Friday, January 7, 2011

ರುಂಡ ದ ಮೇಲೆ ದೀಪ ದ ಆರತಿ!

ಬಲಿತ ಕೋಣ ಕೆಳೆಗೆ ಬಿದ್ದು,
ವಿಲವಿಲ ನೆ ಒದ್ದಾಡಿತ್ತು!
ಇನ್ನೂ ಪ್ರಾಣ ಪಕ್ಷಿ ಹಾರಿರಲಿಲ್ಲ!
ಕಣ್ಣುಗಳನ್ನು ಅಗಲಿಸಿ ಬಿದ್ದಲ್ಲಿಂದಲೇ,ಒಮ್ಮೆ ಸುತ್ತಲೂ ನೋಡಿತು,
'ಅ ಜಾತ್ರೆಯ ಕೋಣ'!ಯಾರಾದರೂ ಬದುಕಿಸುವರೆ ಎಂದು?
ಬದುಕುಸುವವರು ಅಲ್ಲಿ ಯಾರು ಇರಲಿಲ್ಲ!
ಎಲ್ಲರು ಸಾಯಿಸಲೇ ಅವುಡುಗಚ್ಚಿದ್ದರು!
ಇನ್ನೊಂದೇ ಹೊಡತ-ರಕ್ತ ಚಿಮ್ಮಿ ರುಂಡ ಮುಂಡಗಳ ಬೇರೆಯಾಗಿದ್ದವು!

"ಅಮ್ಮ ಗೆ ಇನ್ನು ರಕ್ತ ಹತ್ತಿಲ್ಲ"- ಜೋಯಿಸರು,ಭಯದಿಂದ ಕೂಗಿದರು!
"ಅಮ್ಮಗೆ ರಕ್ತ ಹತ್ತಲೇ ಬೇಕು, ಇಲ್ಲದೆ ಹೋದರೆ ಉರ್‍ಇಗೆ ಆಪತ್ತು"ಮತ್ತೆ ಕೂಗಿದರು!
ಅಮ್ಮಗೆ ರಕ್ತ ಹತ್ತುವ ವರೆಗೂ ಬಲಿಗಳಾಗಲಿ!
ಎನ್ನುವುದು,ಕ್ಷಣದ ನಿರ್ಧಾರ ವಾಗಿತ್ತು!
ಮತ್ತೊಂದು ಬಲಿತ ಕೋಣ ದ ಬಲಿ!ಆದರೂ ರಕ್ತ ತಾಯಿಗೆ ಸಿಡಿಯಲಿಲ್ಲ!
ಮೂರನೆಯ ಬಲಿಗಾದರೂ,ತಾಯಿ ತಪ್ಪುಗಳನ್ನೆಲ್ಲಾ ಮನ್ನಿಸುವಳೆ?
ಮನದಲ್ಲೆ ಎಲ್ಲರೂ ಪ್ರಾರ್ಥಿಸಿದರೂ,
ಕಣ್ಮಿಚ್ಚಿ ತೆರೆಯುವಷ್ಟರಲ್ಲಿ,ರಕ್ತದ ಓಕುಳಿ!

ಜೋಯಿಸರು ಉತ್ಸವ ಮೂರ್ತಿ ಯನ್ನೆಲ್ಲ ಹುಡುಕಿದರೂ,
ಅಲ್ಲೆಲ್ಲೊ ಕಂಡು ಕಾಣದಂತಿದ್ದ ಕಲೆ -ಕಂಡು(ಹುಡುಕಿ),
"ಅಮ್ಮ ನಮ್ಮ ಕ್ಷಮಾ ಮಾಡ್ಯಾಳ"ಕೈ ಮುಗಿದು ಹೆಳಿದ್ದರು!

ಎಳೆದು ಹಾಕಿದರು ಕೋಣ ದ ದೇಹವನ್ನು,
ರುಂಡ ದ ಮೇಲೆ ದೀಪ ವಿಟ್ಟು ಬೆಳಗಿದರು ಆರತಿಯನ್ನು!
ನಿರಮ್ಮಳವಾದರು ಮನ್ನಿಸಿಹಳೆಂದು ತಾಯಿ ಎಲ್ಲವನ್ನು!
ಧೀರೇಂದ್ರ ನಾಗರಹಳ್ಳಿ

No comments: