Published in 4th April 2021 Vikrama
*******************************************
(ಕುರುಕ್ಷೇತ್ರ ಯುಧ್ಧದ ಕೊನೆಯಲ್ಲಿ ಅರ್ಜುನ ಗೆಲುವೆಲ್ಲಾ ತನ್ನಿಂದಲೇ ಎಂದು ಅಹಂನಿಂದ ಬೀಗುತ್ತಿರುವಾಗ,ಕೃಷ್ಣ ಅರ್ಜುನನ ಗರ್ವವನ್ನು
ಭಂಗ ಮಾಡಿ ಗೆಲುವಿನ ನಿಜವಾದ ಕಾರಣವನ್ನು ತೋರಿಸುತ್ತಾನೆ)
ವಿಜಯ ಧ್ವಜಕೆ
ವಿಧಾತ ಸಾರಥಿಯಾಗಿರಲು
ವಿಶ್ವರೂಪದಿಂ ಉಪದೇಶಿಸಿ
ವಿಕ್ರಮ ಸಾಧಿಪೆ ಸಮರದೋಳ್! | 1 |
ಬಂದಾಪತ್ತು ಪರಿಹರಿಸಿ ಅಭಯನಾಗಿ
ನೆರಳಂತೆ ಕಾದಿಹನು ಅರ್ಜುನಂಗೆ
ಧರ್ಮ ಪರ ನಿಂತು ಅಯ್ಯುಕ್ತನಾಗಿ
ಯುದ್ಧ ರಂಗದಿ ಮುನ್ನುಗ್ಗುತಿದೆ ‘ಧರ್ಮ’ ಅಜೇಯನಾಗಿ | 2 |
ಕಾಂತೇಯನ ಬಾಣಗಳು ಮಳೆಗಳಂದದಿ
ಕಿರೀಟಿಯ ಹರಿದು ಹಾಕಲು ಬರುತಿರಲು
ಕಿಶೋರ ರಥವ ಭೂಮಿಗೊತ್ತಿ ಕೆಳಗಿಳಿಸಿ
ಕರುಣಾಳಾಗಿದ್ದ ಹತ್ತು ಹಲವು ಬಾರಿ | 3 |
ಹತ್ತಾರು ತಂತ್ರಗಳ ಹೆಣೆದ ಕೃಷ್ಣ
ಹಣಿದಿದ್ದ ಕರ್ಣ, ಭೀಷ್ಮ ಮತ್ತು ದ್ರೋಣ!
ದಯಾನಿಧಿ ಮಾಯೆಯ ಅರಿಯದ
ಧನಂಜಯ ಗೆಲುವೆಲ್ಲಾ ತನ್ನಿಂದಲೆಂದು ಬೀಗಿದ | 4 |
ವಿಷ್ಣು ರಥದ ಮೇಲಿರುವ ಹನುಮ ತೋರಿಪೆ-
ವಿಭಸ್ತುಗೆ ಹೆಜ್ಜೆ ಹೆಜ್ಜೆಗೂ ಕಾಯ್ತಿರುವಂತೆ.
ಜಗದೊಡೆಯ ರಥದಿಂದಿಳಿದೊಡನೆ ಭಸ್ಮವಾಯಿತು ರಥವು
ಬೀಗುತ್ತಿದ್ದ ಜಿಷ್ನುವಿನ ಗರ್ವ ಅನಂತನ ಮುಂದೆ ಭಂಗವಾಯಿತು.| 5 |
No comments:
Post a Comment