Friday, January 7, 2011

ಮತ್ತೆ ಎಲ್ಲ ನೆನಪಾಯಿತು!

ಯುದ್ಧ ರಂಗದಿ ಚಕ್ರದ ಕೀಲು ಮುರಿದು,
ತಿರುಗದಾದಗ,
ಕೈ ಬೆರಳ ಇಟ್ಟು ಕೈಕೆ ಮಾಡಿದ್ದಳು,
ಮಹದುಪಕಾರ ದಶರಥಗೆ!

ಮುಂದೊದು ದಿನ ರಾಮ ನ ಕಾಡಿಗೆ ಆಟ್ಟಿ,
ಭರತ ನ ಪೀಠದಲ್ಲಿ ಕೂಡಿಸುವ ಪ್ರಯತ್ನ,
ನಡೆಯಲು ಅದು ಕಾರಣವಾಯಿತು!

ಆದರೆ ಚಕ್ರ,ಕೀಲು,ರಥ ಎಲ್ಲವನ್ನು
ಕಾಲ ಚಕ್ರದ ತಿರುಗಣಿಯಲ್ಲಿ,
ಮರೆತು ಹೋಗಿದ್ದ ದಶರಥ!

**********************
ಕೃಷ್ಣನ ಆದೆಶದಂತೆ,
ಕರ್‍ಣ ನ ಧರ್ಮ ಸಂಕಟದಲಿ ಸಿಲುಕಿಸಿ,
'ಭಾಷೆ'-ಪಡೆದ ಕುಂತಿ!
ಹಿಂದೆ ನಡೆದುದು ಎಲ್ಲವನ್ನು,
ಮರೆತು ಬಿಟ್ಟಿದ್ದಳು.
ಮಗನ ವಿರುದ್ಧವೇ ಇನ್ನೊಬ್ಬ ಮಗ ನಿಂತಿರುವುದು ಕಂಡು,
ಒಳಗೊಳಗೆ ಕುದ್ದು ಹೋಗಿದ್ದಳು!
***********************
ಭೂಮಿಯೇ ಒಡೆದು ಹೋಗುವಂತೆ ಆರ್ಭಟಿಸಿ,
ಶಪಥ ಗೈದ ಭೀಷ್ಮ ನಿಗೆ,
'ಇಚ್ಛಾ ಮರಣಿ'- ವರ!
ಶರಶಯ್ಯೆ ಯಲಿ ಮಲಗಿಯೂ,
ಎಲ್ಲವನ್ನೂ ಕಂಡು ಅನುಭವಿಸಿ ,
ತಿಲ ತರ್ಪಣ ದ ಭಾಗ್ಯ ಎಲ್ಲರಿಂದಲೂ ಸಿಗುವ ವರ
ಪಡೆದು .ಕೊನೆಗೂ ಚಿರ ನಿದ್ರೆಯಲಿ ಮಲಗಿದ!
********************
ಶಕುಂತಲೆಯ ಕಂಡು ಮೋಹ ಗೊಂಡು,
ಗಾಂಧರ್ವ ವಿವಾಹ ವಾಗಿ,
ಮರೆಯದಿರು ಎಂದು ಹೊರಟ ದುಷ್ಯಂತ ನೇ,
ಶಕುಂತಲೆ ಯ ಮರೆತಿದ್ದ.
ಕೈಗಿಟ್ಟ ಉಂಗುರ ವೇ ಮತ್ತೆಲ್ಲ,
ನೆನಪುಗಳ ಮರುಕಳಿಸುವಂತೆ ಮಾಡಿತ್ತು!
*************************************
ಭೂಮಿ ಗುಂಡಾಗಿದೆ ಎಂದು,
ಮತ್ತೊಮ್ಮೆ ರಿಮೊಟ್ ಕಂಟ್ರೊಲ್ ನ ಗುಂಡಿ ಒತ್ತಿತ್ತಿರುವಾಗ,
ಒಂದಾದ ಮೇಲೆ ಇನ್ನೊಂದು -ಹೀಗೆ ತರಾವರಿ
ಕಾರ್ಯಕ್ರಮಗಳನ್ನು ಟೀವಿ ಯಲ್ಲಿ ನೋಡಿದಾಗ,
ಮತ್ತೆ ಎಲ್ಲ ನೆನಪಾಯಿತು!

No comments: