏಕೆ?"
"ಸುಧಾಳನ್ನು ಬಿಟ್ಟಿದ್ದು ಏಕೆ?"
"ಸಂಗಿತಾಳನ್ನು ಮದುವೆಯಾಗಿದಿನಿ ಇನ್ನಾದರೂ ಸುಧಾ ಳ ನೆನಪು ಬರಬಾರದು"
ಇವೆಲ್ಲವೂ ಕೇವಲ ಅವನಿಗೆ ಪ್ರೆಶ್ನೆಗಳಾಗಿರಲಿಲ್ಲ.ಅವೆಲ್ಲವೂ ಬದುಕಿನ ಪ್ರಮುಖ ನಿರ್ಧಾರಗಳ ಮೂಲ ವನ್ನೇ ಕೆದಕಿತ್ತು.
ಸುಮಾರು ಹತ್ತು ವರ್ಷದ ಹಿಂದೆ ಸಂಗೀತಾಳನ್ನು ಮದುವೆ ಯದಾಗ ಸಂಭ್ರಮ ವೆನೋ ಇತ್ತು.ಆದರೆ ಎಲ್ಲೂ ಓಂದು ಕಡೆ ಎಲ್ಲವನ್ನು ಸಂಗೀತಾಳ ಮುಂದೆ ಹೇಳಿಕೊಳ್ಳಬೇಕೆನ್ನಿಸುತ್ತಿತ್ತು. ಆದರೆ ಕಾಲ ಕೂಡಿ ಬರಲಿಲ್ಲ.ಈಗ ಅವರಿಬ್ಬರಿಗೂ ಆರು ವರ್ಷದ ಮಗು 'ಕೃಷ್ಣ'.ಸಂಸಾರ ಚೆಂದಾಗಿದೆ.ಸಂಗಿತಾಳು ಅಷ್ಟೆ.ಹೀಗೆ ಯಾವತ್ತಾದರೂ ಒಂಟಿಯಾಗಿದ್ದಾಗ ಹಳೆಯ ನೆನಪುಗಳು ಅವನ್ನು ಕೊರೆಯಲಿಕ್ಕೆ ಶುರು ಮಾಡುತ್ತಿದ್ದವು.
ಕಪ್ ನಲ್ಲಿದ್ದ ಹಾಲು ಮುಗಿತಾ ಬಂತು.ಆದ್ರೆ ಸಂಕಟ ಹಾಗೆ ಇತ್ತು.ನಿಲಕಂಠ ನಿಗೆ ಅಮ್ಮ ಹೇಳುತಿದ್ದ ಮಾತು ನೆನಪಿಗೆ ಬಂತು " ಒಂದು ಕಪ್ ಹಾಲು ಕುಡಿ ಸಂಕಟವಿದ್ದರೆ,ಕಡಿಮೆ ಯಾಗುತ್ತೆ...".ಹಾಲೂ ಕುಡಿದಾಗಿತ್ತು,ಆದ್ರೆ ಸಂಕಟ ಹಾಗೇ ಇತ್ತು.
Friday, October 3, 2008
Subscribe to:
Post Comments (Atom)
No comments:
Post a Comment