Thursday, December 3, 2020

ತೊಂದರೆ ಇಲ್ಲ


Published in 29/11/2020 VIKRAMA

***************************************

ಮಸೀದಿ ಕೆಡವಿದ್ದರ ಬಗ್ಗೆಯೆ

ಬರೆಯುತ್ತೀರಿ ಅದರ ಬಗ್ಗೆಯೆ ಮಾತಾಡುತ್ತೀರಿ,

ಆದರೆ ಮಸೀದಿ ಕೆಳಗಿದ್ದ ದೇವಸ್ಥಾನದ ಬಗ್ಗೆ

ಒಮ್ಮೆಯಾದರೂ ಯೋಚಿಸಿ.


ಸುಖಾ-ಸುಮ್ಮನೆ ಉನ್ಮತ್ತ ಜನ ಸಮುದಾಯ

ಮಸೀದಿ ಕೆಡುವುದಕ್ಕೆ ಮುಂದಾಗಲಿಲ್ಲ.

ಶ್ರೀ ರಾಮನ ದೇವಸ್ಥಾನದ ಮೇಲಿರುವ ಮಸೀದಿಯ ನೋಡಿ

ಕೈಕಟ್ಟಿ ಕೂಡುವ ಜಾಯಮಾನ ನಮ್ಮದಲ್ಲ.

ಇದನ್ನು ಪೌರಷದ ಪ್ರದರ್ಶನವೆನ್ನುವುದಾದರೂ ತೊಂದರೆ ಇಲ್ಲ!


ಕೋಟಿ ಕೋಟಿ ಹೃದಯ ಸಾಮ್ರಾಜ್ಯದ ಮಾರ್ಯಾದ

ಪುರುಷೋತ್ತಮನ ದೇವಸ್ಥಾನದ

ಮೇಲೆಯೆ ಮಸೀದಿ ನಿಂತಿದ್ದರೆ, ನೋಡುತ್ತಾ ಸುಮ್ಮನಿರಿ ಅಂದರೆ

ಆಗುವುದಿಲ್ಲ!ನಮ್ಮನ್ನು ಪರಧರ್ಮ ಅಸಹಿಷ್ಣು ಅಂದರೂ ತೊಂದರೆ ಇಲ್ಲ.

ನಮ್ಮ ಸಹಿಷ್ಣಿತೆಗೆ ಸಿಕ್ಕ ಮರ್ಯಾದೆ ಎಂದು ಸುಮ್ಮನಾಗುತ್ತೇವೆ.


ದೇಶ ವೀಭಜನೆಯ ಕರಾಳ ಕಥೆಯೆ ಹೇಳುತ್ತದೆ

ಎಷ್ಟು ಜನ ಹಿಂದುಗಳ ಮಾರಣ ಹೋಮ ನಡೆಯಿತೆಂದು

ದೇಶದೊಳಗಿದ್ದು ದೇಶ ದ್ರೋಹವೆಸಗುವವರಿಗೂ ಮನ್ನಿಸಿ

ನಮ್ಮವರೆಂದು ಪೊರೆದೆವು.

ಆದರೂ ನಮ್ಮನ್ನು ಜರಿದಿರಿ.ಪರವಾಗಿಲ್ಲ!!!


ನಮ್ಮನ್ನು ಜರಿದರೂ ಅಸಹಿಷ್ಣು ಅಂದರೂ ಪರವಾಗಿಲ್ಲ!

ತೊಂದರೆ ಇಲ್ಲ!!

Tuesday, August 4, 2020

ಮುಕ್ತದ ಹಪಾ ಹಪಿಯೂ...

This was published in Karmaveera Aug -2 -2020 issue
*******************************************

ಇಳಿ ಸಂಜೆಯ ಮಳೆ ನಿಲ್ಲುವುದಿಲ್ಲವಂತೆ
ಹಾಗೆ ನಿಂತರೂ ಘಂಟೆಗಳವರೆಗಿನ ಘನ ಮಳೆ ಯಂತೆ
ಕಾನನ ಹೊಕ್ಕಾಗಿತ್ತು ದಾರಿ ಸವಿಸಲೆ  ಬೇಕಾಗಿತ್ತು !!

ಆಕಾಶಕ್ಕೆ ತೂತು ಬಿದ್ದಂತೆ ಮಳೆ ಹೊಯ್ಯುತಿದ್ದರೆ
ಮುಸಲ ಧಾರೆಯೆ ಸೈ ಮತ್ತು ಕುಂಭ ದ್ರೋಣವೂ ಹೌದು
ಅದರ ಮೇಲೆ  ಕೇವಲ ಮಿಂಚು ಹುಳುವಿನ ಬೆಳಕು !

ಅಕ್ಕ ಪಕ್ಕದಲಿ ಆಸರೆಗೆ ಸ್ಥಳವಿಲ್ಲ ಎಲ್ಲಿಯೂ
ಮುಂದೆ ನೋಡಿದರೆ ದಾರಿಯೆ ಸುಳಿಯದು
ಹಿಂತುರಿಗಿ ನೋಡಿದರೆ ಏನೇನು ಕಾಣದು  !

ಕಾರ್ಗತ್ತಲ ಕಾನನದ ಪಯಣವು ಶೂನ್ಯದಲ್ಲಿ ನಿಂತಂತೆ !!
ದಾರಿ ಕಾಣದೆ ನಿಂತಲ್ಲೆ ನಿಂತು ಬಂಧನದಂತೆ
ಯ್ಯಾರು ನನ್ನ ತಲುಪದಿರುವ  ಮುಕ್ತದಂತೆ !

ಈ  ಪರಿಸ್ಥಿತಿ ಮುಕ್ತವೆಂದು ಸಂತೈಸಿ ಕೊಂಡೆ
ಮರುಕ್ಷಣವೆ ನುಸುಳಿತ್ತು ಮುಕ್ತವೂ ಬಂಧನವೆಂದು
ಮುಕ್ತದ ಹಪಾ ಹಪಿಯೂ ಬಂಧನವೆ!!

Monday, February 24, 2020

Poem which was published in VIKRAMA 23rd Feb 2020.I Support CAA.
***********************************************************
ಗುರುತು ಕೇಳುತ್ತೇವೆ ಅಷ್ಟೆ!!!

ಇದು ನಮ್ಮನಿಮ್ಮೆಲ್ಲರ ನಾಡೆ
ಇಂದು ನಿನ್ನಯಿಂದಿಲ್ಲ ಸಾವಿರಾರು ವರ್ಷಗಳಿಂದಲೂ
ನಾವು ನೀವೇಲ್ಲರೂ ಒಟ್ಟಾಗಿ ಬದುಕ ಕಟ್ಟಿ
ಬಾಳ್ವೆ ಮಾಡಿದಿವಿ!!!
ಅಂದು-ಇಂದು-ಎನ್ನದೆ ಹಿಂದೆ ಮುಂದೆ ನೋಡದೆ
ಪರಕೀಯರ ಆಕ್ರಮಣವಾದಾಗ ಘರ್ಜಿಸಿ ಒಂದಾಗಿ
ಮುಂದಾಗಿ ದಾಳಿ ಮಾಡಿದಿವಿ,

ಕಾಲನ ಗತಿಯೊಳಗೆ ನೊಂದು ಬೆಂದು
ಹಿಂದು-ಮುಂದು ನೋಡದೆ ಇದ್ದೆಲ್ಲವನೂ ತೊರೆದು
ಉಟ್ಟ ಬಟ್ಟೆಯೊಳಗೆ ಒಡಲ ಮರಿಗಳೊಡನೆ
“ನಮಗಾರು ಗತಿಯಿಲ್ಲ” ವೆಂದು ದೇಹಿ ಎನ್ನುತಲೆ
ಒಳ ಬಂದಿರಿ!!!
ಗಂಜಿಕೊಟ್ಟೆವು ಅನ್ನ ಕೊಟ್ಟೆವು ನೆಮ್ಮದಿಯಾಗಿ ಮಲಗಿರಲು
ನಿಮ್ಮ ಬಿಡಾರಗಳ ಕಾಯ್ದೆವು!!
ಇದು ನಾವು ನಮ್ಮ ಭಾರತವು!!!

ದೇಹಿ ಎಂದರೆ ನಿಮಗಿದೋ ಇಲ್ಲಿ ಆಶ್ರಯ!
ರಾಮನಾಳಿದ ನಾಡಲಿ ರಾಮನ ಸಂತಾನಕ್ಕೆ
ಇದೋ ನಿಮ್ಮ ಭೂಮಿ ಇಲ್ಲಿದೆ ನಿಮ್ಮ ಹಕ್ಕು
ಗುರುತು ಕೇಳುತ್ತೇವೆ ಅಷ್ಟೆ ನೀವು ಓಡಿ ಬಂದಿದಕ್ಕೆ
ದೇಹಿ ಎಂದು ಅಂಗಲಾಚಿ ಬೇಡಿದ್ದಕ್ಕೆ!!!
ಇಲ್ಲಿಯ ನಮ್ಮ ನಿಮ್ಮ ನಡುವಿನ ಭಾತೃತ್ವಕ್ಕೆ
ಯಾವತ್ತು ಕುಂದಿಲ್ಲ,ಆದರೆ ಓಡಿ ಬಂದವರಗೆ
ಗುರುತು ಕೇಳುತ್ತೇವೆ ಅಷ್ಟೆ!!!

Sunday, December 22, 2019

Published in 25th Dec Mangala
*************************************************************
ಆಸ್ಪೋಟ

ಬೆಟ್ಟದ ತುದಿಯೇರಲು
ಆಸೆ ಪಟ್ಟು ಬೆಟ್ಟದ ತಪ್ಪಲಲ್ಲಿ ನಿಂತು
ತುದಿಯ ನೋಡಿದೆ.
ಆಗದು ಎಂದು ಕೈ ಚೆಲ್ಲಿ ಕುಳಿತರೂ
ಮೈ ಒಳಗಿನ ಬೆಂಕಿ ತಿವಿದು ತಿವಿದು ಎಬ್ಬಿಸಿತ್ತು!
ಮೊಗಮ್ಮಾಗಿ ನಿದ್ದೆ ಹೋದೆ.
ಆದರೆ ಕನಸಲಿ ಕಾಡಿ ಬಂತು ಬೆಟ್ಟ ಮತ್ತು ಬೆಟ್ಟದ ತುದಿ.

ಮತ್ತೊಮ್ಮೆ ತಪ್ಪಲಲಿ ನಿಂತು ನೋಡಿದೆ
ಅದೇ ಎತ್ತರ ಅಷ್ಟೆ ಜಡ ಆಗಲಿಲ್ಲ
ಹಿಂತಿರುಗಿ ಹೊರಟುಬಿಟ್ಟೆ.
ಬೆಟ್ಟ ಕನಸಲಿ ಮತ್ತೊಮ್ಮೆ ಕಾಡಿತು, ನಿರಾಳ ನಿದ್ದೆಗೆ ಅಡ್ಡಿಯೊಡ್ಡಿ

ಈಗ ಬೆಟ್ಟದ ತಪ್ಪಲಲಿ ನಿಂತು ನೋಡಲಿಲ್ಲ
ನೇರ ಹತ್ತುವ ಸಾಹಸಕ್ಕಿಳಿದೆ.
ಕೆಲ ಹೊತ್ತಿನ ನಂತರ ಸಪಾಟದ ಮೆಟ್ಟಿಲುಗಳಿದ್ದವು
ಕೆಲಸ ಸುಲಭವಾಯಿತು, ಮನಸು ಹಗುರವಾಯಿತು.
ಸರ ಸರನೆ ಹತ್ತಿ ಬಿಟ್ಟೆ ಬೆಟ್ಟ.
ಕೆಲವೇ ಕ್ಷಣಗಳಲಿ ತುದಿ ತಲುಪಿದ್ದೆ.

ಅಲ್ಲಿ!
ಆ ತುದಿಯಲ್ಲಿ ಸಣ್ಣಗೆ ನಡುಗುತಿರುವ ಭೂಮಿ.
ಹತ್ತಿರಕ್ಕೆ ಹೋಗುವ ಧೈರ್ಯ ಬರಲಿಲ್ಲ.
ಒಂದೆ ಒಂದು ಹೆಜ್ಜೆ ಮುಂದೆ ಇಟ್ಟು
ನೋಡಿದರೆ ಮೊದಲು ಬೂದಿ.
ಬೂದಿಯ ಕೆಳಗೆ ಧಗಧಗಿಸುವ ಲಾವ!!!
ಭುಗಿಲೇಳುವ ಸಮಯ.
ಬೆಟ್ಟವೇರಿದ ವೇಗಕ್ಕಿಂತ ಕೆಳಗಿಳಿಯುವ ಪ್ರಯತ್ನ ಮಾಡಿದೆ.
ಇನ್ನೂ ಬೆಟ್ಟದ ತುದಿ ಇಳಿದಿರಲಿಲ್ಲ.
ಅಹೊತ್ತಿಗಾಗಲೆ ಆಸ್ಪೋಟ!!!

Thursday, November 14, 2019

೨೦೧೯ ಕರ್ಮ ವೀರ  ಕನ್ನಡ  ರಾಜ್ಯೋತ್ಸವ  ಕವನ  ಸ್ಪರ್ಧೆ  ತೀರ್ಪುಗಾರ   ಮೆಚ್ಚುಗೆ   ಪಡೆದ  ಕವಿತೆ
****************************************************************************

ವೈತರೇಣೆಯ ನದಿ ಮತ್ತು ಕನಸುಗಳ ವಿಮೆ....!

ಮೆದುಳ ಸುರಳಿಯಲ್ಲಿ ಹೊಳೆದು
ನಿದಿರೆಯ ಮಬ್ಬಲ್ಲೆ ಘಟಿಸಿದಂತೆ ಬೆಳೆದು
ಸಾಕಾರವಾಗದೆಂದೆ ಅರೆಬರೆಯಾಗಿದ್ದೆ -
ಕೊನೆಗೊಳ್ಳುವುದಕ್ಕೆ ಗೊತ್ತು ಗುರಿಯಿಲ್ಲ! * (ಕನಸುಗಳು)

ಮಣಿಕರ್ಣಿಕಾ ಘಾಟಿನ ಹೊಗೆ ಘಾಟಲ್ಲೆ
ದೇಹ ಬಿಟ್ಟಾತ್ಮವು ಸುಪ್ತವಾಗಿ ಗುಪ್ತವಾಗಿ
ಗಮ್ಯದಡಿಗೆ ಚಲಿಸದೆ ನಿಲ್ಲುವುದೆ?
ವೈತರೇಣೆಯ ನದಿಯ ರಕ್ತ, ಕೀವು, ಎಲುಬು, ಮಾಂಸ, ಮಜ್ಜಲೆಗಳ
ಮಡುವಲಿ ಬೇಡವೆಂದರೂ ಕರ್ಮ ಮುಳುಗೇಳಿಸದೆ ಬಿಡುವುದೆ?. *(ಆತ್ಮ)

ಲಂಗು ಲಗಾಮು ಇಲ್ಲದೆ ಬೆಳೆದ ಕನಸು
ರಾಗ ದ್ವೇಷಗಳಲ್ಲೆ ಬೆರೆತು ದೂರ ದೂರ ಸಾಗಿ -
ಮನುಷತ್ವವೆ ಮರೆತು ಎಲ್ಲೆಲ್ಲಿಯೊ ಕಳೆದು ಹೋಗುವ
ಮಾಗದ ಬಾಗದ ಕನಸುಗಳಿಗೆ ಶುಲ್ಕವಿಲ್ಲ!!!

ಆತ್ಮವ ದೂರ ದೂರಕೆ ಎಳೆದು-
“ಮಾಡುದ್ದೋಣ್ಣೊ ಮಹಾ ರಾಯ” ಎಂದು
ಕೀವು, ರಕ್ತದ ಮಡುವಲಿ ಬಿದ್ದು-
ಕುದ್ದು ಹೋಗುತಿಹವು ಆತ್ಮಗಳು ಶಿಕ್ಷೆಯಲಿ ಬೆಂದು
ಆ ಲೋಕದಲಿ ಯಾವ ರೀಯಾಯಿತಿಯೂ ಇಲ್ಲ!!!!

ವೈತರೇಣೆಯ ನದಿಯ ಆ ದಾರಿಯಲಿ
ಏನೆ ಆದರೂ ವಿನಾಯಿತಿ ಕೇಳಿ
ಕನಸಿನರಮನೆಗೆ ಶುಲ್ಕ ಕಟ್ಟದೆ ಕನಸಲೇನೇನೊ ಕಟ್ಟಿ
ಅರ್ಥವಾದುದಕೆ ಅಪಾರ್ಥದಲೇನೋ ಭಾವಿಸಿ –
ಕಾಯಿಸಿ ಬೇಯಿಸಿ ಹುರಿಯುವ ಆ-

ಪಾಷದ ಭಾಷೆಗೆ ರಿಯಾಯಿತಿಯ ಮಾತಿಲ್ಲ
ಕೊನೆಗೆ ಕಾಣುವ ಕನಸುಗಳಿಗೆ ವಿಮೆಯೂ ಇಲ್ಲ!!!

Tuesday, October 29, 2019

---ಕೊಲೆಯಾ ಇಲ್ಲವೆ ಅತ್ಮಹತ್ಯೆಯಾ?

WOn First prize in PRAJA PRAGATHI(DAILY) on the Deepavali Occation -2019
*************************************************************
---ಕೊಲೆಯಾ ಇಲ್ಲವೆ ಅತ್ಮಹತ್ಯೆಯಾ?

ಆ ಕಾಡು ಬಂಡೆಯ ಮೇಲೆ
ನಾಗರಗಳು ಮೂಡಿದ್ದವು.
ನಿಸ್ತೇಜನಾಗಿ ನೋಡುತ್ತಲಿದ್ದೆ ನೋಡುತ್ತಲೆ ಇದ್ದೆ...
ಚಾಂಚಲ್ಯದಲ್ಲಿ ಜಡವಾಗಿ ಜಡದಲ್ಲಿ ಚಂಚಲಿಸಿ
ಮೋಡದಲ್ಲಿ ಅಗ್ನಿಯಾಗಿ ಅಗ್ನಿಯಲ್ಲಿ
ಮಳೆ ಹುಟ್ಟಿದಂತಾಯಿತು !

ನಾಗರಗಳು ಪ್ರೇಮಿಸ ಹತ್ತಿದವು-
ಪ್ರೇಮದ ಉತ್ತುಂಗ ಶಿಖರವನು ಏರಿದವು
ಬಿಸಿಲೇರಿದಂತೆ ಮಿಥುನದ ಪ್ರಮಾಣವೂ
ಹೆಚ್ಚಾಯಿತು!
ಕಣ್ಣು ತಿಕ್ಕಿ ಕೊಳ್ಳುವಷ್ಟರಲ್ಲಿ
ಅಲ್ಲಿ ನಾಗರಗಳಿರಲಿಲ್ಲ!
ರೂಪಕಗಳ ಕೊಲೆಯಾ ಇಲ್ಲವೆ ಅತ್ಮಹತ್ಯೆಯಾ?

ಮನದ ಒಡೆದ ಬಿಂಬ
ಮುಂದೆ ನಿಂತು ಆತ್ಮ ಸಾಕ್ಷಿಯಂತಾಯಿತು!
ಕಣ್ಣ ಮುಂದಿರುವ ಸತ್ಯ ಮಿಥ್ಯದಂತೆ ಕಂಡು
ಜಾಣ ಕುರುಡು ತೋರಿಸಿ ಅನುಕೂಲ ಸಿಂಧುವಿನಂತೆ
ಮೆರೆದು-‘ಬದುಕೆಂದು ಬರಡು’!
ರೂಪಕಗಳ ಕೊಲೆಯಾ ಇಲ್ಲವೆ ಅತ್ಮಹತ್ಯೆಯಾ?

ಬೆಂಕಿಯ ಕೆನ್ನಾಲಿಗೆಗೆ
ಧಗ ಧಗಿಸಿ ಹೊತ್ತಿ ಉರಿದು ಸುಟ್ಟು ಭಸ್ಮವಾಯಿತು!
ಉಸಿರು ತಿರುಗಿಸಿಕೊಳ್ಳುವಷ್ಟರಲ್ಲಿ
ಬೂದಿಯಿಂದ ಜೀವ ಅವಿರ್ಭವಿಸಿ ಆಶ್ಚರ್ಯವಾಯಿತು!
ರೂಪಕಗಳ ಕೊಲೆಯಾ ಇಲ್ಲವೆ ಅತ್ಮಹತ್ಯೆಯಾ?